ಸಾಯಿಬಾಬಾ ಮುಸ್ಲಿಂ ಎಂಬುದಕ್ಕೆ ಆಧಾರಗಳಿಲ್ಲ, ಸುಪ್ರೀಂ ಕೋರ್ಟ್ನಲ್ಲಿ ಸಾಯಿ ಟ್ರಸ್ಟ್ ಕ್ಷಮೆ ಕೇಳಿಲ್ಲ
“ಸಾಕ್ಷ್ಯದ ಆಧಾರದಲ್ಲಿ ಸಾಯಿಬಾಬಾ ಮುಸ್ಲಿಂ ಎಂದು ಸಾಬೀತಾಯಿತು. ಸುಪ್ರೀಂ ಕೋರ್ಟ್ನಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿಯ ಕ್ಷಮೆಯಾಚಿಸಿದ ಸಾಯಿ ಟ್ರಸ್ಟ್… ಹಿಂದೂಗಳು ಎಲ್ಲಾ ದೇವಾಲಯಗಳಿಂದ ಸಾಯಿಬಾಬಾರವರ ವಿಗ್ರಹವನ್ನು ತೆಗೆಯಲು ಪ್ರಾರಂಭಿಸಿದರು. ಅಬ್ದುಲ್ ರ ಮಕ್ಕಳು ಮಾತ್ರ ಸಾಯಿಬಾಬಾನನ್ನು ಪೂಜಿಸುತ್ತಾರೆ” ಎಂಬ ಬರಹದೊಂದಿಗೆ ವಿಡಿಯೋವೊಂದು ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಹಿಂದೂ ರಾಷ್ಟ್ರ ಶಕ್ತಿ ಕಾರ್ಯಕರ್ತರು, ‘ಶಿರಡಿ ಸಾಯಿಬಾಬ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ್ದರಿಂದ ಹಿಂದೂ ದೇವಸ್ಥಾನಗಳಲ್ಲಿ ಅವರ ಮೂರ್ತಿಗಳನ್ನು ತೆಗೆಯಬೇಕು’ ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸುವುದನ್ನು ನೋಡಬಹುದಾಗಿದೆ. ಈ ವಾದದ…