Fact Check| ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಕೊನೆಯ ಕ್ಷಣಗಳು ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಮೇಕಪ್ ಕಲಾವಿದೆಯದ್ದು

ಕೋಲ್ಕತ್ತಾ ಆರ್‌‌ಜಿ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊಲೆ ಹಾಗೂ ಅತ್ಯಾಚಾರಕ್ಕೊಳಗಾದ ವೈದ್ಯಕೀಯ ವಿದ್ಯಾರ್ಥಿನಿಯ ಜೀವನದ ಕೊನೆಯ ಕ್ಷಣಗಳು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕೋಲ್ಕತ್ತಾ ಮೂಲದ ಮೇಕಪ್ ಕಲಾವಿದೆ ಝೀನತ್ ರಹ್ಮಾನ್‌ ಅವರದ್ದು ಎಂದು ಗುರುತಿಸಲಾಗಿದೆ. ಸಿನೆಮಾ ನಟಿಯರ ಮೇಕಪ್ ಹಾಗೂ ಉಡುಗೆಯ ನಕಲು, ಭೀಕರ ಘಟನೆಗಳು ಹಾಗೂ ಸಿನೆಮಾದ ತುಣುಕುಗಳನ್ನು ಮರು ಸೃಷ್ಟಿಸುವ ಕೆಲಸವನ್ನು ಝೀನತ್ ರಹ್ಮಾನ್ ಮಾಡುತ್ತಾರೆ. 2020ರಿಂದ ತಮ್ಮ ಇನ್ಸ್ಟಾ…

Read More

Fact Check | ಪಾಕಿಸ್ತಾನದಲ್ಲಿ ಬೆಲ್ಜಿಯಂ ಮಹಿಳೆಯ ಮೇಲೆ ಅತ್ಯಾಚಾರ ಎಂದು ಮತ್ತೊಂದು ಪ್ರಕರಣದ‌ ಫೋಟೋ ಹಂಚಿಕೆ

“ಈ ಬೆಲ್ಜಿಯಂ ಮಹಿಳೆ ಪಾಕಿಸ್ತಾನಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಪಾಕಿಸ್ತಾನಿ ಮುಸ್ಲಿಮರು ಅವರನ್ನು ಅಪಹರಿಸಿ 5 ದಿನಗಳ ಕಾಲ ಅತ್ಯಾಚಾರ ಮಾಡಿ, ನಂತರ ಅವರ ಕೈಗಳನ್ನು ಕಟ್ಟಿ ನಿರ್ಜನ ರಸ್ತೆಯಲ್ಲಿ ಬಿಟ್ಟು ಓಡಿಹೋದರು. ಇದನ್ನು ಕಂಡ ಅಪರಿಚಿತ ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ದೇಶವನ್ನು ಲೆಕ್ಕಿಸದೆ, ರಾಕ್ಷಸರು ಒಂದೇ ಆಲೋಚನೆಯನ್ನು ಹೊಂದಿದ್ದಾರೆ. ಏಕೆಂದರೆ ಅವರೆಲ್ಲರೂ ಒಂದೇ ಸಿದ್ಧಾಂತವನ್ನು ನಂಬುತ್ತಾರೆ.” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನೋಡಿದ ಹಲವರು ಇದು ನಿಜವಾದ ಘಟನೆ ಎಂದು…

Read More

Fact Check | ಕಾಣೆಯಾದ ಮಗನಿಗಾಗಿ ಪ್ರತಿಭಟಿಸಿದ ಬಾಂಗ್ಲಾದ ಮುಸ್ಲಿಂ ವ್ಯಕ್ತಿಯನ್ನು ಹಿಂದೂ ಎಂದು ಸುಳ್ಳು ಹರಡಿದ ANI

“ಬಾಂಗ್ಲಾದೇಶ: ತನ್ನ ಕಾಣೆಯಾದ ಮಗನ ಪೋಸ್ಟರ್‌ನೊಂದಿಗೆ ಪ್ರತಿಭಟಿಸುವ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರೊಬ್ಬರು “ನಾನು ನನ್ನ ಜೀವವನ್ನು ನೀಡುತ್ತೇನೆ, ಆದರೆ ನನ್ನ ಮಗುವಿಗೆ ನ್ಯಾಯ ಸಿಗಬೇಕು. ನನ್ನ ಮಗು ಎಲ್ಲಿದೆ? ನನ್ನ ಮಗುವಿನ ಬಗ್ಗೆ ವಿಚಾರಿಸಲು ನಾನು ಮನೆಯಿಂದ ಮನೆಗೆ ಹೋಗುತ್ತಿದ್ದೇನೆ, ಆದರೆ ಯಾರೂ ನನ್ನ ಮಾತುಗಳನ್ನು ಕೇಳಲು ತಯಾರಿಲ್ಲ.” ಎಂದು ANI ಕಿರು ವರದಿಯನ್ನು ಎಕ್ಸ್‌ನಲ್ಲಿ  ಪೋಸ್ಟ್‌ ಮಾಡಿ ಅಳಿಸಿ ಹಾಕಿದೆ. ಇದನ್ನ ನೋಡಿದ ಹಲವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಹೀಗಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.  ANI…

Read More

Fact Check | ಹಿಂದೂಗಳು ಬಾಂಗ್ಲಾದೇಶದಿಂದ ದೋಣಿಗಳಲ್ಲಿ ಪಲಾಯನ ಮಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು 29 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ, ಈ ವಿಡಿಯೋ ಮೂಲಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಅಲ್ಲಿನ ಹಿಂದೂಗಳು ದೋಣಿಗಳಲ್ಲಿ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕೂಡ ಹಲವು ದೋಣಿಗಳು ಸಂಚರಿಸುತ್ತಿರುವುದನ್ನು ನೋಡಬಹುದಾಗಿದ್ದು, ಇದು ಇತ್ತೀಚೆಗಿನ ವಿಡಿಯೋ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ. الهندوس يفرون هرباً من بنجلادش بعد تعرض الكثير منهم الى جرائم بشعة على يد المسلمين! …… pic.twitter.com/pODjSuNh6p —…

Read More

Fact Check | ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ‘ಹಿಂದೂಗಳ ಮೇಲೆ ದಾಳಿ’ ಎಂದು ಹಂಚಿಕೆ

“ಬಾಂಗ್ಲಾದೇಶದಲ್ಲಿ ಪ್ರತಿದಿನವೂ ಪರಿಸ್ಥಿತಿ ಕೈ ಮೀರುತ್ತಿದೆ. ಅಲ್ಲಿನ ಹಿಂದುಗಳ ದೌರ್ಜನ್ಯ ದರ್ಪಗಳು ಹೆಚ್ಚಾಗುತ್ತಿದ್ದು, ಬಾಂಗ್ಲಾದೇಶದ ಮುಸಲ್ಮಾನರು ಅಮಾಯಕ ಹಿಂದುಗಳ ನೆತ್ತರು ಹರಿಸುತ್ತಿದ್ದಾರೆ. ಈ ವಿಡಿಯೋ ನೋಡಿ ಇಲ್ಲಿ ಸತ್ತು ಬಿದ್ದಿರುವವರೆಲ್ಲರೂ ಹಿಂದೂ ಹೆಣ್ಣುಮಕ್ಕಳು. ಇವರನ್ನು ಕಂಡ ಕಂಡಲ್ಲಿ ಬಾಂಗ್ಲಾದ ಮುಸಲ್ಮಾನರು ಕೊಂದು ಹಾಕಿದ್ದಾರೆ.” ಎಂದು ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಈ ವಿಡಿಯೋದಲ್ಲಿ ಹಲವು ಹೆಂಗಸರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ಅವರ ಸುತ್ತಮುತ್ತಲಿರುವವರು ಜೋರಾಗಿ ಅಳುತ್ತಿರುವುದನ್ನು ನೋಡಬಹುದಾಗಿದೆ. ವೈರಲ್ ವಿಡಿಯೋದಲ್ಲಿನ ಬರಹವನ್ನು ನೋಡಿ ಹಲವು ಮಂದಿ…

Read More

Fact Check | ಬಾಂಗ್ಲಾದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂಬ ವಿಡಿಯೋ ಸುಳ್ಳು

“ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ಇದರ ವಿಡಿಯೋವನ್ನು ನೋಡಿ, ಹೇಗೆ ಇಸ್ಲಾಂಗೆ ಮತಾಂತರಗೊಳ್ಳದವರನ್ನು ರಹಸ್ಯವಾಗಿ ಕೊಂದು ಹಾಕಲಾಗುತ್ತಿದೆ? ಈ ಬಗ್ಗೆ ಭಾರತದಲ್ಲಿನ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯಗಳಿಗೆ ತಲೆಬಾಗಲು ಸಿದ್ಧರಾಗಬೇಕಾಗುತ್ತದೆ!” ಎಂಬ ಟಿಪ್ಪಣಿಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. बांग्लादेश में किस तरह हिन्दुओं को बन्धक बनाकर मुसलमान बनाय जा रहा हैं। pic.twitter.com/6owf8CcMGk — बिजेंद्र सिंह चौधरी 💚मोदी…

Read More

Fact Check | ಇದು ಬಾಂಗ್ಲಾದ ಹಿಂದೂಗಳ ರ್ಯಾಲಿ ಅಲ್ಲ, ಬದಲಿಗೆ ಛಾತ್ರಾ ಲೀಗ್‌ ರ್ಯಾಲಿ

“ಬಾಂಗ್ಲಾದೇಶದಲ್ಲಿ ಅಲ್ಲಿನ ಪ್ರಧಾನಿ ಪಲಾಯನಗೈದ ನಂತರ ಮುಸಲ್ಮಾನರು ಹಿಂದೂಗಳ ಮೇಲೆ ವ್ಯಾಪಕವಾಗಿ ದಾಳಿ ನಡೆಸುತ್ತಿದ್ದಾರೆ. ಇದು ಹಿಂದೂ ಸಮುದಾಯವನ್ನು ಬಾಂಗ್ಲಾದಿಂದ ಓಡಿಸುವ ಮತ್ತು ಹಿಂದೂಗಳನ್ನು ಹತ್ತಿಕ್ಕುವ ಕೆಲಸವಾಗಿದೆ. ಇದರ ವಿರುದ್ಧ ಇದೀಗ ಹಿಂದೂಗಳು ಒಗ್ಗಾಟ್ಟಾಗಿ ಬಹುದೊಡ್ಡ ಮೆರವಣಿಗೆಯನ್ನೇ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಬಾಂಗ್ಲಾದಲ್ಲಿ ಕೇಸರಿ ಅಲೆಯೇ ಎದ್ದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ढाका की सड़कों पर भगवा सैलाब बांग्लादेश में हिंदुओं पर हो रहे हमले के विरोध…

Read More

Fact Check | ಇಸ್ರೇಲ್‌ಗೆ ಅಮೆರಿಕ ತನ್ನ ವಿಮಾನವಾಹಕ ನೌಕೆ ಕಳುಹಿಸಿದೆ ಎಂದು ದಕ್ಷಿಣ ಕೊರಿಯಾ ಪೋಟೊ ಹಂಚಿಕೆ

ಈ ಫೋಟೋ ನೋಡಿ. ಇದು ಹೆಜ್ಬುಲ್ಲಾ ಮತ್ತು ಹೌತಿಗಳೊಂದಿಗಿನ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಬೆಂಬಲಿಸಲು ಯುಎಸ್ (ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕ) ತನ್ನ ವಿಮಾನವಾಹಕ ನೌಕೆಯನ್ನು ಕೆಂಪು ಸಮುದ್ರಕ್ಕೆ ಕಳುಹಿಸಿದೆ. ಆ ಮೂಲಕ ಅಮೆರಿಕ ಮತ್ತೊಂದು ನರಮೇಧಕ್ಕೆ ಸಿದ್ದವಾಗುತ್ತಿದೆ. ಈ ಬಗ್ಗೆ ಜಗತ್ತು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸುದ್ದಿಯನ್ನು ಆದಷ್ಟು ಎಲ್ಲರಿಗೂ ಶೇರ್‌ ಮಾಡಿ ” ಎಂದು ಫೋಟೋವೊಂದರ ಜೊತೆ ಟಿಪ್ಪಣಿ ಬರೆದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Are you ready to send your kids to…

Read More

Fact Check | ಸನಾತನಿಗಳ ಮೇಲಿನ ದಾಳಿ ಕುರಿತು ಪ್ರಧಾನಿ ಮೋದಿ ಹೇಳಿಕೆ ಹಳೆಯದ್ದಾಗಿದೆ

“ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚೆಗಿನ ಭಾಷಣದಲ್ಲಿ ಸನಾತನಿಗಳ ಮೇಲೆ ದಾಳಿ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅದರಲ್ಲೂ ಬಾಂಗ್ಲಾದೇಶದಲ್ಲಿ ನಡೆದ ಸನಾತನಿಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರಧಾನಿಗಳ ಧ್ವನಿ ಇತ್ತು. ಹೀಗಾಗಿ ಭಾರತದಲ್ಲಿ ಕೂಡ ಎಚ್ಚರಿಕೆಯಿಂದ ಇರುವಂತೆ ಪ್ರಧಾನಿ ಕರೆಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದೂಗಳು ಜಾಗೃತಿಯಿಂದ ಇರಬೇಕು ಎಂದು ಸ್ವತಃ ಪ್ರಧಾನಿಗಳೇ ಕರೆಕೊಟ್ಟಿರುವುದರಿಂದ ಎಲ್ಲರೂ ಸಿದ್ದರಾಗಿ” ಎಂಬ ಬರಹದೊಂದಿಗೆ ಟಿಪ್ಪಣಿಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದನ್ನು ಗಮನಿಸದಾಗ ಹಲವರು ಪ್ರಧಾನಿ ಮೋದಿ ಅವರೇ ಭಾರತದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಎಚ್ಚತ್ತುಕೊಳ್ಳಬೇಕು…

Read More

Fact Check | ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಹಿಂದೂಗಳು ಮತಾಂತರಗೊಳ್ಳುವಂತೆ ಹೇಳಿದ್ದಾರೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಬೌದ್ಧರ ಹತ್ಯಾಕಾಂಡ ಮುಂದುವರೆದಿರುವುದಕ್ಕೆ ನಾನು ವಿಷಾದಿಸುತ್ತೇನೆ, ಆದರೆ ಬಾಂಗ್ಲಾದೇಶವು ಇಸ್ಲಾಮಿಕ್ ರಾಷ್ಟ್ರವಾಗಿದೆ ಮತ್ತು ಸೆಕ್ಯುಲರ್ ಅಲ್ಲ. ಈಗ, ಮುಸ್ಲಿಮರು ಇಲ್ಲಿ ಬಹುಸಂಖ್ಯಾತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹಿಂದೂಗಳು ಮತ್ತು ಬೌದ್ಧರು ಸುರಕ್ಷಿತವಾಗಿ ಬದುಕಲು ಬಯಸಿದರೆ, ಅವರು ಇಸ್ಲಾಂಗೆ ಮತಾಂತರಗೊಳ್ಳಬೇಕು ಅಥವಾ ಭಾರತಕ್ಕೆ ಹೋಗಬೇಕು.” ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಹೇಳಿಕೆ ನೀಡಿದ್ದಾರೆ ಎಂದು ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ…

Read More