ಮೋದಿ

Fact Check: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ NDA ಸಮ್ಮಿಶ್ರವು 293 ಸ್ಥಾನಗಳನ್ನು ಪಡೆದುಕೊಂಡು 09 ಜೂನ್ 2024 ರಂದು ಸರ್ಕಾರವನ್ನು ರಚಿಸಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿ 1.52 ಲಕ್ಷ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಧಾನಿಯಾಗಿ ವಿವಿಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ…

Read More
ನೆಹರು

Fact Check: ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಾನು ಭಾಗವಹಿಸಿರಲಿಲ್ಲ ಮತ್ತು ವಿಭಜನೆಗೆ ಒಪ್ಪಿಕೊಂಡೆ ಎಂದು ಹೇಳಿಲ್ಲ

ಭಾರತದ ಮೊದಲ ಪ್ರಧಾನ ಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜವಹರಲಾಲ್ ನೆಹರು ಅವರ ಕುರಿತಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರತೀ ದಿನದಂತೆ ಹರಿಬಿಡಲಾಗುತ್ತಿದೆ. ಈಗ ” ಸ್ವಾತಂತ್ರ ಹೋರಾಟದಲ್ಲಿ ನನ್ನ ಯಾವುದೇ ರೀತಿಯ ಪಾತ್ರವಿಲ್ಲ… ದೊಡ್ಡ ದಾರಿಯಲ್ಲಿ ಪ್ರಧಾನಿಯಾಗುವ ಅವಕಾಶ ದಕ್ಕಿರುವುದರಿಂದ, ವಿಭಜನೆಗೆ ಒಪ್ಪಿಕೊಂಡೆ…” ಎಂದು ನೆಹರು ಅವರು ಸ್ವತಃ  ಒಪ್ಪಿಕೊಂಡಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ನಿಜವಾಗಿಯೂ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪಾತ್ರವೇನು ಇಲ್ಲ ಎಂದು ಹೇಳಿದ್ದಾರೆಯೇ…

Read More
Gwadar Port

Fact Check: ಪ್ರಾದೇಶಿಕ ಸ್ಥಿರತೆಯ ಕಾರಣಕ್ಕಾಗಿ 1950ರಲ್ಲೇ ಗ್ವಾದರ್ ಬಂದರನ್ನು ಕೊಳ್ಳಲು ಭಾರತ ನಿರಾಕರಿಸಿತು

ಇತ್ತೀಚೆಗೆ 1974ರಲ್ಲಿ ಮುಗಿದ ಕಚ್ಚತೀವು ದ್ವೀಪದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಗಮನ ಸೆಳೆದು ಅದು ಚರ್ಚೆಗೆ ಕಾರಣವಾಗಿತ್ತು. ಇಂದಿರಾ ಗಾಂಧಿಯವರು ಅದನ್ನು ಶ್ರೀಲಂಕಾ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದನ್ನು ಬಿಜೆಪಿಗರು ವಿರೋದಿಸಿದ್ದರು. ಇಂದು ಇಂಡಿಯಾ ಟುಟೆ “ಪಾಕಿಸ್ತಾನದ ಗ್ವಾದರ್ ಅನ್ನು 1950 ರ ದಶಕದಲ್ಲಿ  ಭಾರತಕ್ಕೆ ನೀಡಲಾಗಿತ್ತು” ಎಂಬ ಲೇಖನವನ್ನು ಪ್ರಕಟಿಸಿ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇದನ್ನು ಕನ್ನಡ ದುನಿಯಾ ಎಂಬ ಮಾಧ್ಯಮವು ಇಂಡಿಯಾ ಟುಟೆ ವರದಿಯನ್ನೇ ಕನ್ನಡಕ್ಕೆ ಅನುವಾದಿಸಿ “ಈಗಿನ ಪಾಕಿಸ್ತಾನದ ಗ್ವಾದರ್ ಬಂದರು ಸ್ವೀಕರಿಸಲು…

Read More
nehru

Fact Check: ಜವಾಹರ್‌ಲಾಲ್ ನೆಹರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬುದು ಸುಳ್ಳು

ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಅವರ ಪರಂಪರೆಯು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ವ್ಯವಸ್ಥಿತ ಆಕ್ರಮಣಕ್ಕೆ ಒಳಗಾಗುತ್ತಿದೆ. ಈ ದಾಳಿಯು ಬಹುಮುಖಿಯಾಗಿದ್ದು, ಇತಿಹಾಸದ ಆಧಾರರಹಿತ ಆರೋಪಗಳಿಂದ ಹಿಡಿದು ಅವಹೇಳನಕಾರಿ ಪ್ರತಿಪಾದನೆಗಳು ಮತ್ತು ಸುಳ್ಳುಗಳನ್ನು ಹರಡುವವರೆಗೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾರತದ ಪ್ರಗತಿಯಲ್ಲಿ ನೆಹರೂ ಅವರ ಕೊಡುಗೆಯೇ ಅಲ್ಪ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದರ ಭಾಗವಾಗಿ, ಜವಹರಲಾಲ್ ನೆಹರು ಅವರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬ ಪ್ರತಿಪಾದನೆಯು ಹಲವಾರು ವರ್ಷಗಳಿಂದ…

Read More
ನೆಹರೂ

Fact Check: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಸುಳ್ಳು ಹೇಳಿದ ಅಜಿತ್ ಹನುಮಕ್ಕನವರ್

ಜವಹರಲಾಲ್ ನೆಹರೂ ಅವರ ಕುರಿತು ಪ್ರತಿ ದಿನ ಒಂದಿಲ್ಲೊಂದು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿರುತ್ತದೆ. ಕೆಲವು ಕಿಡಿಗೇಡಿಗಳು ಇತಿಹಾಸವನ್ನು ತಿರುಚುವ ಸಲುವಾಗಿ ಅನೇಕ ಅರೋಪಗಳನ್ನು ಮಾಡುತ್ತಿರುತ್ತಾರೆ. ನೆಹರು ಅವರ ಕುರಿತ ಇಂತಹ ಅನೇಕ ಆರೋಪಗಳನ್ನು ಹೀಗಾಗಲೇ ಬಯಲು ಮಾಡಲಾಗಿವೆ. ಅವುಗಳನ್ನು ನೀವು ಇಲ್ಲಿ ಓದಬಹುದು. ಈಗ, ಅಸಲಿಗೆ ನೆಹರು ಅವರು ಕೇವಲ 14 ದಿನ ಮಾತ್ರ ಜೈಲು ವಾಸ ಅನುಭವಿಸಿದ್ದು ಮತ್ತು ಅವರು ಸಹ ನಭಾ ಜೈಲಿನಿಂದ ಹೊರಬರಲು ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು. ಎಂದು ಪ್ರತಿಪಾದಿಸಲಾಗುತ್ತಿದೆ. ಕನ್ನಡದ…

Read More

Fact Check | ನೆಹರುರವರಿಗೆ ಸ್ವಾಮಿ ವಿದ್ಯಾನಂದ ವಿದೇಹ ಕಪಾಳಮೋಕ್ಷ ಮಾಡಿದ್ದರು ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಜವಾಹರಲಾಲ್ ನೆಹರು ಅವರಿಗೆ ಸ್ವಾಮಿ ವಿದ್ಯಾನಂದ ವಿದೇಹ ಅವರು ಸಾರ್ವಜನಿಕ ಸಮಾರಂಭದಲ್ಲಿ ಕಪಾಳಮೋಕ್ಷ ಮಾಡಿದ್ದರು. ಆ ಸಂದರ್ಭದಲ್ಲಿ ಈ ಫೋಟೋ ಸೆರೆಹಿಡಿಯಲಾಗಿದೆ” ಎಂಬ ಪೋಸ್ಟ್‌ ವೈರಲ್‌ ಆಗಿದೆ. ಕಳೆದ ಹಲವು ತಿಂಗಳುಗಳಿಂದ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತ ಫ್ಯಾಕ್ಟ್‌ಚೆಕ್‌ ನಡೆಸಿದಾಗ ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು 1962 ರ ಬಿಹಾರದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಸಭೆಯ ಸಂದರ್ಭದಲ್ಲಿ ತೆಗೆಯಲಾಗಿದೆ. ಈ ಸಭೆಯಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ನೂಕುನುಗ್ಗಲು…

Read More

ಜವಹರಲಾಲ್ ನೆಹರೂರವರ ಕುರಿತ ಸರಣಿ ಸುಳ್ಳುಗಳು

ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರು ಭಾರತದ ಸ್ವತಂತ್ರ್ಯ ಚಳುವಳಿಯ ಮುಂಚೂಣಿ ನಾಯಕರಾಗಿ, ದಕ್ಷ ಆಡಳಿತಗಾರರಾಗಿ, ದೂರ ದೃಷ್ಟಿಯ ರಾಜಕಾರಣಿಯಾಗಿ ಮತ್ತು ಬರಹಗಾರರಾಗಿ ಹೆಸರುವಾಸಿಯಾದವರು. ಆದರೆ ಕಳೆದೊಂದು ದಶಕಗಳಿಂದ ಬೆಜೆಪಿಗರು ಮತ್ತು ಬಲಪಂಥಿಯರು ಸೇರಿ ನೆಹರೂರವರ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಈ ಮೂಲಕ ನೆಹರೂರವರ ಕೊಡುಗೆಗಳನ್ನು ಇತಿಹಾಸದಿಂದಲೇ ಅಳಿಸುವ ಹುನ್ನಾರ ನಡೆಯುತ್ತಿದೆ. ಆದರೆ ಹರಿದಾಡುತ್ತಿರುವ ಸುದ್ದಿಗಳ ಸುಳ್ಳೇನು? ಸತ್ಯವೇನೆಂದು ತಿಳಿಯೋಣ ಬನ್ನಿ. ಸುಳ್ಳು ೧: ನೆಹರೂರವರ ತಾಯಿ ಮುಸ್ಲಿಂ. ಅವರ ಹೆಸರು ಥುಸ್ಸು…

Read More
ನೆಹರೂ

ಜವಹರಲಾಲ್ ನೆಹರೂರವರು ಲಂಡನ್ ಪೌರತ್ವವನ್ನು ತೆಗೆದುಕೊಂಡಿದ್ದರು ಎಂಬುದು ಸುಳ್ಳು

ನೆನ್ನೆಯಷ್ಟೆ ದೇಶದಾದ್ಯಂತ ಮಕ್ಕಳ ದಿನಾಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರು ಸ್ವತಂತ್ರ್ಯ ಭಾರತಕ್ಕೆ ನೀಡಿದ ಕೊಡುಗೆಗಳನ್ನು, ಅವರ ದೂರದೃಷ್ಟಿಯ ಯೋಜನೆಗಳನ್ನು ಜನ ನೆನೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ನೆಹರೂ ವಿರೋಧಿಗಳು ಅವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ತಮ್ಮ ರಾಜಕೀಯ ಲಾಭಕ್ಕಾಗಿ ನೆಹರೂ ಮತ್ತು ಅವರ ಮನೆತನದವರ ಮೇಲೆ ಭಾರತೀಯರಲ್ಲಿ ದ್ವೇಷ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಈಗಾಗಲೇ ನೆಹರುರವರ ಕುರಿತ ಇಂತಹ ಹಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್‌ ಬಯಲುಗೊಳಿಸಿದೆ….

Read More

ಆಕಸ್ಮಿಕವಾಗಿ ನಾನು ಹಿಂದೂ! ಎಂದು ಜವಹರಲಾಲ್ ನೆಹರುರವರು ಹೇಳಿಲ್ಲ

ಕಳೆದ ಒಂದು ದಶಕಗಳಿಂದ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರುರವರ ಕುರಿತು ಇನ್ನಿಲ್ಲದ ಆರೋಪಗಳು ಕೇಳಿಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಬಿಜೆಪಿ ಬೆಂಬಲಿಗರು, ಬಲಪಂಥೀಯರು ದೇಶಕ್ಕೆ ನೆಹರೂರವರ ಕೊಡುಗೆಗಳು ಶೂನ್ಯ ಎನ್ನುವಂತೆ ಬಿಂಬಿಸುತ್ತಿದ್ದಾರೆ . ಇನ್ನೂ ನೆಹರುರವರ ಮೂಲ ಧರ್ಮ ಇಸ್ಲಾಂ, ಆತನೊಬ್ಬ ಅವಕಾಶವಾದಿ ರಾಜಕಾರಣಿ, ಸ್ತ್ರೀಲೋಲ ಹೀಗೆ ನಾನಾ ವಿಧವಾಗಿ ಪಂಡಿತ್ ನೆಹರೂರವರ ಇತಿಹಾಸವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ. ನಾನು ಶಿಕ್ಷಣದಿಂದ ಕ್ರಿಶ್ಚಿಯನ್, ಸಂಸ್ಕೃತಿಯಿಂದ ಮುಸ್ಲಿಂ, ಆಕಸ್ಮಿಕವಾಗಿ ಹಿಂದೂ! ಎಂದು ಜವಾಹರಲಾಲ್ ನೆಹರು ಹೇಳಿಕೊಂಡಿದ್ದಾರೆ ಎಂಬ…

Read More

ಗಾಂಧೀಜಿಯವರೊಂದಿಗೆ ರಾಹುಲ್‌ ಗಾಂಧಿ ಮಾತನಾಡಿದ್ದೇನೆಂದು ಸಮರ್ಥಿಸಿಕೊಂಡಿದ್ದಾರೆ ಎಂಬುವುದು ಸುಳ್ಳು

ರಾಹುಲ್‌ ಗಾಂಧಿಯವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂಬ ವಿಡಿಯೋವೊಂದು ವೈರಲ್‌ ಆಗಿದ್ದು, ಇದೀಗ ಆ ವಿಡಿಯೋ ಸುಳ್ಳು ಮತ್ತು ಬೇರೆ ವಿಡಿಯೋವೊಂದರ ಎಡಿಟೆಡ್‌ ವಿಡಿಯೋ ಎಂದು ತಿಳಿದ ತಕ್ಷಣ ಅವುಗಳನ್ನ ಸಾಮಾಜಿಕ ಜಾಲತಾಣದಿಂದ ತೆಗೆಯಲಾಗಿದೆ.   ಸುಳ್ಳು ; ರಾಹುಲ್‌ ಗಾಂಧಿ ಅವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಮತ್ತು ಮಹಾತ್ಮ ಗಾಂಧಿ ಅವರೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಹೊಂದಿದ್ದೆ, ಕೊನೆಗೆ ಗಾಂಧೀಜಿ ಅವರ ನಿಲುವು ಸರಿ ಇದೆ ಎಂದೆನೆಸಿತು…

Read More