ಡಾ. ಬಿ.ಆರ್ ಅಂಬೇಡ್ಕರ್

Fact Check: ಡಾ. ಬಿ.ಆರ್ ಅಂಬೇಡ್ಕರ್ ಅವರ “ಪಾಕಿಸ್ತಾನ ಅಥವಾ ಭಾರತದ ವಿಭಜನೆ” ಕೃತಿಯ ಕುರಿತು ಸುಳ್ಳು ಹಂಚಿಕೊಳ್ಳಲಾಗುತ್ತಿದೆ

ಡಾ. ಬಿ. ಆರ್ ಅಂಬೇಡ್ಕರ್ ಅವರು ನಮ್ಮ ದೇಶ ಕಂಡ ಮಹಾನ್ ಜ್ಞಾನಿಗಳಲ್ಲಿ ಒಬ್ಬರು. ಹಾಗೆಯೇ ಮಹಾಮಾನವತಾವಾದಿ ಎಂದೇ ಹೆಸರಾದವರು. ಭಾರತ ದೇಶದ ಸಂವಿಧಾನವನ್ನು ರೂಪಿಸುವಾಗ ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಅವಕಾಶ, ಗೌರವಗಳು ಕಲ್ಪಿಸಿಕೊಡುವ ಸಲುವಾಗಿ ನಮ್ಮ ದೇಶವನ್ನು ಧರ್ಮ ನಿರಪೇಕ್ಷತೆಯ ರಾಷ್ಟ್ರವನ್ನಾಗಿ ಮಾಡಿ ಭಾರತದ ವೈವಿದ್ಯತೆಗೆ, ಬಹುತ್ವಕ್ಕೆ ಮತ್ತು ಜಾತ್ಯಾತೀತತೆ ತತ್ವಕ್ಕೆ ಕಾನೂನಾತ್ಮಕವಾಗಿ ಮನ್ನಣೆ ನೀಡಿದವರು. ಆದರೆ, ಡಾ. ಬಿ.ಆರ್ ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳಿಗೆ ಸಂಬಂಧಿಸಿದಂತೆ ಅವರ ಬದುಕಿದ್ದ ಕಾಲದಿಂದ…

Read More
ಮಾಧವಿ ಲತಾ

Fact Check: ಚುನಾವಣಾ ಸೋಲಿನ ನಂತರ ಮಾಧವಿ ಲತಾ ಮುಸ್ಲಿಮರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಧವಿ ಲತಾ ಅವರು ಭಾರತೀಯ ಮುಸ್ಲಿಮರು ಭಯೋತ್ಪಾದಕರಾಗಲು ಸಾಧ್ಯವಿಲ್ಲ ಎಂದು ಹೇಳುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 2024 ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ತಾನು ಈ ಹಿಂದೆ ಅವಮಾನಿಸಿದ ಸಮುದಾಯದ ಬಗ್ಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋ ವೈರಲ್ ಆಗಿದೆ. ಮಾಧವಿ ಲತಾ ಅವರು AIMIMನ ಅಸಾದುದ್ದೀನ್ ಓವೈಸಿ ವಿರುದ್ಧ ಹೈದರಾಬಾದ್‌ನಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 3,38,087 ಮತಗಳ…

Read More
ಇಸ್ಲಾಮಿಕ್ ರಾಷ್ಟ್ರ

ಜನನ ನಿಯಂತ್ರಣ ಕಾನೂನನ್ನು ತರದಿದ್ದರೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಜೂಲಿಯನ್ ಅಸಾಂಜ್ ಹೇಳಿಲ್ಲ

ಬಹುತ್ವಕ್ಕೆ, ಸಾಮರಸ್ಯಕ್ಕೆ ನೆಲವೀಡಾಗಿರುವ ಭಾರತದಲ್ಲಿ ದಿನೇ ದಿನೇ ಮತೀಯ ದ್ವೇಷ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕೋಮುದ್ವೇಷ ಹರಡಿ ಹಲ್ಲೆಗಳು, ಬಹಿಷ್ಕಾರಗಳು ಮತ್ತು ಕೊಲೆಗಳ ಪ್ರಕರಣಗಳು ಸಹ ಹೆಚ್ಚಾಗಿ ಸಮಾಜದ ಸ್ವಸ್ಥ್ಯವೇ ಹಾಳಾಗುತ್ತಿದೆ. ಇತ್ತೀಚೆಗೆ, “ದೇಶದ ಮುಂದಿನ ಪ್ರಧಾನಿ ಎಷ್ಟೇ ರಾಷ್ಟ್ರೀಯವಾದಿಯಾಗಿದ್ದರೂ ಮುಸ್ಲಿಂ ಜನಸಂಖ್ಯೆಯ ಸ್ಫೋಟವನ್ನು ತಡೆಗಟ್ಟಲು ಚೀನಾ ಮತ್ತು ಮ್ಯಾನ್ಮಾರ್ ನಂತಹ ಒಂದು ಅಥವಾ ಎರಡು ಮಕ್ಕಳ ಕುಟುಂಬ ಯೋಜನೆ ಕಾನೂನನ್ನು ಅವರ ಸರ್ಕಾರ ಜಾರಿಗೆ…

Read More