Fact Check: ಕಾಂಗ್ರೆಸ್ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ ಎಂದು ನಕಲಿ ವರದಿ ಹಂಚಿಕೊಳ್ಳಲಾಗುತ್ತಿದೆ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಕಲಿ ಪತ್ರಿಕಾ ವರದಿಗಳನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಸುಳ್ಳು ಹೇಳಿಕೆಗಳನ್ನು ಪತ್ರಿಕಾ ವರದಿಯಂತೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಹಿಂದು ಮತ ಬೇಡ ಎಂದಿದ್ದಾರೆ ಎಂದು ಸಹ ನಕಲಿ ವರದಿ ಸೃಷ್ಟಿಸಲಾಗಿತ್ತು. ನಂತರ ಈ ಕುರಿತು ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಿದ ವರದಿಯಾಗಿಲ್ಲ. ಈಗ, “ಇಂಥ ಕೆಟ್ಟ ಆಡಳಿತ ನಾವು ನೋಡೇ ಇಲ್ಲ: ಹೈಕೋರ್ಟ್, ಹೈಕೋರ್ಟ್ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದೆ. ಸಿಎಂ ಅವರೇ ಇದು…