Fact Check | ಕಿರಣ್ ದೇವಿ ಬಳಿ ಅಕ್ಬರ್ ಪ್ರಾಣ ಭಿಕ್ಷೆ ಬೇಡಿದ್ದ ಎಂಬುದು ಹಸಿ ಸುಳ್ಳಿನ ಆರೋಪ
ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಸಲುವಾಗಿ ಕೆಲವೊಂದು ಕಟ್ಟುಕತೆಯ ಪೋಸ್ಟ್ಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಇಂತಹದ್ದೆ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಸಿ ಸುಳ್ಳಿನೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕಿರಣ್ ದೇವಿ ಮಹಾರಾಣ ಪ್ರತಾಪ್ ನ ಸಹೋದರ, ಶಕ್ತಿಸಿಂಗ್ನ ಮಗಳು ಮತ್ತು ಭಿಕನೇರ್ನ ರಾಜ ಪೃಥ್ವಿರಾಜ್ ರಾಥೋರ್ನ ಮಡದಿ ಮೀನಾಬಜಾರ್ ನಲ್ಲಿ ಹೋಗತ್ತಿದ್ದಾಗ ಎದುರಿನಿಂದ ಬಂದ ಅಕ್ಬರ್ ತನ್ನ ಸೈನಿಕರಿಗೆ ಕಿರಣ್ ದೇವಿಯನ್ನು ಎಳೆದುಕೊಂಡು ಬನ್ನಿ ಎಂದು ಆಜ್ಞೆ ಮಾಡಿದ, ಸೈನಿಕರು ಬರುವುದಕ್ಕೆ…