Fact Check | ವಾಟ್ಸ್‌ಆಪ್‌ನಲ್ಲಿ ಕಳುಹಿಸುವ ಗುಡ್ ಮಾರ್ನಿಂಗ್ ಸಂದೇಶಗಳ ಮೇಲೆ 18 % GST ಎಂಬುದು ಸುಳ್ಳು

“ವಾಟ್ಸ್‌ಆಪ್‌ನಲ್ಲಿ ರವಾನಿಸುವ ಗುಡ್‌ ಮಾರ್ನಿಂಗ್‌ ( ಶುಭೋದಯ ) ಸಂದೇಶಗಳ ಮೇಲೆ ಕೇಂದ್ರ ಸರ್ಕಾರ 18% GST ವಿಧಿಸಲು ಮುಂದಾಗಿದೆ. ಈ ಕುರಿತು ಪ್ರಖ್ಯಾತ ABP ನ್ಯೂಸ್‌ ಚಾನಲ್‌ ವರದಿ ಮಾಡಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ಸುದ್ದಿ ಎಬಿಪಿ ಸುದ್ದಿ ಸಂಸ್ಥೆಯಲ್ಲಿ ಬಂದಿರುವುದರಿಂದ ಬಹುತೇಕರು ಇದು ನಿಜವಿರಬಹುದು ಎಂದು ನಂಬಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇದೇ ರೀತಿಯ ಸುಳ್ಳು ಸುದ್ದಿಯನ್ನು…

Read More
ಡಿ.ಕೆ ಸುರೇಶ್

Fact Check: ಪ್ರಚಾರದ ವೇಳೆ ಡಿ.ಕೆ ಸುರೇಶ್ ಅವರು ಪೋಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂಬುದು ಹಳೆಯ ವಿಡಿಯೋ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಂತರ ಕ್ಷೇತ್ರಕ್ಕೆ ಯಾರು ಸಂಸದರಾಗಬಹುದು ಎಂಬುದು ತೀವ್ರ ಚರ್ಚೆಗೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ಸಿನಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ತಮ್ಮ ಮತ್ತು ಹಾಲಿ ಸಂಸದ ಡಿ. ಕೆ ಸುರೇಶ್ ಅವರು ಕಣಕ್ಕಿಳಿದರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಪರವಾಗಿ ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಅವರು ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯನವರು ಭಾಷಣವೊಂದರಲ್ಲಿ ಅಮಿತ್ ಶಾ ಒಬ್ಬ…

Read More

Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ

“ತಾರಿಖು ನೆನಪಿಡಿ ಮೋದಿ ಅವರು ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯನವರ ಧ್ವನಿಯಲ್ಲೇ ಈ ಮಾತು ಹೇಳಿರುವುದು ಸ್ಪಷ್ಟವಾಗಿದೆ. ಆದರೆ ವಿಡಿಯೋವಿನ ಪ್ರಾರಂಭ ಮತ್ತು ವಿಡಿಯೋದ ಕೊನೆಯು ಒಂದೇ ರೀತಿಯಲ್ಲಿರದೆ ಮಧ್ಯದಲ್ಲಿ ಪ್ರಸಾರವಾದ ರೀತಿಯಲ್ಲಿರುವುದು ಅನುಮಾನವನ್ನು ಹುಟ್ಟಿಸುತ್ತಿದೆ. ಆದರೂ ಸಾಕಷ್ಟು ಮಂದಿ ಈ ಹೇಳಿಕೆಯನ್ನು ಸಿದ್ದರಾಮಯ್ಯನವರೇ ನೀಡಿದ್ದಾರೆ ಎಂದು…

Read More

Fact Check | ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸದ ಹಿಂದೂ ಯುವತಿಗೆ ಕಿರುಕುಳ ಎಂಬ ವಿಡಿಯೋ ಕಿರುಚಿತ್ರದ್ದಾಗಿದೆ

“ಹಿಂದೂ ಯುವತಿಯೊಬ್ಬಳು ಬುರ್ಖಾ ಧರಿಸಿಲ್ಲವೆಂದು ಆಕೆಗೆ ಬಸ್‌ನಲ್ಲಿದ್ದ ಯುವಕರು ಕಿರುಕುಳ ನೀಡಿದ್ದಾರೆ. ಈಕೆ ಅದನ್ನು ಕಂಡಕ್ಟರ್ ಬಳಿ ಪ್ರಶ್ನಿಸಿದಾಗ, ಆತನು ಕೂಡ ಈಕೆ ಬುರ್ಖಾ ಹಾಕಿಲ್ಲವೆಂದು ಬಸ್‌ನಿಂದ ಇಳಿಸಿದ್ದಾನೆ..” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. So now Hindus are being forced to wear Burqa ? In #Bangladesh, during the month of #Ramadan, unveiled Hindu women who do not…

Read More

Fact Check | ED ಇಂದ ಬಂಧಿಸಲ್ಪಟ್ಟ ನಂತರ ಅರವಿಂದ ಕೇಜ್ರಿವಾಲ್ ತಮ್ಮ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ ಎಂಬ ಫೋಟೋ ನಕಲಿ

“ಈ ಫೋಟೋ ನೋಡಿ ಅರವಿಂದ್ ಕೇಜ್ರಿವಾಲ್ ಅವರು ED ಯಿಂದ ಬಂಧಿಸಲ್ಪಟ್ಟ ನಂತರ ತಾವು ಧರಿಸಿದ ಫ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ.”ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಪೋಸ್ಟ್‌ ಅನ್ನು ಬಿಜೆಪಿ ಬೆಂಬಲಿಗರು ಹಾಗೂ ಬಲಪಂಥೀಯ ಸಂಘಟನೆಯ ಕೆಲ ಮುಖಂಡರುಗಳು ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಗುತ್ತಿರುವ ಪೋಸ್ಟ್‌ನಲ್ಲಿ ಆಮ್‌ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ನಿಂದಿಸಲಾಗುತ್ತಿದೆ. ಸಾಕಷ್ಟು ಮಂದಿ ಕೋರ್ಟ್‌ ತೀರ್ಪು ಬರುವ ಮುನ್ನವೇ ಅರವಿಂದ್‌ ಕೇಜ್ರಿವಾಲ್‌…

Read More

Fact Check | ವಾಟ್ಸಾಪ್‌ಗೆ ಸಂಬಂಧಿಸಿದಂತೆ ಹರಿದಾಡುತ್ತಿವೆ ಹಲವು ಸುಳ್ಳು ಸುದ್ದಿಗಳು..!

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ, ವಾಟ್ಸಾಪ್‌ ಸಂದೇಶಗಳಿಗೆ ಸಂಬಂಧಿಸಿದಂತೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಹಲವರು ಇದನ್ನೇ ನಿಜವಾದ ಮಾಹಿತಿ ಎಂದು ನಂಬಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಸಂದೇಶದಲ್ಲಿ ಈ ಕೆಳಗಿನ ವಿಚಾರಗಳನ್ನು ಪ್ರಮುಖ ಅಂಶಗಳಂತೆ ಉಲ್ಲೇಖ ಮಾಡಲಾಗುತ್ತಿದೆ.  “ಸಂದೇಶಗಳಲ್ಲಿ ಪ್ರಸ್ತಾಪಿಸಿರುವ ಹೊಸ ನಿಯಮಗಳು ಈ ಕೆಳಗಿನಂತಿವೆ: 01. ಎಲ್ಲಾ ಕರೆಗಳು ರೆಕಾರ್ಡಿಂಗ್ ಆಗುತ್ತಿವೆ. 02. ಎಲ್ಲಾ ಕರೆ ರೆಕಾರ್ಡಿಂಗ್‌ಗಳನ್ನು ಉಳಿಸಲಾಗುತ್ತದೆ. 03. WhatsApp, Facebook, Twitter ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ…

Read More

Fact Check | ಮದರಾಸದಲ್ಲಿ ಭಾರೀ ಶಸ್ತ್ರಾಸ್ತ ಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿದ ಕಿಡಿಗೇಡಿಗಳು..!

“ಉತ್ತರ ಪ್ರದೇಶದ ಬಿಜ್ನೋರ್‌ನ ಮದರಾಸ ಮೇಲೆ ನಡೆದ ದಾಳಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಪತ್ತೆ.!, ಆರು ಧರ್ಮ ಗುರುಗಳನ್ನ ಬಂಧಿಸಲಾಗಿದೆ. ಕಾಳಜಿಯ ಅಂಶವೆಂದರೆ ಎಲ್ಎಂಜಿ ಮಿಷನ್ ಗನ್‌ ಲಭ್ಯತೆ. ಒಂದು ನಿಮಿಷದಲ್ಲಿ 8,000 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಮಷೀನ್ ಗನ್. ಈ ಜನರ ತಯಾರಿಯನ್ನು ಅರ್ಥ ಮಾಡಿಕೊಳ್ಳಿ ಹಿಂದುಗಳೇ.. ಎದ್ದೇಳಿ ಅವರು ನಿಮ್ಮ ಭವಿಷ್ಯವನ್ನು ನಿರ್ಧರಿಸಿದ್ದಾರೆ.” “ಮೋದಿ ಹೋರಾಡಲು ತಡವಾಗಿದೆ ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ಸಹೋದರರಿಗೆ ಹಂಚಿಕೊಳ್ಳಿ” ಎಂದು ಬರಹದೊಂದಿಗೆ ಸುಮಾರು 7 ಫೋಟೋಗಳನ್ನು ಹಂಚಿಕೊಳ್ಳಲಾಗಿದೆ….

Read More

Fact Check | ನಿತಾಶಾ ಕೌಲ್‌ ಪಾಕಿಸ್ತಾನದವರು ಎಂಬುದು ಸುಳ್ಳು

“ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಆಮಂತ್ರಣದಂತೆ ಭಾರತದ ಸಂವಿಧಾನದ ಬಗ್ಗೆ ಭಾಷಣ ಮಾಡಲು ಪಾಕಿಸ್ತಾನದಿಂದ ಬಂದಿದ್ದ ನಿತಾಷ ಕೌಲ್‌ ಅನ್ನೋ ಜಿಹಾದಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆದೇಶದಂತೆ ಕೇಂದ್ರೀಯ ಭದ್ರತಾ ಪಡೆ ಬೆಂಗಳೂರು ವಿಮಾನ ನಿಲ್ದಾಣದಿಂದ ಸಿದ್ದರಾಮಯ್ಯ ತವರು ಮನೆ ಪಾಕಿಸ್ತಾನಕ್ಕೆ ಹಿಂದೆ ಕಳಿಸಿದೆ.” “ಮಾನ ಮರ್ಯಾದೆ ಇಲ್ಲದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಸರಕಾರಿ ಪೋಷಿತ ಜಿಹಾದಿ ಕೂಲಿಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳುತ್ತಿರುವುದು ದುರಂತ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ. ಫ್ಯಾಕ್ಟ್‌ಚೆಕ್‌  ಇವರು ಪಾಕಿಸ್ತಾನದವರು…

Read More

Fact Check | ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ದೆಹಲಿ ರೈತರ ಮೆರವಣಿಗೆಯ ದೃಶ್ಯಗಳೆಂದು ಹಂಚಿಕೆ

“ಇದು ದೆಹಲಿ ಚಲೋ ಪ್ರತಿಭಟನೆಯಲ್ಲಿ ಸೆರೆಯಾದ ಬೃಹತ್ ಸಭೆಯ ದೃಶ್ಯಗಳು. ಈ ಲಕ್ಷಾಂತರ ಜನ ರೈತರು ದೆಹಲಿಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ದೆಹಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.” ಎಂದು ರೈತ ಹೋರಾಟಕ್ಕೆ ಸಂಬಂಧಿಸಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರೈತ ಹೋರಾಟ ಆರಂಭವಾದಗಿನಿಂದ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳನ್ನು ರೈತರ ಹೋರಾಟದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬೋದಕ್ಕೆ ಪ್ರಾರಂಭ ಮಾಡಲಾಗಿದೆ. ಇದಿಗ ಅಂತಹದ್ದೇ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ರೈತರು ವ್ಯಾಪಕವಾಗಿ ದೆಹಲಿಯ…

Read More

Fact Check | ಭಾರತೀಯ ಪೊಲೀಸರು ಈ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಸಂದೇಶ ಹಂಚಿಕೆ

“ಸರ್ಕಾರಿ ಅಧಿಕಾರಿಗಳಂತೆ ವೇಷ ಧರಿಸಿ ಜನಗಣತಿ ಮಾಡಲು ಕಳ್ಳರ ಗುಪೊಂದು ಬರುತ್ತದೆ, ಈ ಗುಂಪು ನಿಮ್ಮ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಈ ಬಗ್ಗೆ ಪೊಲೀಸ್‌ ಇಲಾಖೆಯೇ ಎಚ್ಚರಿಕೆಯನ್ನು ನೀಡಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ ಸಾಕಷ್ಟು ಮಂದಿ ಇದೇ ನಿಜವಾದ ಸುದ್ದಿ ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನನಿಜವೆಂಬಂತೆ ಹಂಚಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಜನಗಣತಿ ಎಂಬುದು ಈಗ ನಡೆಯುತ್ತಿಲ್ಲ. ಆದರೂ ಕೂಡ ಈ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ….

Read More