ಭಾರತ-ಬಾಂಗ್ಲಾದೇಶ ಗಡಿ

Fact Check: ಅಸ್ಸಾಂನ ಭಾರತ-ಬಾಂಗ್ಲಾದೇಶ ಗಡಿಯ ಇತ್ತೀಚಿನ ದೃಶ್ಯಗಳು ಎಂದು ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಮುಳ್ಳು ತಂತಿ ಬೇಲಿಯ ಎರಡೂ ಬದಿಗಳಲ್ಲಿ ಹಲವಾರು ಜನರು ನಿಂತಿರುವ ವೀಡಿಯೊವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, ಇದು ಅಸ್ಸಾಂನಲ್ಲಿ ತೆಗೆದ ಭಾರತ-ಬಾಂಗ್ಲಾದೇಶ ಗಡಿಯ ಇತ್ತೀಚಿನ ದೃಶ್ಯಗಳನ್ನು ಎಂದು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಹಂಚಿಕೊಳ್ಳುವವರು ಇದನ್ನು ಬಾಂಗ್ಲಾದೇಶದ ಇತ್ತೀಚಿನ ಪ್ರಕ್ಷುಬ್ಧತೆಗೆ ಹೋಲಿಸಿದ್ದಾರೆ. ಹಿಂದು ಜನಜಾಗೃತಿ ಸಂಘದ ವಕ್ತಾರ ಮೋಹನ್ ಗೌಡ ಎಂಬುವರು ” ಅಸ್ಸಾಂನಲ್ಲಿ ಭಾರತ-ಬಾಂಗ್ಲಾದೇಶ ಗಡಿಯಿಂದ ದೃಶ್ಯಗಳು. ಪೌರತ್ವ ತಿದ್ದುಪಡಿ ಕಾಯಿದೆ, 2019 ರ ಪ್ರಾಮುಖ್ಯತೆ. ಭಾರತದ ಸಿಎಎ ಕಾಯಿದೆಯಡಿ ಇಂತಹ ಪರಿಸ್ಥಿತಿಯಲ್ಲಿ ಬಳಲುತ್ತಿರುವ ಬಾಂಗ್ಲಾದೇಶದ ಅಮಾಯಕ ಹಿಂದೂಗಳಿಗೆ ಭಾರತ ಸರ್ಕಾರ ತಕ್ಷಣವೇ…

Read More
ಅಸ್ಸಾಂ

Fact Check: 1951ರಲ್ಲಿ ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ಶೇ.14ರಷ್ಟಿತ್ತು ಎಂದು ಸುಳ್ಳು ಹರಡಿದ ಹಿಮಂತ ಬಿಸ್ವಾ ಶರ್ಮಾ

ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ರಾಜ್ಯದ ಸಹ ಉಸ್ತುವಾರಿಯಾಗಿ ನೇಮಿಸಿದೆ. ಈ ಸಮಯದಲ್ಲಿ, ಶರ್ಮಾ ಜಾರ್ಖಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ರಾಂಚಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಶರ್ಮಾ, “ನಾನು ಅಸ್ಸಾಂನಿಂದ ಬಂದಿದ್ದೇನೆ, ಮತ್ತು ಜನಸಂಖ್ಯಾಶಾಸ್ತ್ರದಲ್ಲಿನ ಬದಲಾವಣೆ ನನಗೆ ಮಹತ್ವದ ವಿಷಯವಾಗಿದೆ. 1951ರಲ್ಲಿ ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.14ರಷ್ಟಿತ್ತು. ಇಂದು ಅದು ಶೇ.40ಕ್ಕೆ ಏರಿದೆ. ನಾನು ಅನೇಕ ಜಿಲ್ಲೆಗಳನ್ನು ಕಳೆದುಕೊಂಡಿದ್ದೇನೆ. ನನಗೆ…

Read More
ಮುಸ್ಲಿಮರು

Fact Check: ಬಾಂಗ್ಲಾದೇಶದ ಮುಸ್ಲಿಮರು ಕಿಕ್ಕಿರಿದ ರೈಲಿನಲ್ಲಿ ಅಸ್ಸಾಂ ಮತ್ತು ಕೋಲ್ಕತ್ತಾಗೆ ಬಂದಿಳಿದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ರೈಲಿನ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ರೈಲು ಬಾಂಗ್ಲಾದೇಶದಿಂದ ಭಾರತದ ಕಡೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ರೈಲಿನ ತುಂಬಾ ಮುಸ್ಲಿಂ ಸಮುದಾಯದ ಜನ ಕಿಕ್ಕಿರಿದು ಕುಳಿತಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಈ ವೀಡಿಯೋವಿಗೆ “ಇದು ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ, ಈ ಗುಂಪಿನ ಮುಂದೆ ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಧ್ಯವಿಲ್ಲ ಅಸ್ಸಾಂ ಮತ್ತು ಕೋಲ್ಕತ್ತಾ ಮೂಲಕ ಬಾಂಗ್ಲಾದೇಶ ಈ ಮುಸ್ಲಿಮರನ್ನು ವಿರೋಧಿಸಲು ಇನ್ನೂ ಸಮಯವಿದೆ. ಇಲ್ಲದಿದ್ದರೆ…

Read More
ರೋಹಿಂಗ್ಯಾ

Fact Check: ಮಥುರಾದಲ್ಲಿ ರೋಹಿಂಗ್ಯಾ ಮುಸ್ಲಿಮರು ಪೋಲೀಸರಿಗೆ ಹಲ್ಲೆ ನಡೆಸಿದ್ದಾರೆ ಎಂದು ಅಸ್ಸಾಮಿನ ವೀಡಿಯೋ ಹಂಚಿಕೆ

ಹಲವಾರು ಪುರುಷರು ಮತ್ತು ಪೊಲೀಸ್ ಅಧಿಕಾರಿಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ, ವೃದ್ಧ ಮುಸ್ಲಿಂ ವ್ಯಕ್ತಿ ಬಿದಿರಿನ ಕೋಲಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸುವುದನ್ನು ಕಾಣಬಹುದು. ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ರೋಹಿಂಗ್ಯಾ ಮುಸ್ಲಿಮರು ತಮ್ಮ ಗುರುತಿನ ಚೀಟಿಗಳನ್ನು ಪರಿಶೀಲಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಅನೇಕ ಬಿಜೆಪಿ ಬೆಂಬಲಿಗರು ಎಕ್ಸ್ ನಲ್ಲಿ: “ರೋಹಿಂಗ್ಯಾಗಳು ಅಥವಾ ರೌಡಿಗಳು? ಉತ್ತರ ಪ್ರದೇಶದ…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ಅಸ್ಸಾಮಿಗೆ ಭೇಟಿ ನೀಡಿದ ಹಳೆಯ ವೀಡಿಯೋವನ್ನು ಮಣಿಪುರದಲ್ಲಿ “ಗೋ ಬ್ಯಾಕ್” ಪ್ರತಿಭಟನೆ ನಡೆದಿದೆ ಎಂದು ಹಂಚಿಕೆ

ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ(8 ಜುಲೈ, 2024) ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದ ನಂತರ ಇದು ಈಶಾನ್ಯ ರಾಜ್ಯಕ್ಕೆ ಅವರ ಮೂರನೇ ಭೇಟಿಯಾಗಿದೆ. ರಾಹುಲ್ ಗಾಂಧಿಯವರು ಇಂಫಾಲ, ಜಿರಿಬಾಮ್ ಮತ್ತು ಚುರಚಂದಪುರಕ್ಕೆ ಭೇಟಿ ನೀಡಿದ್ದು ಅಲ್ಲಿನ ಸಾಮಾನ್ಯ ಜನರಿಂದ ಸ್ವಾಗತಿಸಲ್ಪಟ್ಟಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಎರಡೂ ಕಡೆಯ ಆಂತರಿಕವಾಗಿ ಸ್ಥಳಾಂತರಗೊಂಡ ಮೇಟಿ ಮತ್ತು ಕುಕಿ-ಜೋ ಬುಡಕಟ್ಟು ಸಮುದಾಯದ ಜನರೊಂದಿಗೆ…

Read More

Fact Check: ಭಾರತ್ ನ್ಯಾಯ್ ಯಾತ್ರೆ ವೇಳೆ ಮೋದಿ ಮೋದಿ ಘೋಷಣೆಯಿಂದ ರಾಹುಲ್ ಗಾಂಧಿ ಕಿರಿಕಿರಿಯಾಗಿ ಸಿಟ್ಟಿನಿಂದ ಹೋಗಿಲ್ಲ

ಯಾತ್ರೆ ವೇಳೆ ಹಿಂದೂಗಳ ಶ್ರೀರಾಮ್ ಘೋಷಣೆಯಿಂದ ಕಿರಿಕಿರಿಯಾದ ಕೈ ಯುವರಾಜ ರಾಹುಲ್ ! ಬಸ್ ನಿಲ್ಲಿಸಿ‌ ಜನರ‌ ಗುಂಪಿನ ಮೇಲೆ‌ ಸಿಟ್ಟಿನಿಂದ ಹೋದ ಕೈ ನೇತಾರ ? 🙆 ಏಕಿಷ್ಟು ಸಿಟ್ಟು ? ಇದು ನಾಯಕನ‌ ಲಕ್ಷಣವೇ ? ಏನಿದು ಆವೇಶ ? ಇದು PM ಅಭ್ಯರ್ಥಿ ವರ್ತಿಸುವ ರೀತಿಯೇ ? ಎಂಬ ಸಂದೇಶದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ ರಾಹುಲ್…

Read More