ರಾಜಸ್ಥಾನ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಧರ್ಮದ ಆಧಾರದಲ್ಲಿ ತಾರತಮ್ಯವೆಸಗಿಲ್ಲ..!
ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲ ದಿನಗಳು ಬಾಕಿ ಇವೆ. ಹೀಗಿರುವ ಅಲ್ಲಿನ ಆಡಳಿತ ಪಕ್ಷದ ವಿರುದ್ದ ಈಗ ಹಲವು ರೀತಿಯಾದ ಸುಳ್ಳು ಸುದ್ದಿಯನ್ನ ಹಬ್ಬಲು ಅಲ್ಲಿನ ಕೆಲ ಡಿಜಿಟಲ್ ಮಾಧ್ಯಮಗಳು ಪ್ರಾರಂಭ ಮಾಡಿವೆ ಎಂಬ ಆರೋಪ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಇದೀಗ ರಾಜಸ್ಥಾನ ಸರ್ಕಾರದ ವಿರುದ್ಧ ದಿನಕ್ಕೆ ಒಂದರಂತೆ, ಒಂದೊಂದೇ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿವೆ. ಇದರಿಂದ ಅಲ್ಲಿನ ಸರ್ಕಾರ ಇಕ್ಕಟ್ಟಿಗ ಸಿಲುಕಿಕೊಂಡಿದೆ. ಈಗ ಇಂತಹದ್ದೇ ಒಂದು ಸುಳ್ಳು ಸುದ್ದಿ ಅಲ್ಲಿನ ಸರ್ಕಾರವನ್ನ…