ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು

“ಸತ್ಯವನ್ನು ಎಷ್ಟು ಮುಚ್ಚಿಟ್ಟರೂ ಅದು ಹೊರಬರುತ್ತದೆ. ಇದು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿಜವಾದ ಛಾಯಾಚಿತ್ರ, ಈ ನಕಲಿ ಗಾಂಧಿ ಕುಟುಂಬವು ವಾಸ್ತವವಾಗಿ ಮೊಹಮ್ಮದ್  ಘಾಜಿಯ ಕುಟುಂಬವಾಗಿದೆ. ಈ ಫೋಟೋವನ್ನು 10 ಜನರಿಗೆ ಕಳುಹಿಸಿ, ದೇಶವನ್ನು ಜಾಗೃತಗೊಳಿಸಿ ಮತ್ತು ಭಾರತವನ್ನು ಪಾಕಿಸ್ತಾನವಾಗಿ ಬದಲಾಗದಂತೆ ರಕ್ಷಿಸಿ.” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಈ ಚಿತ್ರಗಳು ರಾಜೀವ್ ಮತ್ತು ಸೋನಿಯಾರವರ ವಿವಾಹೋತ್ಸವ ಸಂದರ್ಭದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮದಾಗಿದೆ. ಇಂಡಿಯನ್ ಕಲ್ಚರ್ ಸಂಸ್ಥೆಯ ಅಧಿಕೃತ…

Read More

ಲವ್ ಜಿಹಾದ್ ಎಂಬುದು ಕಟ್ಟು ಕಥೆ: ಬೆಂಗಳೂರು ಪೊಲೀಸರ ವಿಚಾರಣೆಯಲ್ಲಿ ಬಹಿರಂಗ

”ನಾನು ಅಪಾಯದಲ್ಲಿದ್ದೇನೆ. ನನ್ನ ಮೇಲೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ಅತ್ಯಾಚಾರವಾಗಿದೆ. ನಾನು ಲವ್‌ ಜಿಹಾದ್‌ಗೆ ಒಳಗಾಗಿದ್ದೇನೆ. ಹಾಗಾಗಿ, ಬೆಂಗಳೂರು ನಗರ ಪೊಲೀಸರು ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ” ಎಂದು 37 ವರ್ಷದ ಮಹಿಳೆಯೊಬ್ಬರು ಟ್ವೀಟ್‌ ಮೂಲಕ ಪೊಲೀಸರ ಸಹಾಯ ಕೇಳಿದ್ದರು. ಗುಪ್ತಾ ಭರತ್ ಎಂಬ ಟ್ವಿಟರ್‌ ಅಕೌಂಟ್‌ನಿಂದ ಸೆ. 7ರಂದು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್‌ ಮಾಡಲಾಗಿತ್ತು. “ತುರ್ತಾಗಿ ನನಗೆ ಬೆಂಗಳೂರು…

Read More

ಪೆರಿಯಾರ್ ತನ್ನ ಅನುಯಾಯಿಯನ್ನು ಮದುವೆಯಾದರೆ ಹೊರತು ಮಗಳನ್ನಲ್ಲ

ಇತ್ತೀಚೆಗೆ ತಮಿಳುನಾಡಿನ ದ್ರಾವಿಡ ಚಳುವಳಿಯ ಹರಿಕಾರ ಮತ್ತು “ತಮಿಳು ಸ್ವಾಭಿಮಾನ ಚಳುವಳಿ”ಯ ನಾಯಕರಾದ ಇ.ವಿ. ರಾಮಸ್ವಾಮಿ ನಾಯ್ಕರ್ ಅಥವಾ ತಂತೈ ಪೆರಿಯಾರ್ ತಮ್ಮ ಸ್ವಂತ ಮಗಳನ್ನೇ ಮದುವೆಯಾಗಿದ್ದರು ಎಂಬ ಸುದ್ಧಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರ ಭಾರತದಲ್ಲಿ ಈ ವದಂತಿ ಹೆಚ್ಚಾಗಿ ಹಬ್ಬುತ್ತಿದ್ದು, ಪೆರಿಯಾರ್ ರವರನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಜಸ್ಟೀಸ್ ಪಾರ್ಟಿಯ ಸ್ಥಾಪಕರಾದ ಕನಗಸಬಾಯಿ ಮುದಲಿಯಾರ್‌ರವರ ಮಗಳಾದ ಮಣಿಯಮ್ಮೈರವರನ್ನು ಪೆರಿಯಾರ್‌ರವರು ತಮ್ಮ 70 ವಯಸ್ಸಿನಲ್ಲಿ ಮದುವೆಯಾದರು. ಪೆರಿಯಾರ್‌ರವರ ಪ್ರಬಲ ಅನುಯಾಯಿಯಾಗಿ, ಆಪ್ತ ಸಹಾಯಕಿಯಾಗಿ ಕೆಲಸ ಮಾಡಿದ್ದ…

Read More

ನರೇಂದ್ರ ಮೋದಿ ಭಾರತದ ಮೊದಲ ಒಬಿಸಿ ಪ್ರಧಾನಿ ಎಂಬುದು ಸುಳ್ಳು

ಬಿಜೆಪಿಯು ಭಾರತಕ್ಕೆ ಮೊದಲ ಒಬಿಸಿ (ಇತರ ಹಿಂದುಳಿದ ವರ್ಗ) ಪ್ರಧಾನಿಯನ್ನು ನೀಡಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಪ್ರತಿಪಾದಿಸಿದ್ದಾರೆ. ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಸಂವಿಧಾನದ 128ನೇ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ. "भारत को पहला OBC प्रधानमंत्री भाजपा (NDA) ने दिया" ◆ संसद में भाजपा अध्यक्ष जेपी नड्डा का बयान@JPNadda | #OBC | #WomenReservationBill2023 pic.twitter.com/bMRRYcbs1q — News24…

Read More

ಕಾವೇರಿ ವಿವಾದದ ಕುರಿತು ಕ್ರಿಕೆಟಿಗ ಕೆ.ಎಲ್ ರಾಹುಲ್ ಟ್ವೀಟ್ ಮಾಡಿಲ್ಲ

“ಕಾವೇರಿ ಎಂದೂ ನಮ್ಮದು ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು ಇದು ನಮ್ಮ ದುರಂತ. ಕಾವೇರಿ ಇಡೀ ಕರ್ನಾಟಕದ ಆಸ್ತಿ. #ಕಾವೇರೀನಮ್ಮದು” ಎಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ಟ್ವೀಟ್ ಫ್ಯಾನ್ ಅಕೌಂಟ್ ನಿಂದ ಮಾಡಲಾಗಿದ್ದು. ರಾಹುಲ್ ಅಭಿಮಾನಿಯೊಬ್ಬರು ಕೆ.ಎಲ್ ರಾಹುಲ್ ಹೆಸರು…

Read More

ಶೃಂಗೇರಿ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು.

ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತಿ ತೀರ್ಥರು ಹಿಂದು ವಿರೋಧಿಗಳಾದ ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದ್ದಾರೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಮತ್ತು ಸಂಸದ ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಮಾರ್ಚ್, 2018ರಲ್ಲಿ ಶೃಂಗೇರಿ ಶಾರದ ಪೀಠಕ್ಕೆ ಭೇಟಿಕೊಟ್ಟು ಜಗದ್ಗುರು ಭಾರತಿ ತೀರ್ಥರನ್ನು ಭೇಟಿಯಾಗಿದ್ದರು. ಚರ್ಚೆಯ ನಂತರ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಿದರು.ನಂತರ ರಾಹುಲ್ ಗಾಂಧಿಯವರಿಗೆ ಅವರ ತಂದೆ ರಾಜೀವ್ ಗಾಂಧಿಯವರ ಚಿತ್ರವನ್ನು…

Read More

ನಿತ್ಯಾ ಮೆನನ್ ತಮಿಳು ನಟನಿಂದ ಕಿರುಕುಳಕ್ಕೆ ಒಳಗಾಗಿದ್ದರು ಎಂಬುದು ಸುಳ್ಳು

ಬಹುಭಾಷಾ  ನಟಿ ನಿತ್ಯಾ ಮೆನನ್‌ರವರಿಗೆ “ಚಿತ್ರಿಕರಣದ ಸಂದರ್ಭದಲ್ಲಿ ತಮಿಳು ನಟನೊಬ್ಬ ಕಿರುಕುಳ ನೀಡಿದ್ದಾನೆ ಮತ್ತು ತಮಿಳು ಸಿನಿಮಾ ಇಂಡಸ್ಟ್ರಿ ಯಿಂದ ನಾನು ಅನೇಕ ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಅನೇಕ ತಮಿಳು ಚಾನೆಲ್‌ಗಳು ವರದಿ ಮಾಡಿವೆ. ಫ್ಯಾಕ್ಟ್‌ಚೆಕ್: “ನಾನು ಇತ್ತೀಚೆಗೆ ಯಾವ ಸಂದರ್ಶನ ನೀಡಿಲ್ಲ ಮತ್ತು ಇಂತಹ ಯಾವುದೇ ಹೇಳಿಕೆ ನೀಡಿಲ್ಲ. ಈ ಸುಳ್ಳು ಸುದ್ಧಿಯನ್ನು ಯಾರು ಮೊದಲು ಹಬ್ಬಿಸಿದರು ಎಂದು ತಿಳಿದು ಬಂದರೆ ನನ್ನ ಗಮನಕ್ಕೆ ತನ್ನಿ. ಕೆಲವು ಪತ್ರಕರ್ತರು…

Read More

ಫ್ಯಾಕ್ಟ್‌ಚೆಕ್: ದಿಢೀರ್‌ ಖ್ಯಾತಿ ಗಳಿಸಲು ಬೆನ್ನಿನ ಮೇಲೆ PFI ಎಂದು ಬರೆಸಿಕೊಂಡು ಹಲ್ಲೆ ನಾಟಕವಾಡಿದ ಸೈನಿಕ

ಕೇರಳದ ಕೊಲ್ಲಂನಲ್ಲಿ 6 ಜನ ಅಪರಿಚಿತರು ಸೈನಿಕ ಶೈನ್ ಕುಮಾರ್ ಮೇಲೆ ಹಲ್ಲೆ ನಡೆಸಿ, ಅವರ ಕೈಕಾಲು ಕಟ್ಟಿ, ಬೆನ್ನಿನ ಮೇಲೆ PFI ಎಂದು ಬರೆದು ಕ್ರೌರ್ಯ ಎಸಗಿದ್ದಾರೆ ಎಂಬ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ. ಬಿಜೆಪಿ ಮುಖಂಡರು ಈ ಫೋಟೊ ಹಂಚಿಕೊಂಡು ಸೈನಿಕರಿಗೇ ಈ ರಾಜ್ಯದಲ್ಲಿ ರಕ್ಷಣೆಯಿಲ್ಲ ಎಂದು ಆಡಳಿತರೂಢ ಸಿಪಿಎಂ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.‌ ANI ಸೇರಿದಂತೆ ಹಲವಾರು ಮಾಧ್ಯಮಗಳು ಅದನ್ನೇ ವರದಿ ಮಾಡಿವೆ. ಕನ್ನಡದ ಫೇಕ್‌ನ್ಯೂಸ್‌ ಪೇಜ್‌ ಪೋಸ್ಟ್‌ ಕಾರ್ಡ್‌ ಕನ್ನಡ ದೇವರ…

Read More

ಮಲ್ಲಿಕಾರ್ಜುನ್ ಖರ್ಗೆ 50 ಸಾವಿರ ಕೋಟಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದು ಸುಳ್ಳು

ಸಂಸತ್ತಿನಲ್ಲಿ ಮೋದಿಜಿಯವರು ಖರ್ಗೆಯವರ ಆಸ್ತಿ ವಿವರಗಳನ್ನು ಬಯಲು ಮಾಡಿದ್ದಾರೆ ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಖರ್ಗೆಯವರು ಸಂಸತ್ತಿನಲ್ಲಿ ದಲಿತರಿಗೆ ಕನಿಷ್ಠ ಒಂದು ಪ್ರತಿಶತ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದರು. ಆಗ ಪ್ರತಿಯಾಗಿ ಮೋದಿಯವರು ನೀವೇ ದಲಿತರಲ್ಲವೇ? ನಿಮ್ಮ ಆಸ್ತಿ ವಿವರಗಳನ್ನು ನಾನು ಹೇಳಲೆ ಎಂದು “ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 300 ಎಕರೆ ಕಾಫಿ ಎಸ್ಟೇಟ್, ಕೆಂಗೇರಿಯಲ್ಲಿ 40 ಕೋಟಿಯ ಫಾರ್ಮ್ ಹೌಸ್! ರಾಮಯ್ಯ ಕಾಲೇಜಿನಲ್ಲಿ 25 ಕೋಟಿ…

Read More

ಯುವತಿಯ ಕೊಲೆ ಮಾಡಿದ UP ಮುಸ್ಲಿಂ ಯುವಕರಿಗೆ ಯೋಗಿಯ ಶಿಕ್ಷೆ ಎಂಬುದು ಸುಳ್ಳು

ಉತ್ತರ ಪ್ರದೇಶದಲ್ಲಿ ಹುಡುಗಿಯ ದುಪ್ಪಟ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಇಸ್ಲಾಂ ಜಿಹಾದಿಗಳಿಗೆ ಯೋಗಿ ಸರ್ಕಾರ ನೀಡಿರುವ ಬಹುಮಾನ! ಎಂದು ಹಲ್ಲೆಗೊಳಗಾದ ಆರೋಪಿಗಳು ತೆವಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಇದು ರಾಜಸ್ಥಾನದಲ್ಲಿ ನಡೆದ ಘಟನೆಯಾಗಿದ್ದು ಉತ್ತರ ಪ್ರದೇಶದ್ದಲ್ಲ. ಶಿಕ್ಷೆಗೊಳಗಾಗಿ ತೆವಳುತ್ತಿರುವವರು ಕೊಲೆ ಪ್ರಕರಣದ ಆರೋಪಿಗಳಾದ ತೇಜ್ವೀರ್, ಯುವರಾಜ್ ಮತ್ತು ಬಂಟಿ ಕುಶಾಲ್. ಇವರ ಹೆಸರುಗಳನ್ನು ಅರ್ಬಾಜ್, ಫೈಸಲ್ ಮತ್ತು ಶಹಬಾಜ್ ಎಂದು ತಪ್ಪಾಗಿ ತಿರುಚಲಾಗಿದೆ. ಇದನ್ನು ಬೂಮ್…

Read More