ದಕ್ಷಿಣ ಕೊರಿಯಾದ ಪ್ಯಾರಾಗ್ಲೈಡರ್ ಪತನಗೊಂಡ ದೃಶ್ಯವನ್ನು ಹಮಾಸ್ ಉಗ್ರರು ಎಂದು ಹಂಚಿಕೊಳ್ಳಲಾಗುತ್ತಿದೆ

ಕಳೆದ ಹಲವು ದಿನಗಳಿಂದ ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ಧಿಗಳು ಹರಿದಾಡುತ್ತಿದ್ದು.  ಹಮಾಸ್ ಪ್ಯಾರಾಗ್ಲೈಡರ್ ಹೈ ವೋಲ್ಟೇಜ್ ವಿದ್ಯುತ್ ಲೈನ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಅವರು ಇದಕ್ಕೆ ಅರ್ಹರಾಗಿದ್ದರೇ? ಹೌದು ಅಥವಾ ಇಲ್ಲ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.   ಪ್ಯಾಕ್ಟ್‌ಚೆಕ್: ಇದು ಜೂನ್ 16, 2023 ರಂದು, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಸುಮಾರು ಅರವತ್ತು ವರ್ಷದ ಪ್ರವಾಸಿಗನೊಬ್ಬ ದಕ್ಷಿಣ ಕೊರಿಯಾದ…

Read More
ಇಸ್ರೇಲ್

ಇಸ್ರೇಲ್ – ಪ್ಯಾಲೇಸ್ತೀನ್ ಹೆಸರಿನಲ್ಲಿ ಹರದಾಡುತ್ತಿವೆ ನಕಲಿ ವಿಡಿಯೋ-ಫೋಟೊಗಳು

ಪ್ಯಾಲೇಸ್ತೀನ್‌ನಲ್ಲಿ ಹಮಾಸ್‌ನವರು ಚಿಕ್ಕ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿ ಪಂಜರದಲ್ಲಿ ಕೂಡಿಹಾಕಿದ್ದಾರೆ ಎಂಬ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. They are killing innocents, holding foreigners hostage, women's are being butchered, raped, paraded naked, now they killed 10 Nepali Hindu students and put Jewish childrens in animal cage! What kind of liberation war they are fighting for? #IStandWithIsrael #IsraelPalestineWar pic.twitter.com/rEBDeDQ7fx…

Read More

ಗಂಗಾಜಲಕ್ಕೆ ಕೇಂದ್ರ ಸರ್ಕಾರ 18% ಜಿಎಸ್‌ಟಿ ವಿಧಿಸಿದೆಯೆ?

ಇದೇ ಗುರುವಾರ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಹೇಳಿಕೆಯನ್ನ ನೀಡಿದ್ದರು, ಆ ಹೇಳಿಕೆ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ, ಅದರ ಸದ್ದು ಹೇಗಿದೆ ಅಂದ್ರೆ ಆಡಳಿತರೂಢ ಬಿಜೆಪಿಯ ಜಂಗಾಬಲವನ್ನೇ ಆಲುಗಾಡಿಸಿ ಬಿಟ್ಟಿದೆ.. ಅಷ್ಟಕ್ಕೂ ಕಾಂಗ್ರೆಸ್‌ ಅಧಿನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ಅಂದ್ರೆ “ಉತ್ತರಾಖಂಡ ಸರ್ಕಾರವು ಗಂಗಾ ನೀರಿನ ಮೇಲೆ 18% ಜಿಎಸ್‌ಟಿ ವಿಧಿಸಿದೆ” ಎಂದು ಈ ಹೇಳಿಕೆತಯನ್ನ ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದಂತೆ ಕೇಂದ್ರ ಸರ್ಕಾರವೇ ಪತರುಗುಟ್ಟಿದೆ. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡ ಹಣಕಾಸು…

Read More

ವ್ಯಾಪಕವಾಗಿ ಹಬ್ಬುತ್ತಿದೆ ನಕಲಿ ಜಾಹಿರಾತುಗಳು.. ನಂಬುವ ಮುನ್ನ ಒಮ್ಮೆ ಪರಿಶೀಲಿಸಿ.!

ಸಾಮಾಜಿಕ ಜಾಲತಾಣ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ನಕಲಿ ಜಾಹಿರಾತಿನ ಹಾವಳಿ ಕೂಡ ಹೆಚ್ಚಾಗಲು ಪ್ರಾರಂಭವಾಗುತ್ತಿದೆ. ಅದರಲ್ಲೂ ಉದ್ಯೋಗಕ್ಕೆ ಸಂಬಂಧಿಸಿದ ಸಾಕಷ್ಟು ನಕಲಿ ಜಾಹಿರಾತುಗಳು ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿವೆ, ಇವುಗಳನ್ನ ಸರಿಯಾಗಿ ಪರಿಶೀಲನೆ ನಡೆಸದೆ ಅದೆಷ್ಟೋ ಮಂದಿ ಪ್ರತಿನಿತ್ಯ ಮೋಸ ಹೋಗುತ್ತಾರೆ ಇದೀಗ ಇಂತಹದ್ದೆ ಎರಡು ಜಾಹಿರಾತುಗಳು ನಿರುದ್ಯೋಗಿಗಳ ದಾರಿ ತಪ್ಪಿಸುತ್ತಿವೆ.. ಹೌದು.. “ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ಸಂಯೋಜಿತವಾಗಿರುವ ಈ ವೆಬ್‌ಸೈಟ್‌ನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ನೀವು…

Read More

“ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿದ್ದಕ್ಕಾಗಿ ವೃದ್ಧನನ್ನು ಥಳಿಸಲಾಗಿದೆ ಎಂಬುದು ಸುಳ್ಳು

ಮುಸ್ಲಿಮರ ಬಾಹುಳ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರೆ ಪೆಟ್ಟು ತಿಂದು ಸಾಯಬೇಕಾಗಬಹುದು. ಹೇಗಿದೆ ನಮ್ಮ ದುರಾವಸ್ಥೆ ಎಂಬ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಈ ಮೊದಲು ಈ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿತ್ತು, ಆದರೆ ಇದು 2019ರ ರಾಜಸ್ಥಾನದ ಭಿಲ್ವಾರದಲ್ಲಿ ನಡೆದ ಘಟನೆಯಾಗಿದ್ದು, ವೃದ್ಧನಿಗೆ ಹಣದ ವಿಚಾರದಲ್ಲಿ ಜನರನ್ನು ನಿಂದಿಸಿದ್ದಕ್ಕಾಗಿ ಥಳಿಸಲಾಗಿದೆಯೇ ಹೊರತು ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದ್ದಕ್ಕಾಗಿ ಅಲ್ಲ ಎಂದು ಭಿಲ್ವಾರದ…

Read More

ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ ನಡೆಸಿದೆ ಎಂಬುದು ಸುಳ್ಳು

ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ! ಇಂತಹ ನರರಾಕ್ಷಸರಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ ಎಂದರೆ ನಾಳೆ ನಿಮ್ಮ ಮಕ್ಕಳ ಗತಿಯೇನು? ಎಂಬ ಸುದ್ಧಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ.  ಪ್ಯಾಕ್ಟ್‌ಚೆಕ್: ಯಾವುದೇ ಸಾಕ್ಷಾಧರಗಳಿಲ್ಲದೇ ಈ ಸುದ್ಧಿಯನ್ನು ಭಾರತ ಸೇರಿದಂತೆ ಹಲವು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ. ಸುದ್ಧಿಯ ಮೂಲವೆನ್ನುವ ಇಸ್ರೇಲಿ ಡಿಫೇನ್ಸ್ ಫೋರ್ಸ್(IDF) ತನ್ನ ಅಧಿಕೃತ ಪುಟದಲ್ಲಿ ಎಲ್ಲಿಯೂ ಈ ಕೃತ್ಯದ ಬಗ್ಗೆ ವರದಿ ಮಾಡಿಲ್ಲ. IDFನ ವಕ್ತಾರ ಜೊನಾಥನ್ ಕಾನ್ರಿಕಸ್ “ಗಾಝಾ ಸ್ಟ್ರೀಫ್‌ನಲ್ಲಿ “ಮಹಿಳೆಯರು,…

Read More

ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಪಕ್ಷ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಮತ್ತು ಅದು ಈಗಲೂ ಚಾಲ್ತಿಯಲ್ಲಿದೆ ಎಂಬುದು ಸುಳ್ಳು

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ ದೇಶದ ರಾಜಕೀಯಕ್ಕೆ ಸಂಬಂಧ ಪಟ್ಟಂತೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗುತ್ತಿದೆ. ಇದರಿಂದ ಜನರನ್ನು ರಾಜಕೀಯವಾಗಿ ದಾರಿ ತಪ್ಪಿಸುವಲ್ಲಿ ಕೆಲ ರಾಜಕೀಯ ಪಕ್ಷಗಳು ಯಶಸ್ವಿಯಾಗುತ್ತಿದ್ದಾರೆ. ಇದರಂತೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುಳ್ಳು ಸುದ್ದಿಯೊಂದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ನೀಡಿಲಾಗಿದೆ. ಸಂಪೂರ್ಣವಾಗಿ ಓದಿ. ಸುಳ್ಳು : ಬ್ರಿಟೀಷರಿಂದ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕಾದರೆ ಕಾಂಗ್ರೆಸ್‌ನಿಂದ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಆ ಒಪ್ಪಂದವನ್ನು ರಹಸ್ಯವಾಗಿ ಇಡಲಾಗಿದೆ. ಆ…

Read More

ಬಾಲಕನೊಬ್ಬನ ಶಿರಚ್ಛೆದ ಮಾಡಿದ ವಿಡಿಯೋ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೈನ್ ಯುದ್ದಕ್ಕೆ ಸಂಬಂಧಿಸಿದ್ದಲ್ಲ

ಹಮಾಸ್ ಉಗ್ರಗಾಮಿಗಳು ಪ್ಯಾಲೆಸ್ತೈನಿನ ಮುಗ್ದ ಬಾಲಕನೊಬ್ಬನ ಶಿರಚ್ಛೆದ ಮಾಡಿದ್ದಾರೆ. ಇದು ಕಾಶ್ಮೀರದ ಹತ್ಯಾಕಂಡವನ್ನು ನೆನಪಿಸುತ್ತಿದೆ. ಇವರು ಮನುಷ್ಯರಲ್ಲ, ಇವರ ನಂಬಿಕೆಗಳೆ ಇವರನ್ನು ಪ್ರಾಣಿಯನ್ನಾಗಿಸಿವೆ. ಇಂತಹ ಹಂದಿಗಳನ್ನು ಸೆಕ್ಯುಲರ್‌ಗಳು ಬೆಂಬಲಿಸುತ್ತಿದ್ದಾರೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸಿರಿಯಾದ ಉತ್ತರ ಅಲೆಪ್ಪೋದ ಹಂದರಾತ್‌ನಲ್ಲಿ 2016ರ ಹರಕಾತ್ ನೌರ್ ಅಲ್-ದಿನ್ ಅಲ್-ಝೆಂಕಿ ಉಗ್ರಗಾಮಿಗಳು ಕ್ರೂರವಾಗಿ ಪ್ಯಾಲೆಸ್ತೈನ್ ನಿರಾಶ್ರಿತ ಶಿಬಿರದಲ್ಲಿದ್ದ ಅಬ್ದುಲ್ಲಾ ಇಸ್ಸಾ ಎಂಬ 12 ವರ್ಷದ ಬಾಲಕನೊಬ್ಬನ ಶಿರಚ್ಛೆದ ಮಾಡಿದ್ದ ವಿಡಿಯೋ ಆಗಿದೆ. ಇದು 2016ರ ಸಿರಿಯಾ…

Read More

ಸಿನಿಮಾ ಬಿಡುಗಡೆಯಾದ 7 ದಿನಗಳ ನಂತರ ಮಾತ್ರ ವಿಮರ್ಶೆ ಪ್ರಕಟಿಸಬಹುದು ಎಂದು ಕೇರಳ ಹೈಕೋರ್ಟ್ ಆದೇಶಿಸಿಲ್ಲ

ಸಿನಿಮಾ ಬಿಡುಗಡೆಯಾದ 7 ದಿನಗಳ ನಂತರ ವಿಮರ್ಶೆ ಪ್ರಕಟಿಸಿ ಎಂದು ಕೇರಳ ಹೈಕೋರ್ಟ್ ತಾಕೀತು ಮಾಡಿದೆಯೆಂಬ ಪತ್ರಿಕಾ ವರದಿಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರಂಭಿಕ ನಕಾರಾತ್ಮಕ ವಿಮರ್ಶೆಯಿಂದ ಜನರಿಗೆ ಸಿನಿಮಾ ತಲುಪುತ್ತಿಲ್ಲ. ಇದರಿಂದ ಪಾರು ಮಾಡಲು ಈ ಆದೇಶ ಹೊರಡಿಸಿದೆ ಎಂದು ಪ್ರತಿಪಾದಿಸಲಾಗಿದೆ. ಈ ಕುರಿತು ಹುಡುಕಿದಾಗ ‘ಆರೋಮಲಿಂತೆ ಆದ್ಯತೆ ಪ್ರಣಯಂ’ ಸಿನಿಮಾದ ನಿದೇರ್ಶಕ ಮುಬಿನ್ ರೌಫ್ ಸಿನಿಮಾಗಳ ಕುರಿತು ನಕರಾತ್ಮಕ ವಿಮರ್ಶೆ ಪ್ರಕಟಿಸಿರುವುದರ ಕುರಿತು ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ. ಅವರು ಸಿನಿಮಾ ಬಿಡುಗಡೆಯಾದ…

Read More

ಪ್ರಧಾನಿ ಮೋದಿಯವರ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ

ಪ್ರಧಾನಿ ನರೇಂದ್ರ ಮೋದಿಯವರ ವಿಚ್ಛೇದಿತ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಮತ್ತು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ವದೋದರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಜ್‌ತಕ್‌ ವರದಿಯ ಕೆಲವು ಸ್ಕ್ರೀನ್‌ಶಾಟ್‌ಗಳು ಟ್ಟಿಟರ್(‍X)ನಲ್ಲಿ ಹರಿದಾಡುತ್ತಿವೆ. ಕೆಲವರು “ಭಕ್ತರೆ, ಇದು ಕಾಂಗ್ರೆಸ್ಸಿನ ಶಕ್ತಿ, ನೀವು ಜಶೋದಾಬೆನ್‌ರವರನ್ನು  ಬೈಕಾಟ್ ಮಾಡಲು ಸಾಧ್ಯವೇ, ಧೈರ್ಯವಾಗಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ(ಹಿಂದಿಯಲ್ಲಿ ಮೂಲ ಪಠ್ಯ: अन्धभको देखो ये होती है , कांग्रेस की शक्ति, क्या जशोदाबेन को बायकॉर्ट करोगे…

Read More