Fact Check: ಮಕ್ಕಳ ನಿರ್ಲಕ್ಷ್ಯಕ್ಕೆ ನೊಂದ ಕರ್ನಲ್‌ ಹಾಗೂ ಅವರ ಪತ್ನಿ ಆತ್ಮಹತ್ಯೆ ಎಂಬುದು ಕಾಲ್ಪನಿಕ ಕಥೆ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಪೋಸ್ಟ್‌ಗಳು ಇದೀಗ ಇಂತಹದ್ದೆ ಒಂದು ಪೋಸ್ಟ್‌ ವೈರಲ್‌ ಆಗಿದ್ದು ಆ ವೈರಲ್‌ ಪೋಸ್ಟ್‌ನ ಸತ್ಯ ಬಹಿರಂಗಗೊಂಡಿದೆ.. ಸಾಕಷ್ಟು ಮಂದಿ ತಮ್ಮ ಪೋಸ್ಟ್‌ಗಳಿಗೆ ಹೆಚ್ಚು ಲೈಕ್ಸ್‌ ಹಾಗೂ ಕಾಮೆಂಟ್‌ಗಳು ಬರಬೇಕು ಎಂಬ ಕಾರಣಕ್ಕೆ, ಕೆಲವು ಸುಳ್ಳು ಸುದ್ದಿಗಳನ್ನ ಹರಿಬಿಡ್ತಾರೆ. ಇದೀಗ ಇದೇ ರೀತಿಯಾದ ಒಂದು ಪೋಸ್ಟ್‌ ಕಳೆದ 5 ವರ್ಷಗಳಿಂದ ಬೇರೆ ಬೇರೆ ಕತೆಗಳೊಂದಿಗೆ ಶೇರ್‌ ಆಗುತ್ತಿದೆ. ಆ ಪೋಸ್ಟ್‌ನಲ್ಲಿ ಒಂದು “ಮಕ್ಕಳು ತಮ್ಮನ್ನ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ನಿವೃತ್ತ ಕರ್ನಲ್‌ ಹಾಗೂ ಅವರ…

Read More
ಹಮಾಸ್‌ ದಾಳಿಗೆ ಒಳಗಾಗಿರುವ 17 ಮಂದಿ ನೇಪಾಳಿಗರೆ ಹೊರತು ಭಾರತೀಯರಲ್ಲ

ಹಮಾಸ್‌ ದಾಳಿಗೆ ಒಳಗಾಗಿರುವ 17 ಮಂದಿ ನೇಪಾಳಿಗರೆ ಹೊರತು ಭಾರತೀಯರಲ್ಲ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ದ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆಯೇ ಈ ಯುದ್ಧದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಕೂಡ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಈ ಸುದ್ದಿಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುವುದನ್ನು ಪತ್ತೆ ಹಚ್ಚುವುದು ಸಾಕಷ್ಟು ಮಂದಿಗೆ ಸವಾಲಿನ ಕೆಲಸವಾಗಿದೆ. ಇದರ ನಡುವೆ ಇಂತಹದ್ದೇ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಈ ಸುಳ್ಳು ಸುದ್ದಿಯನ್ನು ಭಾರತದ ಕೆಲ ಪಕ್ಷಗಳು ರಾಜಕೀಯ ಲಾಭಗಳಿಗಾಗಿ ಬಳಸಿಕೊಳ್ಳುತ್ತಿವೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ….

Read More

ಕಾಂಗ್ರೆಸ್ ಸರ್ಕಾರ ದಸರಾ ಲೈಟಿಂಗ್ಸ್ ನಲ್ಲಿ ಗುಂಬಾಜ್ ರೀತಿ ಕಮಾನು ನಿರ್ಮಿಸಿದೆ ಎಂಬುದು ಸುಳ್ಳು

ಮೈಸೂರಿನ ಸಾಂಸ್ಕೃತಿಕ ದಸರಾ ಹಬ್ಬಕ್ಕೆ ದೀಪಾಲಂಕಾರ ಮಾಡಿದ ಖಾನ್ ಗ್ರೆಸ್ ಸರ್ಕಾರ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಹೇಳಿಕೆಯ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರ ದಸರಾ ಲೈಟಿಂಗ್ಸ್ ನಲ್ಲಿ ಗುಂಬಾಜ್ ರೀತಿ ಕಮಾನು ನಿರ್ಮಿಸಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್‌: ಇದು 2021ರ ಮೈಸೂರು ದಸರಾದ ಲೈಟಿಂಗ್ ಆಗಿದ್ದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಈ ರೀತಿಯ ಸ್ವಾಗತ ಕಮಾನನ್ನು ನಿರ್ಮಿಸಿತ್ತು. ಇದು…

Read More
ಬಂದೂಕುಧಾರಿ

ಇಸ್ರೇಲ್‌ನಲ್ಲಿ ಬಂದೂಕುಧಾರಿ ವ್ಯಕ್ತಿ ಭಾರತೀಯ ಮಹಿಳೆಯರನ್ನು ಕೊಂದಿದ್ದಾನೆ ಎಂಬುದು ಸುಳ್ಳು ಸುದ್ದಿ

ಪ್ಯಾಲೇಸ್ತೀನ್‌ನ ಹಮಾಸ್‌ನ ಉಗ್ರನೊಬ್ಬ ಇಸ್ರೇಲ್‌ನಲ್ಲಿ ಮನೆಯೊಂದಕ್ಕೆ ನುಗ್ಗಿ ಎದ್ದೇಳಲು ಸಾಧ್ಯವಾಗದ ವಯಸ್ಸಾದ ಮುದುಕಿ ಮತ್ತು ಅವರನ್ನು ನೋಡಿಕೊಳ್ಳಲು ಇದ್ದ ಭಾರತೀಯ ಕೇರ್‌ ಟೇಕರ್‌ ಹುಡುಗಿಯನ್ನು ಕೊಂದಿದ್ದಾನೆ ಎಂದು ಒನ್‌ ಇಂಡಿಯಾ ಕನ್ನಡ ವಿಡಿಯೋ ಪ್ರಸಾರ ಮಾಡಿದೆ. “ಇಸ್ರೇಲ್‌ನಲ್ಲಿ ಭಾರತೀಯರ ಮೇಲೂ ನಡೀತಿದ್ಯಾ ದಾಳಿ? ಮನೆ ಮನೆಗೆ ನುಗ್ತಿದ್ದಾರೆ, ಯಾರನ್ನೂ ಬಿಡ್ತಿಲ್ಲ ಪ್ಯಾಲೆಸ್ರೇನ್ ಉಗ್ರರು” ಎಂಬ ರೋಚಕ ಶೀರ್ಷಿಕೆ ಕೊಟ್ಟು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. 16 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದರೆ, 14 ಲಕ್ಷ…

Read More

ಕೊಯಮತ್ತೂರಿನಲ್ಲಿ ಬಿರಿಯಾನಿ ಜಿಹಾದ್‌ ನಡೆಯುತ್ತಿದೆ ಎಂಬುದು ಸುಳ್ಳು

ಸಮಾಜದಲ್ಲಿ ಕೋಮು ಸಾಮಾರಸ್ಯ ಕದಡಲು ಕೆಲ ಕಿಡಿಗೇಡಿಗಳು ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳನ್ನು ಹಬ್ಬುತ್ತಲೇ ಇದ್ದಾರೆ. ಇದೀಗ ಇಂತಹದ್ದೆ ಒಂದು ಸುದ್ದಿಯನ್ನು ವ್ಯಾಪಕವಾಗಿ ಹಬ್ಬಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳು ಸಮಾಜದ ಸಾಮರಸ್ಯ ಕದಡಲು ಪ್ರಯತ್ನಿಸಿದ್ದಾರೆ. “ಕೊಯಮತ್ತೂರಿನಲ್ಲಿ ಬಿರಿಯಾನಿ ಜೆಹಾದ್.. ಮುಸಲ್ಮಾನರಿಂದ ಲೈಂಗಿಕ ಸಾಮರ್ಥ್ಯದ ಮೇಲೆ ಹಾರ್ಮೋನಿನ ಪರಿಣಾಮಗಳನ್ನು ಬೀರುವ ಡಗ್ಸ್‌ಗಳನ್ನ ಮಿಶ್ರಣ ಮಾಡಿ ಬಿರಿಯಾನಿ ತಯಾರಿಸಿ ಅದನ್ನು ಹಿಂದೂಗಳಿಗೆ ಮಾರಲಾಗುತ್ತಿತ್ತು. ಈಗ ಈ ಬಿರಿಯಾನಿ ಜಿಹಾದ್‌ ಮಾಡುತ್ತಿದ್ದವರನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ” ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ…

Read More

ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಫೆಲೆಸ್ತೀನ್ ಮಹಿಳೆಯರು ಭಾರತೀಯ ಧ್ವಜಗಳನ್ನು ಹಿಡಿದಿಲ್ಲ

ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಫೆಲೆಸ್ತೀನ್ ಮಹಿಳೆಯರು ಭಾರತೀಯ ಧ್ವಜಗಳನ್ನು ಹಿಡಿದು ಉತ್ತರ ಗಾಝಾದಿಂದ ಪಲಾಯನ ಮಾಡುತ್ತಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: 06 ಸೆಪ್ಟೆಂಬರ್ 2023ರ ಮೊದಲ ವಾರದಲ್ಲಿ ನಡೆದ ಅರ್ಬೀನ್ ನಡಿಗೆಗಾಗಿ ಇರಾಕ್‌ನ ಕರ್ಬಾಲಾ ನಗರಕ್ಕೆ ಪ್ರಯಾಣಿಸುವಾಗ ಭಾರತೀಯ ಯಾತ್ರಿಕರು ಭಾರತದ ಧ್ವಜಗಳನ್ನು ಹಿಡಿದಿದ್ದಾರೆ. ಈ ತೀರ್ಥಯಾತ್ರೆಯು ಆಶುರಾ ಎಂಬ ಧಾರ್ಮಿಕ ಆಚರಣೆಯನ್ನು ಸೂಚಿಸುತ್ತದೆ. ಇದು ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಮೂರನೇ ಶಿಯಾ ಇಮಾಮ್ ಹುಸೇನ್ ಇಬ್ನ್ ಅಲಿ…

Read More

ಇಸ್ರೇಲ್ ಸೈನಿಕರು ಗುಂಡುಗಳಿಗೆ ಹಂದಿ ಕೊಬ್ಬಿನ ಜಿಡ್ಡು ಹಚ್ಚಿದ್ದಾರೆ ಎಂಬುದು ಸುಳ್ಳು

ಇಸ್ರೇಲಿ ಸೈನಿಕರು ಬುಲೆಟ್‌ಗಳಿಗೆ ಹಂದಿಯ ಕೊಬ್ಬಿನಿಂದ ನಯಗೊಳಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಸ್ಲಾಮಿಕ್ ಭಯೋತ್ಪಾದಕರೊಂದಿಗೆ ವ್ಯವಹರಿಸಲು ಇದು ಪರಿಪೂರ್ಣ ಮಾರ್ಗವಾಗಿದೆ, ಏಕೆಂದರೆ ಅವರು ಸಾವಿಗೆ ಹೆದರುವುದಿಲ್ಲ, ಅವರು ಅಪವಿತ್ರವಾಗಿರಲು ಮಾತ್ರ ಹೆದರುತ್ತಾರೆ ಮತ್ತು 72 ಹೂಗಳನ್ನು(ವರ್ಜಿನ್) ಪಡೆಯುವುದಿಲ್ಲ! #IStandWithIsrael ಎಂಬ ಬರಹದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಯಹೂದಿ ಧರ್ಮ ಮತ್ತು ಇಸ್ಲಾಂ ಧರ್ಮಗಳೆರಡೂ ಹಂದಿಮಾಂಸ ಮತ್ತು ಅದರ ಉತ್ಪನ್ನಗಳನ್ನು ನಿಷೇಧಿಸಿವೆ(ಇದನ್ನು ನ್ಯಾಷನಲ್ ಲೈಬ್ರರಿ  ಆಫ್ ಮೆಡಿಸಿನ್ ಸಹ ವರದಿ ಮಾಡಿದೆ)….

Read More

ಕಾಂಗ್ರೆಸ್‌ಗೆ ದಿಗ್ವಿಜಯ ಸಿಂಗ್‌ ರಾಜೀನಾಮೆ ನೀಡಿದ್ದಾರೆ ಎಂಬುದು ಸುಳ್ಳು.!

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪತ್ರವೊಂದು ಉತ್ತರ ಭಾರತದ ರಾಜಕೀಯದಲ್ಲಿ ಬಹುದೊಡ್ಡ ಸಂಚಲನವನ್ನ ಸೃಷ್ಟಿಸಿದೆ, ಈ ಪತ್ರದ ಸತ್ಯಾಸತ್ಯತೆಯನ್ನ ಪರಿಶೀಲಿಸದೆ ಅದೆಷ್ಟೋ ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೌದು.. ನಿನ್ನೆ ಸಂಜೆಯಿಂದ ಟಿಕೆಟ್‌ ಹಂಚಿಕೆ ವಿಚಾರದಲ್ಲಿ  ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಅವರು ಕೋಪಗೊಂಡಿದ್ದಾರೆ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಈ ಸುದ್ದಿಯನ್ನ ದೇಶಾದ್ಯಂತ ಇರುವ ಕಾಂಗ್ರೆಸ್‌ನ ಹಲವು ಕಾರ್ಯಕರ್ತರನ್ನು…

Read More

ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿಲ್ಲ

ಇಸ್ರೇಲ್ ಮತ್ತು ಪ್ಯಾಲೆಸ್ಟೈನಿನ ಯುದ್ಧದ ಕಾವು ಎಲ್ಲಾ ರಂಗಗಳಿಗೂ ಹರಡಿದ್ದು , ಪ್ರಸ್ತುತ ನಡೆಯುತ್ತಿರುವ ICC ಏಕದಿನ ವಿಶ್ವಕಪ್ 2023ರಲ್ಲಿ ಸಹ ಪ್ರತಿಫಲಿಸುತ್ತಿದೆ. ಇತ್ತೀಚೆಗೆ ಭಾರತದ ಪ್ರತಿಭಾನ್ವಿತ ಬೌಲರ್ ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾದ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿದ್ದಾರೆ ಎಂಬ ಟ್ವಿಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಕ್ಟೋಬರ್ 14, 2023 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದಲ್ಲಿ ಭಾರತವು…

Read More

ಪ್ಯಾಲೇಸ್ಟೈನಿಗರು ಮೇಕಪ್ ಬಳಸಿಕೊಂಡು ಯುದ್ಧದ ಗಾಯಳುಗಳಂತೆ ನಟಿಸುತ್ತಿದ್ದಾರೆ ಎಂಬುದು ಸುಳ್ಳು

ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧವನ್ನು ಧರ್ಮಗಳ ಆಧಾರದಲ್ಲಿ ನೋಡುವ ಕ್ರಮವೊಂದು ನಿರ್ಮಾಣವಾಗಿದೆ. ಭಾರತದಲ್ಲಿಯೂ ಸಹ ಹಿಂದು-ಮುಸ್ಲಿಂ ಸಮುದಾಯಗಳು ಪರ-ವಿರೋಧದ ಹೆಸರಿನಲ್ಲಿ ಸುಳ್ಳುಗಳನ್ನು ಹಂಚಿಕೊಳ್ಳುತ್ತಿವೆ. ಇತ್ತೀಚೆಗೆ “ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ವಿಕ್ಟಿಮ್ ಕಾರ್ಡ್ ಗೆ ಸ್ವಾಗತ. ಇಲ್ಲಿ ನೀವು ರಾಸಾಯನಿಕವನ್ನು ಬಳಸಿಕೊಂಡು ಪೂರ್ಣ ಮೇಕಪ್ ಮಾಡುವುದು ಮತ್ತು ಅಳುವುದು ಹೇಗೆ ಎಂದು ಕಲಿಯಬಹುದು ಮತ್ತು ನಂತರ ಇಸ್ರೇಲ್ ಅನ್ನು ದೂಷಿಸಬಹುದು. ಈ ವಿಶ್ವವಿದ್ಯಾಲಯವು ಮಹಿಳೆಯರು ಮತ್ತು ಸಣ್ಣ ಮಕ್ಕಳಿಗೆ ವಿಶೇಷ ರಿಯಾಯಿತಿಯನ್ನು ಹೊಂದಿದೆ.” ಎಂಬ ಹೇಳಿಕೆಯ ವಿಡಿಯೋ ಒಂದು…

Read More