ಹಮಾಸ್‌ನವರು ಇಸ್ರೇಲಿ ಗರ್ಭಿಣಿ ಮಹಿಳೆಯೊಬ್ಬಳ ಹೊಟ್ಟೆ ಸೀಳಿ ಕ್ರೌರ್ಯ ಮೆರೆದಿದ್ದಾರೆ ಎನ್ನುವುದು ಸುಳ್ಳು

“ದಕ್ಷಿಣ ಇಸ್ರೇಲ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳ ಪತ್ತೆ ಮಾಡಿದ ಹಮಾಸ್ ಭಯೋತ್ಪಾದಕರು  ಆಕೆಯ ದೇಹವನ್ನು ಸೀಳಿ ಅವರ ಹೊಕ್ಕುಳ ಬಳ್ಳಿಯಿಂದ ಭ್ರೂಣವನ್ನು ಹೊರತೆಗೆದು, ಹುಟ್ಟಲಿರುವ ಮಗು ತನ್ನ ತಾಯಿಯ ಗರ್ಭದಿಂದ ನಿಧಾನವಾಗಿ ಸಾಯುವಂತೆ ಮಾಡಿದ್ದಾರೆ. ಅಮಾನವೀಯ ಅನಾಗರಿಕರಾದ ಹಮಾಸ್ ಜನರಿಗೆ ಮಾಡುತ್ತಿರುವುದು ಇದನ್ನೇ” ಎಂದು ಆದಿತ್ಯ ರಾಜ್ ಕೌಲ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಂತರ ಈ ಸುದ್ದಿಯನ್ನು ಹಲವರು ಹಂಚಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: 10 ಆಕ್ಟೋಬರ್ 2023ರಂದು 9ಟಿವಿ ನೆಟ್ವರ್ಕ್‌ನ ಸುದ್ದಿ…

Read More

Fact Check : ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ದೇವಸ್ಥಾನ ಸುತ್ತುತ್ತಿದ್ದಾರೆಂದು ಹಳೆ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಗಾಂಧಿ ಕೆಂಪು ಸೀರೆ ಧರಿಸಿ ದೇವಾಸ್ಥಾನದ ಗಂಟೆ ಬಾರಿಸುತ್ತಿರುವ ಫೋಟೋವೊಂದು ವ್ಯಾಪಕವಾಗ ಹಂಚಿಕೊಳ್ಳಲಾಗುತ್ತಿದೆ. ಆದರೆ ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದಲ್ಲಿ ಸಾಕಷ್ಟು ಮಂದಿ ಪ್ರಿಯಾಂಕ ಗಾಂಧಿ ಚುನಾವಣ ಪ್ರಚಾರಕ್ಕಾಗಿ ದೇವಸ್ಥಾನಕ್ಕೆ ತೆರಳುವ ನಾಟಕ ಮಾಡುತ್ತಿದ್ದಾರೆ ಎಂದು ಬರೆದುಕೊಳ್ಳುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವ್ಯಕ್ತಿಯೊಬ್ಬ, “ರಾಜಸ್ತಾನ, ಮಧ್ಯಪ್ರದೇಶ, ಚತ್ತೀಸ್‌ಘಡದಲ್ಲಿ ಚುನಾವಣೆ ಬರುತ್ತಿದೆ. ಅಜ್ಜಿಯ ಸೀರೆ ಪೆಟ್ಟಿಗೆಯಿಂದ ಆಚೆ ಬಂದಿದೆ. ಆದರೆ ನೀವು ಈ ಚುನಾವಣೆಯಲ್ಲಿ ಯಾವ ಲಾಭವನ್ನು ಪಡೆಯಲೂ ಸಾಧ್ಯವಿಲ್ಲ” ಎಂಬ ಅರ್ಥದಲ್ಲಿ…

Read More

2021ರ UPSC ಪರೀಕ್ಷೆಯ ಟಾಪರ್ ಶ್ರುತಿ ಶರ್ಮಾ ಸುರೇಶ್ ಚವ್ಹಾಣ್ ಅವರ ಪುತ್ರಿಯಲ್ಲ

ಸುದರ್ಶನ್ ಚಾನೆಲ್‌ನ ಮುಖ್ಯ ಸಂಪಾದಕರಾದ ಸುರೇಶ್ ಚವ್ಹಾಣಕೆ ಅವರ ಮಗಳು ಶೃತಿ ಶರ್ಮ UPSC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಸುರೇಶ್ ಚವ್ಹಾಣಕೆಯವರು ಹಿಂದೂ-ಮುಸ್ಲೀಮರ ನಡುವೆ ದ್ವೇಷಭಾಷಣ ಮಾಡುತ್ತಾರೆ. ಆದರೆ ಅವರೇ ತಮ್ಮ ಮಗಳು ಅತಿ ಹೆಚ್ಚು ಅಂಕಗಳಿಸಲಿ ಎಂದು ಮುಸ್ಲಿಂ ವಿಶ್ವವಿದ್ಯಾಲಯವಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಓದಿಸಿದ್ದಾರೆ ಎಂದು ಆರೋಪಿಸಿದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಪೋಟೋದಲ್ಲಿರುವ ಹುಡುಗಿ ಶೃತಿ ಶರ್ಮಾ 2021ರ UPSC ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಅವರ…

Read More

Fact Check : ಸ್ಮೃತಿ ಇರಾನಿ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಹಿಂದೆ ಮಾತನಾಡಿದ ವಿಡಿಯೋ ತುಣುಕೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ಲಿಪ್‌ನಲ್ಲಿ, ಇರಾನಿ ಸಂಸತ್ತಿನಲ್ಲಿ ಮಾತನಾಡುತ್ತಾ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ 2016 ರಲ್ಲಿ ಸ್ಮೃತಿ ಇರಾನಿಯವರ ಸಂಸದೀಯ ಭಾಷಣದ ಮೂಲ ವೀಡಿಯೊಗೆ ಇದಾಗಿದೆ ಎಂದು ತಿಳಿದು ಬಂದಿದೆ, ಇದು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಶ್ರೀಮತಿ. ಸ್ಮೃತಿ ಇರಾನಿ ಅವರು…

Read More
ದಸರಾ

ದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ

ಮೈಸೂರು – ಬೆಂಗಳೂರು ನಡುವೆ 160/- ರೂ ಇದ್ದ ಬಸ್ ಟಿಕೆಟ್‌ ದರ 185/- ರೂ ಮಾಡಿ ಇನ್ನೂ ಎರಡುವರೆ ತಿಂಗಳು ಕಳೆದಿಲ್ಲ ಆಗಲೇ 200/- ರೂಪಾಯಿಗೆ ಏರಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಒಬ್ಬರಿಂದ ವಸೂಲಿ ಮಾಡಿ ಮತ್ತೊದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ ಬ್ಬರಿಗೆ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ಳೋದು ಅಂದರೆ ಇದೇ ನೋಡಿ ಬಸ್ ಟಿಕೆಟ್‌ಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸ್ಪಷ್ಟೀಕರಣ ಪಡೆಯಲು KSRTC…

Read More

ಕೇರಳದಲ್ಲಿ ನಡೆದ ಬಾಂಬ್ ಸ್ಪೋಟದ ಹಿಂದೆ ಮುಸ್ಲಿಮರ ಕೈವಾಡವಿದೆ ಎಂಬುದು ಸುಳ್ಳು

ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆ ಭಯೋತ್ಪಾಧನೆಯಂತಹ ದುರ್ಘಟನೆ ಸಂಭವಿಸಿದಾಗಲೆಲ್ಲಾ ಮೊದಲು ಶಂಕೆ ಪಡುವುದು ಮುಸ್ಲಿಂ ಸಮುದಾಯದ ಮೇಲೆಯೆ. ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಉಗ್ರರು ಭಯೋತ್ಪಾಧನೆಯಲ್ಲಿ ತೊಡಗಿಕೊಂಡಿರುವುದರಿಂದ ಈ ಪೂರ್ವಾಗ್ರಹಗಳು ಹುಟ್ಟಿಕೊಂಡಿವೆ. ಆದರೆ ಭಾರತದಲ್ಲಿಯೂ ಸಹ ಮುಸ್ಲಿಂ ಸಮುದಾಯದವರನ್ನು ಉಗ್ರರು, ಭಯೋತ್ಪಾದಕರೆಂದು ಕರೆಯುವ ಕೆಟ್ಟ ಪದ್ದತಿಯೊಂದು ರೂಢಿಯಲ್ಲಿದೆ. ಹೀಗೆ ಸುಳ್ಳು ಅಪವಾದಕ್ಕೆ ಗುರಿಯಾದ ಅನೇಕ ಮುಸ್ಲಿಂ ಯುವಕರ ಬದುಕು ನರಕವಾಗಿ ಬದಲಾಗಿದೆ, ಇಂತಹ ಆರೋಪಗಳಿಂದ ಖಿನ್ನತೆ, ಆತ್ಮಹತ್ಯೆಯಂತವುಗಳಿಗೆ ಸಹ ಕಾರಣವಾಗುತ್ತಿವೆ. ಇಂತಹದ್ದೇ ಇನ್ನೋಂದು ಆರೋಪವೊಂದು ಈಗ ಕೇಳಿ ಬರುತ್ತಿದೆ….

Read More

ಶಾರುಕ್‌ ಖಾನ್‌ ಪ್ಯಾಲೆಸ್ಟೈನ್‌ ಧ್ವಜದ ಜಾಕೆಟ್‌ ಹಾಕಿದ್ದರು ಎಂಬುದು ಸುಳ್ಳು

ಕಳೆದ ಕೆಲವು ದಿನಗಳಿಂದ ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಯುದ್ಧ ತೀವ್ರವಾಗುತ್ತಿದ್ದು ಈ ಯುದ್ಧಕ್ಕೆ ಸಂಬಂಧಿಸಿದಂತೆ ಪ್ಯಾಲೆಸ್ಟೈನ್‌ ಹಾಗು ಇಸ್ರೇಲ್‌ಗೆ ಹಲವಾರು ಮಂದಿ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌ ಪ್ಯಾಲೆಸ್ಟೈನ್‌ಗೆ ಬೆಂಬಲಿಸುವ ಉದ್ದೇಶದಿಂದ ಪ್ಯಾಲೆಸ್ಟೈನ್‌ ಧ್ವಜಕ್ಕೆ ಹೋಲಿಕೆಯಾಗುವ ಜಾಕೆಟ್‌ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. Fact Check : ಈ ಸುದ್ದಿಯ ಕುರಿತು ಸತ್ಯಾಸತ್ಯತೆಯಯನ್ನು ಪರಿಶೀಲಿಸಿದಾಗ ಶಾರುಕ್‌ ಖಾನ್‌ ಅವರ ಈ ಚಿತ್ರವನ್ನು Dubaibliss.com…

Read More
ಬಲ್ಗೇರಿಯಾ

ಈ ರಸ್ತೆಯ ಫೋಟೋ ಕರ್ನಾಟಕದ್ದಲ್ಲ, ಬದಲಿಗೆ ಬಲ್ಗೇರಿಯಾ ದೇಶದ್ದು

ಭಾಗ್ಯಗಳಿಂದ ಖಜಾನೆ ಖಾಲಿ ಆಗುತ್ತಿದೆ, ಆದರೂ ನಾವು ಅಭಿವೃದ್ದಿ ಕಾರ್ಯ ನಿಲ್ಲಿಸಲ್ಲ… ದುಂದುವೆಚ್ಚ ಕಮ್ಮಿ ಮಾಡಿ ವಾಹನದ ಚಕ್ರಗಳಿಗೆ ಹಾನಿ ಆಗದಂತೆ ಡಾಂಬರ್ ಹಾಕಿಸಿದ್ದೀವಿ… ನಾವು ಜನರ ಪರ… – ಇಂತಿ ನಿಮ್ಮ ನಿದ್ದೆರಾಮಯ್ಯ ಎಂದು ರಸ್ತೆಯ ಎರಡು ಬದಿಗೆ ಮಾತ್ರ ಡಾಂಬರ್ ಹಾಕಿರುವ ಫೋಟೊವೊಂದನ್ನು ಫೇಸ್‌ಬುಕ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬಹುತೇಕ ಬಿಜೆಪಿ ಬೆಂಬಲಿಗರು ಈ ಪೋಸ್ಟ್ ಹಂಚಿಕೊಂಡಿದ್ದು, ಆ ಮೂಲಕ ಕರ್ನಾಟಕದ ಬಳಿ  ಹಣ ಇಲ್ಲದೆ ಕಳಪೆ ರಸ್ತೆ ಮಾಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಫ್ಯಾಕ್ಟ್ ಚೆಕ್…

Read More
ಹಿಂದುತ್ವ Hindutva

ಹಿಂದುತ್ವ ‘ಚುನಾವಣಾ ಆಟ ಆಡುವ ಕಾರ್ಡ್’ ಎಂದು ನರೇಂದ್ರ ಮೋದಿಯವರು ಹೇಳಿಲ್ಲ

‘ಹಿಂದುತ್ವ ಚುನಾವಣಾ ಆಟ ಆಡುವ ಕಾರ್ಡ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇದು 24 ವರ್ಷಗಳ ಹಿಂದೆ ಜೀ ನ್ಯೂಸ್‌ನವರು ನಡೆಸಿದ ನರೇಂದ್ರ ಮೋದಿಯವರ ಸಂದರ್ಶನದ ಹಳೆಯ ವಿಡಿಯೋ ಆಗಿದೆ. ಮೂಲ ಸಂದರ್ಶನದಲ್ಲಿ ವೈರಲ್ ಆಗುತ್ತಿರುವ ಹೇಳಿಕೆಗೆ ವ್ಯತಿರಿಕ್ತವಾಗಿ “ಹಿಂದುತ್ವ ಕೇವಲ ಚುನಾವಣಾ ಆಟ ಆಡುವ ಕಾರ್ಡ್ ಅಲ್ಲ” ಎಂದು ಮೋದಿಯವರು ಹೇಳಿದ್ದಾರೆ. ಅವರ ಕೊನೆಯ ಪದ “ಅಲ್ಲ” ಎಂಬುದನ್ನು ತೆಗೆದುಹಾಕಿ, ಎಡಿಟ್…

Read More

Fact Check : ತೆಲಂಗಾಣ ಚುನಾವಣ ಪ್ರಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮದ್ಯ ಸೇವಿಸಿದ್ದರು ಎಂಬುದು ಸುಳ್ಳು

ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ತೆಲಂಗಾಣದ ಚುನಾವಣ ಪ್ರಚಾರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಚಾರ ಕಾರ್ಯದಲ್ಲಿ ಭಾಷಣ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ತೆಲಂಗಾಣದ ಗ್ಯಾರಂಟಿಗಳು ಕರ್ನಾಟಕದ ಗ್ಯಾರಂಟಿಗಳಿಗಿಂತ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಇರಿಸು ಮುರಿಸು ಉಂಟಾಗುವಂತೆ ನಡೆದುಕೊಂಡಿದ್ದರು. ಇನ್ನು ತೆಲಂಗಾಣದ ತಂದೂರ್‌ನಲ್ಲಿ ನಡೆದ ಈ ಪ್ರಚಾರ ಕಾರ್ಯದಲ್ಲಿ ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ಸಾಕಷ್ಟು ಮಂದಿ ಎಕ್ಸ್‌ ಬಳಕೆದಾರರು  ಡಿಕೆಶಿ ಕುಡಿದು ಪ್ರಚಾರ ಮಾಡಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ….

Read More