ಸ್ವಾತಂತ್ರ್ಯ ಹೋರಾಟ

Fact Check:1946 ಮತ್ತು 1956 ರ ನಡುವೆ 53 ದೇಶಗಳು ಸ್ವಾತಂತ್ರ್ಯ ಹೋರಾಟವಿಲ್ಲದೆ, ವಿಭಜನೆ ಇಲ್ಲದೆ ಸ್ವಾತಂತ್ರ್ಯಗೊಂಡಿವೆ ಎಂಬುದು ಸುಳ್ಳು

ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮ ಗಾಂಧೀಜಿ ಮತ್ತು ಜವಹರಲಾಲ್ ನೆಹರು ಅವರು ಕೊಡುಗೆಗಳು ಅಪಾರ. ಕೇವಲ ಕೆಲವು ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಸ್ವಾತಂತ್ರ್ಯ ಚಳುವಳಿಯನ್ನು ಭಾರತದ ಉದ್ದಗಲಕ್ಕೂ ತಲುಪುವಂತೆ ಮಾಡಿ, ಜನರನ್ನು ಸಂಘಟಿಸಲು ಸಾಧ್ಯವಾಗಿದ್ದು ಮಹಾತ್ಮ ಗಾಂಧಿಯವರಿಂದ. ಅವರು ರೂಪಿಸಿದ ಅಸಹಕಾರ ಚಳುವಳಿ, ದಂಡಿ ಮೆರವಣಿಗೆ, ಉಪ್ಪಿನ ಸತ್ಯಗ್ರಹ ಮತ್ತು ಸೈಮನ್ ಗೋ ಬ್ಯಾಕ್‌ ಚಳುವಳಿಗಳಿಂದ ಯಾವುದೇ ರಕ್ತಪಾತವಿಲ್ಲದೇ ಅಹಿಂಸೆಯ ಮೂಲಕ ಬೃಹತ್ ಹೋರಾಟವನ್ನು ಕಟ್ಟಬಹುದು ಮತ್ತು ಪ್ರಭುತ್ವಕ್ಕೆ ಸವಾಲಾಗಬಹುದು ಎಂದು ಜಗತ್ತಿಗೆ ನಿರೂಪಿಸಿ ತೋರಿಸಿದವರು. ಇನ್ನೂ…

Read More

Fact Check | ಬಾಂಗ್ಲಾದಲ್ಲಿ ದುರ್ಗಾ ಪೂಜೆ ವಿರೋಧಿಸಿ ಮುಸ್ಲಿಮರಿಂದ ದೇವಸ್ಥಾನದ ಒಳಗೆ ನಮಾಜ್ ಎಂಬುದು ಎಡಿಟೆಡ್‌ ಫೋಟೋ

“ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಭೀಕರ ದಾಳಿಯನ್ನು ಅಲ್ಲಿನ ಮೂಲಭೂತವಾದಿ ಮುಸಲ್ಮಾನರು ನಡೆಸುತ್ತಿದ್ದಾರೆ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ಯಾವುದೇ ಹಿಂದೂಗಳು ದುರ್ಗ ಪೂಜೆ ನಡೆಸದಂತೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ಅಲ್ಲಿನ ಕೆಲ ಮುಸಲ್ಮಾನರು ದುರ್ಗಾ ಮಾತೆಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹದ ಮುಂದೆ ನಮಾಜ್‌ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಹೀಗೆ ಅಲ್ಲಿನ ಹಿಂದೂಗಳು ಈ ರೀತಿಯ ಕಿರುಕುಳವನ್ನು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ” ಎಂದು ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ಕೂಡ ಮುಸಲ್ಮಾನರು ದುರ್ಗಾ ದೇವಿಯ ವಿಗ್ರಹದ ಮುಂದೆ…

Read More
ದುರ್ಗಾ ಮಾತೆ

Fact Check: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಧ್ವಂಸಗೊಳಿಸಿರುವವನು ಮಾನಸಿಕ ಅಸ್ವಸ್ತ. ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ

ಕೆಲವು ದಿನಗಳ ಹಿಂದೆಯಷ್ಟೇ ದಸರ ಹಬ್ಬ ಮತ್ತು ದುರ್ಗಾ ಪೂಜೆ ಮುಗಿಸಿದೆ. ಆದರೆ ಈಗ ದುರ್ಗಾ ದೇವಿಯ ಮುರಿದ ವಿಗ್ರಹ ಮತ್ತು ಪೂಜೆಯ ಸಾಮಾನುಗಳು ದೇವಾಲಯದ ತುಂಬಾ ಹರಡಿಕೊಂಡಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋವನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ. ಈ ವಿಡಿಯೋವನ್ನು”ಅತಿರೇಕ: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನಿ ಹೈದರಾಬಾದ್ ಅಲ್ಲ, ಕಾಂಗ್ರೆಸ್ ಆಡಳಿತದ ಭಾರತೀಯ ಹೈದರಾಬಾದ್” ಎಂದು ಕೆಲವು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಅನ್ನು…

Read More

Fact Check | ಏರ್‌ ಶೋನಲ್ಲಿ ಪೈಲೆಟ್‌ ಅದ್ಭುತ ಪ್ರದರ್ಶನ ಎಂದು ರಿಮೋಟ್ ಕಂಟ್ರೋಲ್ಡ್‌ ಜೆಟ್‌ ಮಾಡಲ್‌ ವಿಡಿಯೋ ಹಂಚಿಕೆ

ಈ ವಿಡಿಯೋವನ್ನು ನೋಡಿ ಭಾರತದ ಏರ್‌ಶೋ ಇತಿಹಾಸದಲ್ಲೇ ಇದೊಂದು ಅದ್ಭುತವಾದ ಪ್ರದರ್ಶನ, ನಾವು ಸಾಕಷ್ಟು ಏರ್‌ಶೋಗಳನ್ನು ನೋಡಿರುತ್ತೇವೆ ಆದರೆ ಈ ರೀತಿಯ ಅದ್ಭುತವಾದ ಪ್ರತಿಭೆಯುಳ್ಳ ಫೈಲೆಟ್‌ನ ಸಾಮಾರ್ಥ್ಯವನ್ನು ಪ್ರದರ್ಶಿಸಿದ ಏರ್‌ಶೋ ಇದು ಎಂದರೆ ತಪ್ಪಾಗುವುದಿಲ್ಲ. ಒಂದು ಏರ್‌ಕ್ರಾಫ್ಟ್‌ ಅನ್ನು ಹೀಗೂ ಬಳಸಲಾಗುತ್ತದೆ ಎಂಬುದು ನಮಗೆ ಇದೇ ಮೊದಲ ಬಾರಿಗೆ ತಿಳಿದು ಬಂದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದಲ್ಲಿ ಕೂಡ ಏರ್‌ಕ್ರಾಫ್ಟ್‌ ಹಾರುತ್ತಿರುವುದು, ಅದರ ಹಾರಾಟದ ಬಳಿಯೇ ಕೆಲವರು ನಿಂತಿರುವುದು ಕೂಡ ಕಂಡು ಬರುತ್ತಿದೆ….

Read More

Fact Check | ಭಾರತದ ಮುಸಲ್ಮಾನರು ಕ್ರೈಸ್ತರ ಚರ್ಚ್‌ಗಳನ್ನು ಸುಟ್ಟು ಹಾಕುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿ

“ಕಳೆದ ರಾತ್ರಿ 20 ಚರ್ಚುಗಳನ್ನು ಸುಟ್ಟುಹಾಕಲಾಯಿತು ಮತ್ತು ಇಂದು ರಾತ್ರಿ ಅವರು “ಒಲಿಸಾಬಾಂಗ್ ಪ್ರಾಂತ್ಯ” ದಲ್ಲಿ 200 ಕ್ಕೂ ಹೆಚ್ಚು ಚರ್ಚುಗಳನ್ನು ನಾಶಮಾಡಲು ಬಯಸುತ್ತಾರೆ. ಅವರು ಮುಂದಿನ 24 ಗಂಟೆಗಳಲ್ಲಿ 200 ಮಿಷನರಿಗಳನ್ನು ಕೊಲ್ಲಲು ಬಯಸುತ್ತಾರೆ. ಎಲ್ಲಾ ಕ್ರಿಶ್ಚಿಯನ್ನರು ಹಳ್ಳಿಗಳಲ್ಲಿ ಅಡಗಿಕೊಂಡಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ ಮತ್ತು ಪ್ರಪಂಚದಾದ್ಯಂತ ನಿಮಗೆ ತಿಳಿದಿರುವ ಎಲ್ಲಾ ಕ್ರಿಶ್ಚಿಯನ್ನರಿಗೆ ಈ ಸಂದೇಶವನ್ನು ಕಳುಹಿಸಿ.” ಎಂಬ ಬರಹವೊಂದನ್ನು ವಾಟ್ಸ್‌ಆಪ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. Hey this just came down through…

Read More
ಎಐ ಚಿತ್ರಗಳು

Fact Check: ರಾಮಾಯಣ ಕಾಲದ ಕುಂಭಕರ್ಣನ ದೈತ್ಯ ಖಡ್ಗ ಪತ್ತೆಯಾಗಿದೆ ಎಂದು ಎಐ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೃಹತ್ ಖಡ್ಗ ಒಂದರ ಪೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ಖಡ್ಗವು ರಾಮಾಯಣ ಕಾಲದ ಕುಂಬಕರ್ಣನ ಖಡ್ಗ ಎಂದು ಪ್ರತಿಪಾದಿಸಲಾಗುತ್ತಿದೆ. ಇದೇ ರೀತಿಯ ಅನೇಕ ಪ್ರತಿಪಾದನೆಗಳನ್ನು ಕೆಲವು ಬಲಪಂಥೀಯರು ಹರಿಬಿಡುತ್ತಿದ್ದು ಆಸ್ಟ್ರೇಲಿಯಾ ದೇಶ ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ “ಅಸ್ತ್ರಾಲಯ” ಎಂಬ ಪ್ರದೇಶವಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದೆ. ಬೃಹತ್ ಖಡ್ಗವನ್ನು ಹಂಚಿಕೊಂಡಿರುವ ಕೆಲವರು “ಕುಂಭಕರ್ಣನ ಖಡ್ಗ ಪತ್ತೆ ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕುಂಭಕರ್ಣನ ಖಡ್ಗ ಪತ್ತೆ…

Read More
ಅಶ್ವಿನಿ ವೈಷ್ಣವ್

Fact Check: ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನದಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. “ವಂದೇ ಭಾರತ್, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳ ತ್ರಿವೇಣಿ” ಎಂದು ವಿಡಿಯೋ ಜೊತೆಗೆ ಶೀರ್ಷಿಕೆ ಬರೆದುಕೊಂಡಿದ್ದರು. ವಿಡಿಯೋದಲ್ಲಿ ವಿಸ್ಟಾ ಡೋಮ್ ರೈಲೊಂದನ್ನು ತೋರಿಸಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲ್ವೆ ಇಲಾಖೆಯನ್ನು ಅಭಿವೃದ್ದಿ ಮಾಡುತ್ತಿದೆ ಎಂಬ ಸಂದೇಶವನ್ನು ವಿಡಿಯೋ ಹೊಂದಿತ್ತು. ಸಚಿವರು ವಿಡಿಯೋ ಪೋಸ್ಟ್ ಮಾಡಿದ್ದ ಸ್ವಲ್ಪ ಹೊತ್ತಿನಲ್ಲೇ ಅದನ್ನು…

Read More
ಪಾಕಿಸ್ತಾನ

Fact Check: ಪಾಕಿಸ್ತಾನ ಸೇನೆಯು ಪಶ್ತೂನ್ ಮತ್ತು ಬಲೂಚ್‌ ಜನರಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ವಿಯೆಟ್ನಾಂನ ಜೈಲಿನ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ

ಸಣ್ಣ ಕೋಣೆಗಳಲ್ಲಿ ಕೆಲವು ಜನರನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವನ್ನು “ಪಾಕಿಸ್ತಾನ ಸೇನೆಯ ಜೈಲುಗಳಲ್ಲಿ ಪಶ್ತೂನ್ ಮತ್ತು ಬಲೂಚ್ ಮೇಲೆ ನಡೆಸಿದ ಕ್ರೌರ್ಯಗಳು ಹೇಳಲಾಗದವು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಮಾಹಿತಿ ಸುಳ್ಳಾಗಿದ್ದು, ವಿಯೆಟ್ನಾಂನ ಕಾನ್ ಡಾವೊ ಎಂಬ ಕಾರಾಗೃಹವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ, ಅದನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ನಮ್ಮ ತಂಡ ವೈರಲ್ ಪೋಸ್ಟ್ ಅನ್ನು…

Read More
ವಕ್ಫ್ ತಿದ್ದುಪಡಿ

Fact Check: ವಕ್ಫ್ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ಮುಸ್ಲಿಮರ ಪ್ರತಿಭಟನೆ ಎಂದು ಕಾಲಾ ತಾಜಿಯಾ ಮೆರವಣಿಗೆಯ ವಿಡಿಯೋ ಹಂಚಿಕೆ

ಆಗಸ್ಟ್ 8, 2024 ರಂದು, ವಕ್ಫ್ (ತಿದ್ದುಪಡಿ) ಮಸೂದೆ, 2024 ಮತ್ತು ಮುಸ್ಲಿಂ ವಕ್ಫ್ (ರದ್ದತಿ) ಮಸೂದೆ, 2024 ಎಂಬ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ದೇಶದ ಅನೇಕ ಮುಸ್ಲಿಂ ಸಂಘಟನೆಗಳು ಈ ಮಸೂದೆಯ ವಿರುದ್ಧ ಧ್ವನಿ ಎತ್ತಿ ಪ್ರತಿಭಟನೆ ನಡೆಸಿದವು. ಈಗ ಈ ಪ್ರತಿಭಟನೆಗಳಿಗೆ ಹೋಲಿಸಿ ವೀಡಿಯೊ ಒಂದು ವೈರಲ್ ಆಗಿದ್ದು, ದೆಹಲಿಯ ಕನ್ನಾಟ್ ಪ್ಲೇಸ್ ರಸ್ತೆ ತಡೆ ನಡೆಸುವ ಮೂಲಕ ಮುಸ್ಲಿಮರು ವಕ್ಫ್ ಮಂಡಳಿ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟಿಸಿದರು ಎಂದು ಹೇಳಲಾಗಿದೆ. ಈ ಒಂದು…

Read More

Fact Check: ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಗೆ ಥಳಿಸುವ ವಿಡಿಯೋವನ್ನು ಅನೇಕ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಬೈಕ್‌ ನಲ್ಲಿ ಬರುವ ಹುಡುಗ ಮತ್ತು ಹುಡುಗಿಗೆ ಗುಂಪೊಂದು ಅಮಾನವೀಯವಾಗಿ ಥಳಿಸುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಯುವಕನ ಜೊತೆಗೆ ಅಪ್ರಾಪ್ತ ಹಿಂದೂ ಬಾಲಕಿ ಓಡಿಹೋಗುತ್ತಿದ್ದ ಸಂದರ್ಭ ಹಿಂದೂ ಸಂಘಟನೆಯ ಯುವಕರು ಹಿಡಿದು ಆತನಿಗೆ ಬುದ್ಧಿ ಕಲಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ವೀಡಿಯೋವನ್ನು “ಮುಸ್ಲಿಂ ಹುಡುಗ “ಹಿಂದೂ ಅಪ್ರಾಪ್ತ ಬಾಲಕಿ”ಯೊಂದಿಗೆ ಓಡಿಹೋಗುತ್ತಿದ್ದನು; ಮುಂದೆ ಏನಾಯಿತು, ಇದು ಈ ಸಮಯದ ಅಗತ್ಯ – ಜನರು ತಪ್ಪಾದ ಸಂದರ್ಭದಲ್ಲಿ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ…

Read More