ಕ್ಯಾ. ಪ್ರಾಂಜಲ್ ಕುರಿತು ಸಿಎಂ ಸಿದ್ದರಾಮಯ್ಯನವರ ಅರ್ಧ ಹೇಳಿಕೆ ಹಂಚಿ ತಪ್ಪಾಗಿ ಅರ್ಥೈಸಿದ ಸಂಸದ ತೇಜಸ್ವಿ ಸೂರ್ಯ

ಕಳೆದ ನವೆಂಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಕರ್ನಾಟಕದ ಯೋಧ ಕ್ಯಾ. ಪ್ರಾಂಜಲ್ ರವರ ಸಾವಿಗೆ ಇಡೀ ರಾಜ್ಯದ ಜನರು ಸಂತಾಪ ಸೂಚಿಸಿದ್ದರು. ಮಾನ್ಯ ಮುಖ್ಯಮಂತ್ರಿಗಳು ಸಹ ಪ್ರಾಂಜಲ್‌ರವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿ 50 ಲಕ್ಷದಷ್ಟು ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದು ತಡವಾಗುತ್ತಿದ್ದಂತೆ ಬಿಜಿಪಿ ಕಾರ್ಯಕರ್ತರು ಸೇರಿದಂತೆ ಹಲವು ಮಾಧ್ಯಮಗಳು ಸಹ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರನ್ನು ಟೀಕಿಸುತ್ತಿದ್ದಾರೆ.ಈಗ, ಕ್ಯಾ. ಪ್ರಾಂಜಲ್ ಯಾರು? ಯಾವಾಗ…

Read More

Fact Check | ರಾಹುಲ್ ಗಾಂಧಿಯವರನ್ನು ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸಲಾಗಿತ್ತು ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬಲು ಪ್ರಾರಂಭವಾಗಿದೆ. ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಆಡಳಿತರೂಢ ಬಿಜೆಪಿಯ ವಿರುದ್ಧ ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದೇ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ರಾಜಕೀಯವಾಗಿ ಜನಸಾಮಾನ್ಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬುವುದು ವಾಸ್ತವಾಗಿದೆ.   “ಇತ್ತೀಚೆಗೆ  2001ರಲ್ಲಿ ಅಮೆರಿಕದಲ್ಲಿ 1.60 ಲಕ್ಷ ಅಮೆರಿಕನ್ ಡಾಲರ್ ಮತ್ತು ಮಾದಕ ವಸ್ತುಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ…

Read More

Fact Check | ಭಾರತವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ವ್ಯಂಗ್ಯವಾಡಿ ಪ್ರಶ್ನಿಸಿದೆ ಎಂಬುದು ಸುಳ್ಳು

“ಇಸ್ರೇಲ್ ಜೊತೆ ಭಾರತೀಯ ನಿಲುವು ? ನಮ್ಮನ್ನು ಬೆಂಬಲಿಸಲು ನಿಮಗೆ ಕೇಳಿದವರು ಯಾರು? ನಿಮ್ಮ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಶೇಕಡ ಒಂದರಷ್ಟು ಪ್ರಯತ್ನ ನಡೆದಿಲ್ಲ. ಒಂದು ದಿನದಲ್ಲಿ ಕನಸು ಕಾಣುವುದನ್ನು ನಿಲ್ಲಿಸಿ. ” ಎಂದು ಇಸ್ರೇಲ್‌ ಟ್ವೀಟ್‌ ಮಾಡಿದೆ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ನ ಮೂಲಕ ಭಾರತದ ವಿರುದ್ಧ ಇಸ್ರೇಲ್‌ ಈ ಹಿಂದೆಯಿಂದ ಅಮಾಧನ ಹೊಂದಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದೇ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ…

Read More

ಫೋನ್‌ನಲ್ಲಿ ವಸುಂಧರ ರಾಜೆಯವರು ಮಾತನಾಡುತ್ತಿರುವ ಹಳೆಯ ವಿಡಿಯೋ ರಾಜಸ್ಥಾನ ಚುನಾವಣೆಗೆ ಸಂಬಂಧಿಸಿಲ್ಲ

ಪಂಚರಾಜ್ಯಗಳ ಚುನಾವಣೆಗಳು ಮುಗಿದರೂ ಸಹ ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಇನ್ನೂ ಹರಿದಾಡುತ್ತಲೆ ಇವೆ. ರಾಜಸ್ತಾನದ ಚುನಾವಣೆಯ ಸಂದರ್ಭದಲ್ಲಿಯೂ ಸಹ ಹಲವಾರು ಸುಳ್ಳು ಸುದ್ದಿಗಳು ಹರಿದಾಡಿದ್ದು, ರಾಜಕೀಯ ಪಕ್ಷಗಳಿಗೆ ಇಂತಹ ಸುಳ್ಳು ಸುದ್ದಿಗಳು ಜನರ ಮತವನ್ನು ಗಳಿಸುವ ರಾಜಕೀಯ ಅಸ್ತ್ರವಾಗಿ ಬದಲಾಗಿವೆ. ಈಗ, ರಾಜಸ್ತಾನದ ಮಾಜಿ ಮಖ್ಯಮಂತ್ರಿ ವಸುಂಧರ ರಾಜೇಯವರು ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆಯೇ? ವಸುಂಧರಾ ರಾಜೆ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ ಅವರಿಗೆ ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಎಂಬ ವಿಡಿಯೋ ಒಂದು…

Read More

18 ನೇ ಶತಮಾನದ ಸಾಕ್ಷಾರತೆಯ ಸಮಿಕ್ಷೆಯಲ್ಲಿ ಉತ್ತರ ಭಾರತ 97%, ದಕ್ಷಿಣ ಭಾರತ 100% ಸಾಧಿಸಿತ್ತು ಎಂಬುದು ಸುಳ್ಳು

ಅನೇಕರು ಇವತ್ತಿನ ಆಧುನಿಕ ಇಂಗ್ಲೀಷ್ ಶಿಕ್ಷಣದ ಬದಲಿಗೆ ಭಾರತದಲ್ಲಿ ಹಿಂದೆ ರೂಢಿಯಲಿದ್ದ ಗುರುಕುಲ ಆಶ್ರಮ ವ್ಯವಸ್ಥೆಯನ್ನೇ ಫುನಃ ಅಳವಡಿಸಿಕೊಳ್ಳಬೇಕು ಎಂದು ವಾದಿಸಿದರೆ ಇನ್ನೂ ಅನೇಕರು ಗುರುಕುಲ ವ್ಯವಸ್ಥೆಯಲ್ಲಿ ಎಲ್ಲರಿಗೂ ಮುಕ್ತವಾಗಿ ಶಿಕ್ಷಣ ನೀಡಲಾಗುತ್ತಿರಲಿಲ್ಲ ಬದಲಿಗೆ ಅಲ್ಲಿ ಉಚ್ಛ ಕುಲ ಅಥವಾ ವರ್ಗದವರಿಗೆ ಮಾತ್ರ ಶಿಕ್ಷಣ ನೀಡಲಾಗುತ್ತಿತ್ತು. ಆದ್ದರಿಂದ ಗುರುಕುಲ ವ್ಯವಸ್ಥೆಯಲ್ಲಿ ಅಸಮಾನೆತಗಳಿದ್ದು ಇವತ್ತಿನ ಆಧುನಿಕ ಶಿಕ್ಷಣವೇ ಸರಿ ಎಂದು ವಾದಿಸುವವರಿದ್ದಾರೆ. ಇತ್ತೀಚೆಗೆ ಇಂತಹದ್ದೇ ಸುದ್ದಿಯೊಂದು ವೈರಲ್ ಆಗುತ್ತಿದ್ದು, ಇಂಗ್ಲೆಂಡಿನಲ್ಲಿ ಮೊದಲ ಶಾಲೆ 1811 ರಲ್ಲಿ ಪ್ರಾರಂಭವಾಯಿತು. ಆ…

Read More

Fact Check | ಫಿಲಿಫೈನ್ಸ್‌ನಲ್ಲಿ ನಡೆದ ಭೂಕಂಪದ ವಿಡಿಯೋ ಎಂದು ಜಪಾನ್‌ ,ತೈವಾನ್‌ ಭೂಕಂಪದ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇದು ಮೊನ್ನೆ ಮೊನ್ನೆ ಫಿಲಿಫೈನ್ಸ್‌ನಲ್ಲಿ ನಡೆದಿರುವ ಭೀಕರ ಭೂಕಂಪನದ ವಿಡಿಯಯೋಗಳು. ಸುಮಾರು 7.8 ತೀವ್ರತೆಯ ಭೂಕಂಪದಲ್ಲಿ ಸಾಕಷ್ಟ ಮಂದಿ ಸಾವನ್ನಪ್ಪಿದ್ದಾರೆ.” ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭೂಕಂಪನದ ಭಯಾನಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಮೊನ್ನೆ ಮೊನ್ನೆ ನಡೆದ ಫಿಲಿಫೈನ್‌ನ ಭೂಕಂಪಕ್ಕೂ ಈ ವಿಡಿಯೋಗಳಿಗೂ ಹೊಂದಾಣಿಕೆ ಕಂಡು ಬಂದಿಲ್ಲ. ಹಾಗಾಗಿ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ…

Read More
Halal

Fact Check: ಉಗುಳದೆ ಹಲಾಲ್ ಅಪೂರ್ಣ ಎಂದು ಮುಸ್ಲಿಮರು ತಮಿಳುನಾಡಿನ ನ್ಯಾಯಾಲಯದಲ್ಲಿ ವಾದಿಸಿಲ್ಲ

ಇತ್ತೀಚೆಗೆ ಹಲಾಲ್‌ಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲಾಲ್ ಎಂದರೆ ಏನು ಎಂಬ ಕುರಿತು ತಿಳಿದುಕೊಳ್ಳದೆ ಹಲಾಲ್‌ಗೆ ಸಂಬಂಧಿಸಿದಂತೆ ತಪ್ಪಾಗಿ ಅರ್ಥಿಸಲಾಗುತ್ತಿದೆ. ಇನ್ನೂ ಉತ್ತರ ಪ್ರದೇಶದ ಸರ್ಕಾರವು ಹಲಾಲ್‌ಗೆ ಸಂಬಂಧಿಸಿದ ಯಾವುದೇ ಆಹಾರವನ್ನು, ಬಳಸುವುದು, ಶೇಕರಿಸುವುದು ಮತ್ತು ಮಾರಾಟ ಮಾಡುವುದನ್ನು ತನ್ನ ರಾಜ್ಯದ ವ್ಯಾಪ್ತಿಯೊಳಗೆ ನಿಷೇಧಿಸಿದೆ. ಈಗ, ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರವನ್ನು ಹಲಾಲ್ ಮಾಡಲು ಉಗುಳುವುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ತಮಿಳುನಾಡಿನ ನ್ಯಾಯಾಲಯದ ಪ್ರಕರಣದಲ್ಲಿ, ಅಡುಗೆಯವರು ಉಗುಳದ ಹೊರತು ಹಲಾಲ್ ಪೂರ್ಣವಾಗುವುದಿಲ್ಲ ಎಂದು…

Read More
Survey

Fact Check: ದರೋಡೆಕೋರರ ತಂಡವೊಂದು ಸರ್ಕಾರಿ ಸಮೀಕ್ಷೆಯ ನೆಪದಲ್ಲಿ ನಿಮ್ಮ ಮನೆಗೆ ಬರುತ್ತದೆ ಎಂಬುದು ಸುಳ್ಳು

ಜಾತಿ ಜನಗಣತಿ ನಡೆಸುವ ಕುರಿತು ಪರ ವಿರೋಧಗಳ ಚರ್ಚೆಯ ಬೆನ್ನಲ್ಲೆ ಜನಗಣತಿಯ ಸಮೀಕ್ಷೆಯ ಕುರಿತು ಮತ್ತು ಸರ್ಕಾರಿ ಯೋಜನೆಯಾದ ಆಯು‍ಷ್ಮಾನ್ ಭಾರತದ ಕುರಿತು ಸುಳ್ಳು ಸುದ್ದಿಯೊಂದು ಹಲವಾರು ವರ್ಷಗಳಿಂದ ಹರಿದಾಡುತ್ತಿದೆ. ಎಲ್ಲಾ ಫ್ಲಾಟ್ / ಮನೆ ಮಾಲೀಕರಿಗೆ ಹೈ ಅಲರ್ಟ್, ದರೋಡೆಕೋರರ ಗುಂಪೋಂದು ಜನಗಣತಿಯ ನೆಪದಲ್ಲಿ ಅಥವಾ ಆಯುಷ್ಮಾನ್ ಸರ್ಕಾರಿ ಯೋಜನೆ ಭಾಗವಾಗಿ ನಿಮ್ಮ ಮನೆಗೆ ಬರುತ್ತಾರೆ. ಅವರು ಗೃಹ ಸಚಿವಾಲಯದ ಸ್ಟಾಂಪ್ ಮತ್ತು ಲೆಟರ್ ಹೆಡ್ ಅನ್ನು ಹೊಂದಿದ್ದು, ಗುರುತಿನ ಚೀಟಿಗಳು ಸಹ ಇವೆ. ಇದು…

Read More

Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಜನ ಮಾಜಿ ಸಿಬ್ಬಂದಿಗಳ ಶಿಕ್ಷೆಯನ್ನು ಕತಾರ್‌ ರದ್ದು ಮಾಡಿದೆ. ಮೋದಿ ಮತ್ತು ತನ್ನ ಅಧಿಕೃತ ಹೇಳಿಕೆಯಲ್ಲಿ ನಮಗೆ ಭಾರತದ ಸ್ನೇಹವೇ ಮುಖ್ಯವೆಂದು ಹೇಳಿದೆ. ಇದು ಮೋದಿ ಸರ್ಕಾರದ ಶಕ್ತಿ” ಎಂದು ಪ್ರಧಾಣಿ ಮೋದಿ ಅವರ ಫೋಟೋದೊಂದಿಗೆ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಕಳೆದ ತಿಂಗಳು ಕತಾರ್‌ನ ನ್ಯಾಯಾಲಯವು ಕತಾರ್ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವ ಒಮಾನಿ ಕಂಪನಿಯಿಂದ ನೇಮಕಗೊಂಡ ಎಂಟು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ…

Read More
DMK

Fact Check: ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೊಳಿಸಿದೆ ಎಂಬುದು ಸುಳ್ಳು

ತಮಿಳುನಾಡಿನ ಡಿಎಂಕೆ ಪಕ್ಷ ಮತ್ತು ಕೇರಳಾದ ಕಮುನಿಸ್ಟ್‌ ಪಕ್ಷದ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಎರಡೂ ಪಕ್ಷಗಳೂ ಹಿಂದು ವಿರೋಧಿ ಪಕ್ಷಗಳು ಎಂಬಂತೆ ಬಿಂಬಿಸಲಾಗುತ್ತಿದೆ. ತಮಿಳುನಾಡಿನ ಸಚಿವ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ರವರ ಮಗನಾದ ಉದಯನಿಧಿ ಸ್ಟಾಲಿನ್ “ಸನಾತನ” ಧರ್ಮದ ಬಗ್ಗೆ ಮಾಡಿದ ಟೀಕೆಯ ನಂತರ ಇಂತಹ ಅಪಪ್ರಚಾರಗಳು ಇನ್ನೂ ಹೆಚ್ಚಾಗಿವೆ. ಇತ್ತೀಚೆಗೆ, ತಮಿಳುನಾಡಿನ ಕ್ರಿಶ್ಚಿಯನ್ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪ್ರಾಚೀನ ಶಿವಲಿಂಗವನ್ನು ತೆರವುಗೊಳಿಸಿ, ಹಿಂದೂ ವಿರೋಧಿ ನಡೆ ಅನುಸರಿಸಿದೆ ಎಂಬ…

Read More