Pramod Belagod

ಪಾಕಿಸ್ತಾನ ಧ್ವಜ

Fact Check: ಬಾಗ್ಪತ್‌ನಲ್ಲಿ ಯುವಕರು ಸಾಗಿಸುತ್ತಿದ್ದ ಧಾರ್ಮಿಕ ಧ್ವಜವು ಪಾಕಿಸ್ತಾನದ ಧ್ವಜವಲ್ಲ ಎಂದು ಯುಪಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ

ಇತ್ತೀಚೆಗೆ ಮುಸ್ಲಿಂ ಧರ್ಮದ ಮತ್ತು ಕೆಲವು ಮುಸ್ಲಿಂ ಸಂಘಟನೆಗಳ ಹಸಿರು ಧ್ವಜವನ್ನು ಎಲ್ಲಿ ಹಾರಿಸಿದರೂ ಸಹ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈಗ ಅದೇ ರೀತಿ, ಉತ್ತರ ಪ್ರದೇಶದ ಬಾಗ್ಪತ್‌ನ ಸಿಂಘವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮೀನಗರ್ ಸರಾಯ್‌ನಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ ಆರೋಪದ ಮೇಲೆ ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ ಧ್ವಜವನ್ನುಮುಸ್ಲಿಂ ಯುವಕರು ಹಾರಿಸಿದ್ದಾರೆ ಎಂದು ಆರೋಪಿಸಿ ಟೀಕಿಸಲಾಗುತ್ತಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು….

Read More
ಲಂಚ

Fact Check: ಲಂಚದ ಪ್ರಕರಣದಲ್ಲಿ ಬಂಧಿಸಿದ ಮುಸ್ಲಿಂ ಪೊಲೀಸ್ ಅಧಿಕಾರಿಯನ್ನು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಎಂದು ತಪ್ಪಾಗಿ ಹಂಚಿಕೆ

ತನ್ನ ಸ್ನೇಹಿತರಿಗೆ ಕೋಟ್ಯಂತರ ರೂಪಾಯಿ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಕ್ಕಾಗಿ ಕಾನ್ಪುರದ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳುವ ವೀಡಿಯೊವೊಂದರಲ್ಲಿ ಇದನ್ನು ಆರೋಪಿಸಲಾಗಿದೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದು, “ಪೊಲೀಸ್ ದ್ರೋಹಿ: ಇತ್ತೀಚಿನ ಸುದ್ದಿ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿಎಸ್ಪಿಯಾಗಿ ಕೆಲಸ ಮಾಡುತ್ತಿದ್ದ ಶಹನವಾಜ್ ಖಾನ್ ಅವರನ್ನು ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಕೋಟ್ಯಂತರ ರೂ.ಗಳೊಂದಿಗೆ ಭ್ರಷ್ಟಾಚಾರ ನಿಗ್ರಹ ತಂಡ ಬಂಧಿಸಿದೆ. ಅವನು ತನ್ನ ಸ್ನೇಹಿತರಿಗೆ ಬಂದೂಕುಗಳು, ಪಿಸ್ತೂಲ್ ಇತ್ಯಾದಿಗಳನ್ನು…

Read More
ವರ್ಚುವಲ್ ಅರೆಸ್ಟ್‌

Fact Check: ವರ್ಚುವಲ್ ಅರೆಸ್ಟ್‌ ಎಂದು ನಿಮ್ಮ ಕಾಂಟಾಕ್ಟ್ ಡಿಟೈಲ್ಸ್ ಅಳಿಸುತ್ತೇನೆ ಎನ್ನುವ ಫೋನ್ ಕರೆ ವಂಚನೆಯಾಗಿದೆ, ಹುಷಾರ್!

ಕಳೆದ ಅನೇಕ ವರ್ಷಗಳಿಂದ ಪೋನ್ ಕಾಲ್ ಮೂಲಕ ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವು ದಿನಗಳಿಂದ “ನಿಮ್ಮ ಮೇಲೆ ವರ್ಚುವಲ್ ಅರೆಸ್ಟ್‌ ವಾರಂಟ್ ಜಾರಿಯಾಗಿದೆ” ಎಂದು ವೀಡಿಯೋ ಕಾಲ್ ಮೂಲಕ ಬೆದರಿಸಿ ಹಣ ವರ್ಗಾಯಿಸಿಕೊಂಡಿರುವ ಪ್ರಕರಣಗಳು ಬಯಲಿಗೆ ಬಂದಿವೆ. ಈಗ ಉಡುಪಿಯಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, +918822309328 ಸಂಖ್ಯೆಯಿಂದ ಕರೆ ಮಾಡಿ ಟೆಲಿಕಾಮ್ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ ದಿಂದ ಕರೆ ಮಾಡುತ್ತಿದ್ದು ನಿಮ್ಮ ಮೊಬೈಲ್ ನಂಬರ್ ನಲ್ಲಿ ಅನೈತಿಕ ಜಾಹಿರಾತು ಹಾಗೂ ಕಿರುಕುಳ…

Read More
ಭಾರತ

Fact Check: ಗ್ವಾಟೆಮಾಲಾದಲ್ಲಿ ರಸ್ತೆಯಿಂದ ನೀರು ಹೊರಬರುವ ವೀಡಿಯೋವನ್ನು ಭಾರತದ್ದು ಎಂದು ವೈರಲ್ ಆಗಿದೆ

ಬೈಕ್‌ಗಳು ಮತ್ತು ಕಾರುಗಳು ಹಾದುಹೋಗುವಾಗ ರಸ್ತೆಯ ಬಿರುಕುಗಳ ಒಳಗಿನಿಂದ ನೀರು ಹಾರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕರು ಈ ವೀಡಿಯೋವನ್ನು ಹಂಚಿಕೊಂಡು, ಇದು ಭಾರತೀಯ ರಸ್ತೆಗಳ ಸ್ಥಿತಿ ಎಂದು ಮತ್ತು ಇಲ್ಲಿನ ತಂತ್ರಜ್ಞಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯವಾಗಿ ಟೀಕಿಸಲಾಗುತ್ತಿದೆ.   ಫ್ಯಾಕ್ಟ್‌ ಚೆಕ್: ವೈರಲ್ ವೀಡಿಯೋವನ್ನು ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಸೆಪ್ಟೆಂಬರ್ 13 ರಿಂದ ಕ್ಲೈಮಾ ಗ್ವಾಟೆಮಾಲಾ ಎಂಬ ಖಾತೆಯಿಂದ ಪೋಸ್ಟ್‌ ಒಂದು ನಮಗೆ ಲಭ್ಯವಾಗಿದ್ದು, ಹೆಚ್ಚುವರಿ ಮಳೆನೀರು ಪೆಸಿಫಿಕ್…

Read More

Fact Check: ಹರಿಯಾಣದಲ್ಲಿ ಆರ್‌ಎಸ್‌ಎಸ್‌ ಮೆರವಣಿಗೆ ಎಂದು ಕೇರಳದ ಹಳೆಯ ವಿಡಿಯೋ ವೈರಲ್

ಕೇರಳದ ಮಲಪ್ಪುರಂನ ತನೂರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸದಸ್ಯರು ಮೆರವಣಿಗೆ ನಡೆಸುತ್ತಿರುವ ಹಳೆಯ ವೀಡಿಯೊವನ್ನು 2024 ರ ಅಕ್ಟೋಬರ್ 1 ರಂದು ರಾಜ್ಯ ಚುನಾವಣೆಗೆ ಮುಂಚಿತವಾಗಿ ಹರಿಯಾಣದ ಇತ್ತೀಚಿನ ಮೆರವಣಿಗೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಆಗಸ್ಟ್ 29, 2024 ರಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ, ಹಿರಿಯ ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ಹರಿಯಾಣ ಚುನಾವಣಾ ನಿರ್ವಹಣಾ ಸಮಿತಿ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೂಲ ಗುಂಪು ಬುಧವಾರ ರಾತ್ರಿ ಹರಿಯಾಣದ…

Read More
ಇಸ್ಕಾನ್

Fact Check: ಬಾಂಗ್ಲಾದೇಶದ ಪ್ರವಾಹ ಸಂತ್ರಸ್ತರಿಗೆ ಇಸ್ಕಾನ್ ಸದಸ್ಯರು ಆಹಾರ ವಿತರಿಸುತ್ತಿರುವ ವೈರಲ್ ವಿಡಿಯೋ ಹಳೆಯದು

ಇತ್ತೀಚಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಂಗ್ಲಾದೇಶದಲ್ಲಿ ಪ್ರವಾಹವು ಹಾನಿಯನ್ನುಂಟುಮಾಡುತ್ತಿರುವಾಗ, ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ಕಂಡ ನಂತರ, ಇಸ್ಕಾನ್ ಭಕ್ತರು ಪ್ರವಾಹ ಪೀಡಿತರಿಗೆ ಆಹಾರವನ್ನು ವಿತರಿಸುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಮಧ್ಯೆ ಇಸ್ಕಾನ್ ದೇವಾಲಯದ ಸದಸ್ಯರು ಕೈಗೊಂಡ ಪರಿಹಾರ ಕಾರ್ಯಗಳನ್ನು ವೀಡಿಯೊ ತೋರಿಸುತ್ತದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಪಾದಿಸಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಹಿಂದೂ ವಿರೋಧಿ ಹಿಂಸಾಚಾರ ಮತ್ತು ದೇವಾಲಯಗಳ ಮೇಲಿನ ದಾಳಿಯ ಹೊರತಾಗಿಯೂ ಇಸ್ಕಾನ್ ಸದಸ್ಯರು ಬಾಂಗ್ಲಾದೇಶದ ಪ್ರವಾಹ…

Read More
ಬಾಂಗ್ಲಾದೇಶ

Fact Check: ಮುಸ್ಲಿಮರು ನೀರಿನಲ್ಲಿ ಪ್ರಾರ್ಥಿಸುತ್ತಿರುವ ಹಳೆಯ ಫೋಟೋವನ್ನು 2024ರ ಬಾಂಗ್ಲಾದೇಶ ಪ್ರವಾಹಕ್ಕೆ ಸಂಬಂದಿಸಿದ್ದು ಎಂದು ವೈರಲ್

ಮುಸ್ಲಿಂ ಪುರುಷರ ಗುಂಪು ಎದೆಯ ಆಳದ ನೀರಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಇದು ಬಾಂಗ್ಲಾದೇಶದಲ್ಲಿ ಪ್ರಸ್ತುತ 2024 ರ ಪ್ರವಾಹಕ್ಕೆ ಸಂಬಂಧಿಸಿದೆ ಎಂದು ಪೋಸ್ಟ್ ಹೇಳಿಕೊಂಡಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ವೈರಲ್ ಚಿತ್ರದ ಬಗ್ಗೆ ಗೂಗಲ್ ಲೆನ್ಸ್ ಹುಡುಕಾಟವು ನಮ್ಮನ್ನು ‘ಮಿಲಾನೊ ಫೋಟೋ ಫೆಸ್ಟಿವಲ್‘ ವೆಬ್ಸೈಟ್‌ಗೆ ನಿರ್ದೇಶಿಸಿತು. ಇಲ್ಲಿ, ವಿಶ್ವ ಜಲ ದಿನದ ಫೋಟೋ ಸ್ಪರ್ಧೆ 2022 ರ ಬಗ್ಗೆ ಲೇಖನದಲ್ಲಿ ಕಾಣಿಸಿಕೊಂಡ ಅದೇ…

Read More

Fact Check: ಕರ್ನಾಟಕದಲ್ಲಿ ಮುಸ್ಲಿಂ ವ್ಯಕ್ತಿಗೆ ಚೂರಿಯಿಂದ ಇರಿದ ಹಳೆಯ ಪ್ರಕರಣವನ್ನು ಇತ್ತೀಚೆಗೆ ಹರಿಯಾಣದಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿದೆ

ತೀವ್ರವಾಗಿ ಗಾಯಗೊಂಡ ವ್ಯಕ್ತಿಯು ನೆಲದ ಮೇಲೆ ಮಲಗಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಟೋವನ್ನು ಹಿಂದೂ ದೇವತೆ ಸೀತೆಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಹರಿಯಾಣದ ಮೇವಾತ್‌ನ ಮುಸ್ಲಿಂ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹಂಚಿಕೊಳ್ಳುವವರು ಹೇಳಿದ್ದಾರೆ.  ಪೋಸ್ಟ್ ಹಿಂಸಾತ್ಮಕ ಸ್ವರೂಪದಿಂದ ಇರುವುದರಿಂದ ನಾವು ಅದರ ಆರ್ಕೈವ್ ಅನ್ನು ಸೇರಿಸುವುದನ್ನು ತಪ್ಪಿಸಿದ್ದೇವೆ. ಫ್ಯಾಕ್ಟ್‌ ಚೆಕ್: ವೈರಲ್ ಹೇಳಿಕೆ ಸುಳ್ಳಾಗಿದ್ದು, ಈ ಘಟನೆ 2022 ರಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿಯನ್ನು ತೋರಿಸುತ್ತದೆ. ಈ ಪ್ರಕರಣದಲ್ಲಿ ಆರೋಪಿಯನ್ನು…

Read More
ಪ್ರಕಾಶ್ ರಾಜ್

Fact Check: ಇಂಡೋನೇಷ್ಯಾದಲ್ಲಿ RSS ಇಲ್ಲದ ಕಾರಣ ಅಲ್ಲಿ ಕೋಮುಗಲಭೆ ಇಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿಲ್ಲ

ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳುತ್ತಿರುವ ನಟ ಪ್ರಕಾಶ್‌ ರಾಜ್ ಅವರು ರಾಜಕೀಯ ವಿಶ್ಞೇಷಕರು ಸಹ ಆಗಿದ್ದಾರೆ. ಕೇಂದ್ರ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಆಗಾಗ ತಮ್ಮ ಮೊನಚಾದ ಮೂತುಗಳಿಂದ ತಿವಿಯುತ್ತಿರುತ್ತಾರೆ. ಹೀಗಾಗಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ಬೆಂಗಲಿಗರ ಕೆಂಗಣ್ಣಿಗೆ ಸಹ ಇವರು ಗುರಿಯಾಗಿದ್ದಾರೆ. ಈಗ, “ಇಂಡೋನೇಷ್ಯಾದಲ್ಲಿ ಶೇ.90ರಷ್ಟು ಮುಸ್ಲಿಮರು ಮತ್ತು ಶೇ.2ರಷ್ಟು ಹಿಂದೂಗಳಿರುವ ದೇಶದಲ್ಲಿ 11,000 ದೇವಾಲಯಗಳಿವೆ, ಆದರೆ ಅಲ್ಲಿ…

Read More
ಲವ್ ಜಿಹಾದ್

Fact Check: ಮಲೇಶಿಯಾದಲ್ಲಿ ಸಹೋದರಿಯನ್ನು ಥಳಿಸಿದ ಸಹೋದರನ ಹಳೆಯ ವಿಡಿಯೋವನ್ನು ‘ಲವ್ ಜಿಹಾದ್’ ಎಂದು ಹಂಚಿಕೊಳ್ಳಲಾಗುತ್ತಿದೆ

ಮುಸ್ಲಿಂ ಯುವಕನೊಬ್ಬ ಹಿಂದೂ ಸಮುದಾಯದ ಯುವತಿಯನ್ನು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಅನೇಕರು “ಲವ್ ಜಿಹಾದ್” ಎಂದು ಆರೋಪಿಸಿ ಮುಸ್ಲಿಂ ಸಮುದಾಯವನ್ನು ನಿಂದಿಸುತ್ತಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾಧನೆಗಳ ಹೆಚ್ಚಿನ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್:  ಈ ಹೇಳಿಕೆ ಸುಳ್ಳು ಮತ್ತು ಈ ವೀಡಿಯೊದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಈ ವೀಡಿಯೊ 2022 ರ ಹಿಂದಿನದು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು…

Read More