Pramod Belagod

ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿ ಮತ್ತು SC ಮೀಸಲಾತಿಯನ್ನು ಕರ್ನಾಟಕ ಸರ್ಕಾರ ನೀಡಲು ಮುಂದಾಗಿಲ್ಲ

ಬಾಂಗ್ಲಾ ವಲಸಿಗರಿಗೆ ತಲಾ 5 ಎಕರೆ ಭೂಮಿ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂಬ ಹೇಳಿಕೆಯಿರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ವಾಟ್ಸಾಪ್‌ ನಲ್ಲಿ ಕಂಡುಬಂದ ಪ್ರತಿಪಾದನೆಯಲ್ಲಿ, “ಬಾಂಗ್ಲಾದೇಶದ ಒಬ್ಬೊಬ್ಬ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿಯನ್ನು ಕೊಡುತ್ತಿರುವ ರಾಜ್ಯ ಸರ್ಕಾರ”..? ಹಿಂದೂಗಳೇ ಎತ್ತ ಸಾಗುತ್ತಿದೆ ಕರ್ನಾಟಕ.?…” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್: ಸತ್ಯಶೋಧನೆಗಾಗಿ ನಾವು ವಾಟ್ಸಾಪ್‌ ಫಾರ್ವರ್ಡ್ ಮೆಸೇಜ್‌ನಲ್ಲಿರುವ ಇಂಗ್ಲಿಷ್ ವರದಿಯನ್ನು ಗಮನಿಸಿದ್ದೇವೆ. ಇದು ಟೈಮ್ಸ್ ಆಫ್‌…

Read More

Fact Check: ವ್ಯಕ್ತಿಯೊಬ್ಬ ಚಪ್ಪಲಿಯನ್ನು ಧರಿಸಿ ಆಲೂಗಡ್ಡೆಗಳನ್ನು ತೊಳೆಯುತ್ತಿರುವ ವೀಡಿಯೋ ಉತ್ತರ ಪ್ರದೇಶದ್ದು ಎಂಬುದಕ್ಕೆ ಆಧಾರಗಳಿಲ್ಲ

ಕೆಲವು ದಿನಗಳಿಂದ ಒಬ್ಬ ವ್ಯಕ್ತಿಯು ತನ್ನ ಪಾದಗಳನ್ನು ಬಳಸಿ ಆಲೂಗಡ್ಡೆಯನ್ನು ತೊಳೆಯುತ್ತಿರುವುದನ್ನು ಚಿತ್ರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದು ಸಹರಾನ್‌ಪುರದ ಇತ್ತೀಚಿನ ವೀಡಿಯೊ ಎಂದು ಹೇಳಿಕೊಳ್ಳಲಾಗಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಧರಿಸಿ ಆಲೂಗೆಡ್ಡೆಗಳನ್ನು ತುಳಿಯುವ ವೀಡಿಯೋ ಎಕ್ಸ್‌(ಟ್ವಿಟರ್)ನಲ್ಲಿ ವೈರಲ್ ಆಗಿದೆ. ಅನೇಕರು ಈ ವೀಡಿಯೋ ತುಣುಕನ್ನು ಹಂಚಿಕೊಂಡು “ಅಂಗಡಿ- “ಕುಮಾರ್ ಸ್ವೀಟ್”. ಗುಣಮಟ್ಟ- ಸಮೋಸ, ಆಲೂ ಪುರಿ ಸಬ್ಜಿ. ವಿಳಾಸ- ಘಂಟಾಘರ್ ಹತ್ತಿರ, ಸಹರಾನ್ಪುರ್, ಯುಪಿ. ಈಗ “ಕುಮಾರ್ ಸ್ವೀಟ್” ಆಗಿರುವುದರಿಂದ ಯಾರ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲ.” ಎಂಬ ಶೀರ್ಷಿಕೆಯೊಂದಿಗೆ…

Read More
ಡ್ರೋನ್‌ ದಾಳಿ

Fact Check: ಇಸ್ರೇಲ್‌ನ ತೈಲ ಸಂಸ್ಕರಣಾಗಾರದ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ ನಡೆಸಿದೆ ಎಂದು ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ವೀಡಿಯೋ ಹಂಚಿಕೆ

ಇತ್ತೀಚೆಗೆ ಡ್ರೋನ್‌ ದಾಳಿಯಾಗುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಇಸ್ರೇಲಿ ತೈಲ ಸಂಸ್ಕರಣಾಗಾರದ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದೆ ಎಂದು ಡ್ರೋನ್ ದಾಳಿಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. https://twitter.com/Rizwanmalik49/status/1838177525500895678 ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಾವು ವೈರಲ್ ವೀಡಿಯೋವನ್ನು ಕೀಫ್ರೆಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್‌ನಲ್ಲಿ ಹುಡುಕಿದಾಗ ವೈರಲ್‌ ವಿಡಿಯೋವನ್ನು ಹೋಲುವ ವೀಡಿಯೋಗಳು ಮತ್ತು ವರದಿಗಳು ಲಭ್ಯವಾಗಿದ್ದು, ವರದಿಗಳ ಪ್ರಕಾರ,…

Read More
ಶ್ರೀಕೃಷ್ಣ ಕುಲಕರ್ಣಿ

Fact Check: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ

ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರಿಗೆ ಬರೆದ ಬಹಿರಂಗ ಪತ್ರ ಎಂಬ ಸಂದೇಶವೊಂದು ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಪತ್ರದಲ್ಲಿ ಶ್ರೀಕೃಷ್ಣ ಕುಲಕರ್ಣಿಯವರು “ಮೋಹನ್ ದಾಸ್ ಕರಮಚಂದ್ ಗಾಂಧಿ ನನ್ನ ಮುತ್ತಜ್ಜ. ಅವರನ್ನು ಶ್ರೀ ನಾಥೂರಾಂ ಗೋಡ್ಸೆ ಕೊಂದರು. ಅನೇಕ ತನಿಖೆಗಳು ಮತ್ತು ಆಯೋಗಗಳು ಈ ಪ್ರಕರಣವನ್ನು ಸಂಶೋಧಿಸಿವೆ. ಗಾಂಧಿ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಯಾರೂ ಸಿಲುಕಿಸಿಲ್ಲ. ಆರ್‌ಎಸ್‌ಎಸ್‌ ಮೇಲೆ ಹೊಣೆಯನ್ನೂ ಹೊರಿಸಿಲ್ಲ. ಶ್ರೀ ನಾಥೂರಾಂ ಗೋಡ್ಸೆಯನ್ನು…

Read More

Fact Check: ನಾಗಮಂಗಲ ಗಲಭೆ ಕೇಸ್​: ಪೋಲಿಸರ ಭೀತಿಯಿಂದ ಯುವಕ ಸಾವು ಎಂದು ಸುಳ್ಳು ಹರಡಿದ ಕನ್ನಡದ ಮಾಧ್ಯಮಗಳು

ಇತ್ತೀಚೆಗೆ (ಸೆ.11ರಂದು) ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಭೆ ನಡೆದು ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಅಂದು ಬುದವಾರ ಅದ್ದೂರಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ತಡರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. ಪ್ರಕರಣ ಸಂಬಂಧ ಇದುವರೆಗೆ 53 ಜನರನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಬಂಧಿತರನ್ನು…

Read More
ನ್ಯೂಡಲ್ಸ್‌

Fact Check: ನ್ಯೂಡಲ್ಸ್‌ ಮಾಡುವ ಪ್ರಕ್ರಿಯೆಯ ವೀಡಿಯೋ ಎಂದು ಸೋಪು ತಯಾರಿಸುವ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ನೂಡಲ್ ಉತ್ಪಾದನಾ ಪ್ರಕ್ರಿಯೆಯ ದೃಶ್ಯಗಳನ್ನು ತೋರಿಸುವುದಾಗಿ ಹೇಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ: “దేవుడా! నిజంగా బయట నూడుల్స్ ఇలానే తయారు చేస్తారా? మీకు తెలిస్తే కాస్త msg చేయండి ఫ్రెండ్స్… ఇలా చేస్తారు అని తెలియక చాలామంది పిల్లలు బయట తింటున్నారు” ಕನ್ನಡ ಅನುವಾದ: ದೇವರೇ! ಹೊರಗಿನ ನೂಡಲ್ಸ್ ಅನ್ನು ನಿಜವಾಗಿಯೂ ಈ ರೀತಿ ತಯಾರಿಸಲಾಗುತ್ತದೆಯೇ? ನಿಮಗೆ ತಿಳಿದಿದ್ದರೆ, ನನಗೆ ಕೆಲವು ಸಂದೇಶ ಸಂದೇಶಗಳನ್ನು ಕಳುಹಿಸಿ… ಇದನ್ನು ಮಾಡಲಾಗಿದೆ…

Read More
ವೈದ್ಯ

Fact Check: ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರೊಬ್ಬರು ‘ಕಾಳಿ’ ನೃತ್ಯ ಮಾಡಿದ್ದಾರೆ ಎಂದು ನಟಿ ಮೋಕ್ಷಾ ಸೇನ್‌ ಗುಪ್ತಾರ ವೀಡಿಯೋ ವೈರಲ್

ಕೋಲ್ಕತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸೀರೆ ಉಟ್ಟ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಕೋಲ್ಕತ್ತಾದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವೈದ್ಯರೊಬ್ಬರು ನೃತ್ಯ ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಲು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಸುಳ್ಳು ಭಾಷಣಗಳಿಗೆ ಖ್ಯಾತರಾದ  ಚಕ್ರವರ್ತಿ ಸೂಲಿಬೆಲೆ ಸಹ ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರೊಬ್ಬರು ಮಾಡಿದ 'ಕಾಳಿ' ನೃತ್ಯ! pic.twitter.com/6T96DJeB1w…

Read More

Fact Check: ರಿವರ್ಸ್ ಆಸ್ಮೋಸಿಸ್(RO) ನೀರಿನ ಕುರಿತ ಜಾಗೃತಿ ವೀಡಿಯೋವನ್ನು ಜಿಹಾದಿಗಳು ಹಿಂದೂಗಳನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಹಂಚಿಕೆ

ಇತ್ತೀಚೆಗೆ ದೇಶದಲ್ಲಿ ಯಾವ ಕೃತ್ಯಗಳೇ ನಡೆದರೂ ಸಹ ಅದನ್ನು ಮುಸ್ಲಿಂ ಸಮುದಾಯದವರು ಮಾಡಿದ್ದಾರೆ ಎಂದು ಆರೋಪಿಸಿ ವ್ಯವಸ್ಥಿತವಾಗಿ ಜನರನ್ನು ನಂಬಿಸಲಾಗುತ್ತಿದೆ. ಇದೇ ರೀತಿ ಈಗ ವಾಟರ್ ಫ್ಯೂರಿಫೈರ್ ಮಾರಾಟಗಾರನ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಹಿಂದುಗಳನ್ನು ಎಲ್ಲಾ ರಂಗದಲ್ಲೂ ಕೊಲ್ಲಲು ಜಿಹಾದಿಗಳು ಯೋಜನೆ ರೂಪಿಸಿಕೊಂಡಿದ್ದಾರೆ. ಎಲ್ಲಾ ಹಿಂದು ಬಾಂಧವರಲ್ಲಿ ನನ್ನ ವಿನಂತಿ ಮುಸ್ಲಿಮರ ಅಂಗಡಿಗಳಲ್ಲಿ ದಯವಿಟ್ಟು ಯಾವುದೇ ಕಾರಣಕ್ಕೂ ತರಕಾರಿ ಹಣ್ಣುಗಳು ಹಾಲು ಮತ್ತು ಹೋಟೆಲ್ ಗಳಲ್ಲಿ ಜ್ಯೂಸ್ ಮತ್ತು ಇತರೆ ಆಹಾರ ಯಾವುದೇ ಕಾರಣಕ್ಕೂ…

Read More
100 ರೂಪಾಯಿ

Fact Check: 100 ರೂಪಾಯಿಯ ಹೊಸ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ ಎಂಬುದು ಸುಳ್ಳು

ಇಂದು ಮಧ್ಯರಾತ್ರಿಯಿಂದ 100 ರೂಪಾಯಿ ನೋಟುಗಳನ್ನು ನಿಷೇಧಿಸಲಾಗುವುದು ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದಾಗ್ಯೂ, ಪೋಸ್ಟ್ ನಿರ್ದಿಷ್ಟ ದಿನಾಂಕವನ್ನು ಉಲ್ಲೇಖಿಸಲು ವಿಫಲವಾಗಿದೆ, ಮತ್ತು ವ್ಯಾಪಕ ಗೊಂದಲಕ್ಕೆ ಕಾರಣವಾಗಿದೆ. ಹಿಂದಿಯಲ್ಲಿ ಈ ಹೇಳಿಕೆ ಹೀಗಿದೆ: “आज रात 12 बजे 100 का नोट बंद हो जायेगा. जल्दी से अपने दोस्तों को शेयर करो” (ಇಂಗ್ಲಿಷ್ ಅನುವಾದ: “ಇಂದು ರಾತ್ರಿ 12 ಗಂಟೆಗೆ 100 ರೂಪಾಯಿ ನೋಟುಗಳನ್ನು ನಿಷೇಧಿಸಲಾಗುವುದು. ಇದನ್ನು ನಿಮ್ಮ ಸ್ನೇಹಿತರೊಂದಿಗೆ…

Read More
ಮುಸ್ಲಿಂ

Fact Check: ಮುಸ್ಲಿಮರು ಹೆಚ್ಚಿರುವ ಪ್ರದೇಶದಿಂದ ಹಿಂದೂಗಳು ಜಾಗ ಖಾಲಿ ಮಾಡಬೇಕೆಂಬ ಬ್ಯಾನರ್‌ ಹಾಕಿರುವುದು ಉತ್ತರ ಪ್ರದೇಶದಲ್ಲಿ

ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಹೇಳಿದ್ದಾರೆ ಎಂಬಂತೆ ಹೇಳಿಕೆಯೊಂದರ ಪೋಸ್ಟರ್‌ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಭಾರತದ ಉತ್ತರ ಪ್ರದೇಶ, ಬಂಗಾಲ, ಕೇರಳ, ಹೈದರಾಬಾದ, ಆಸ್ಸಾಮ ರಾಜ್ಯಗಳಲ್ಲಿ ನಾವು ಮುಸಲ್ಮಾನರು ಬಹುಸಂಖ್ಯಾಕರಾಗಿದ್ದೇವೆ. ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ. ಆದ್ದರಿಂದ ಹಿಂದೂಗಳು ಈ ಪ್ರದೇಶವನ್ನು ತಕ್ಷಣ ಖಾಲಿ ಮಾಡಬೇಕು….

Read More