Likith Rai

Fact Check | ಇಂದಿರಾ ಗಾಂಧಿ JNU ನುಗ್ಗಿ ಸೀತಾರಾಮ್‌ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿದ್ದರು ಎಂಬುದು ಸುಳ್ಳು

“1975, ತುರ್ತು ಪರಿಸ್ಥಿತಿ. ಇಂದಿರಾಗಾಂಧಿ ದೆಹಲಿ ಪೊಲೀಸರೊಂದಿಗೆ ಜೆಎನ್‌ಯುಗೆ ಪ್ರವೇಶಿಸಿದರು ಮತ್ತು ಆ ಸಮಯದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿದರು. ಇದರ ಜೊತೆಗೆ ಅಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಅವರನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸಿದರು. ಇದು ಇಂದಿರಾ ಗಾಂಧಿ ಅವರ ನಿಜವಾದ ಸರ್ವಾಧಿಕಾರ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. @KarunaGopal1 @ShainaNC @smritiirani @TVMohandasPai @narendramodi @fayedsouza @ShivAroor @amitmalviya @RahulGandhi @SachinPilot…

Read More

Fact Check | ವಂದೇ ಭಾರತ್ ರೈಲಿನ ಗಾಜು ಒಡೆದವರು ಮುಸ್ಲಿಂ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಂದೇ ಭಾರತ್ ರೈಲಿನ ಗಾಜನ್ನು ಒಡೆಯುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋವನ್ನು ಹಂಚಿಕೊಂಡು ” ಈ ಜಿಹಾದಿಗಳಿಗೆ ಬುದ್ದಿ ಕಲಿಸದಿದ್ದರೇ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಇವರು ಈಗ ಗಾಜನ್ನು ಒಡೆದಿದ್ದಾರೆ. ಮುಂದೇ ಇಡೀ ರೈಲನ್ನು ಒಡೆದು ಹಾಕಬಹುದು. ಇಂತಹ ಮುಸಲ್ಮಾನನನ್ನು ನೀವು ಉಗ್ರಗಾಮಿ, ಜಿಹಾದಿ ಎನ್ನದೆ, ಇನ್ನೇನು ಹೇಳುತ್ತೀರಿ.” ಎಂಬ ರೀತಿಯ ವಿವಿಧ ಟಿಪ್ಪಣಿಗಳೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/AmitSanatani8/status/1833412490903818612 ಈ ವಿಡಿಯೋ ನೋಡಿದ ಹಲವು ಮಂದಿ ಈತ ನಿಜಕ್ಕೂ ಮುಸ್ಲಿಂ ಎಂದು ಭಾವಿಸಿ,…

Read More

Fact Check | ಕಮಲಾ ಹ್ಯಾರಿಸ್‌ ಎಕ್ಸ್‌ ( ಈ ಹಿಂದಿನ ಟ್ವಿಟರ್‌) ಅನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿಲ್ಲ

“ಈ ವಿಡಿಯೋ ನೋಡಿ ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕದ ಉಪಾಧ್ಯಕ್ಷೆ ಮತ್ತು ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಎಕ್ಸ್ ಅಂದರೆ ಈ ಹಿಂದಿನ ಟ್ವಿಟರ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ಡೆಮೊಕ್ರೆಟಿಕ್ ಪಕ್ಷ ಅಧಿಕಾರಕ್ಕೆ ಬಂದರೆ ಹೇಗೆ ಸರ್ವಾಧಿಕಾರ ನಡೆಯುತ್ತದೆ ಎಂಬುದಕ್ಕೆ ಕಮಲಾ ಅವರ ಹೇಳಿಕೆಯೇ ಉತ್ತಮ ಉದಾಹರಣೆ ಆಗಿದೆ.” ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. Kamala said she wants to shut down…

Read More

Fact Check | ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆ ಬಿರುಕು ಬಿಟ್ಟಿದೆ ಎಂಬುದು ಸುಳ್ಳು

” ನೋಡಿ ಇದು ಮೋದಿ ಸರ್ಕಾರದ ಬೃಹತ್‌ ಸಾಧನೆ ಎಂದು ಹೇಳಿಕೊಳ್ಳುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ. ಈಗ ಈ ಪ್ರತಿಮೆಯ ಪಾದಗಳಲ್ಲಿ ಬಿರುಕು ಬಿಟ್ಟಿದೆ. ಯಾವಾಗ ಬೇಕಾದರೂ ಈ ಪ್ರತಿಮೆ ಧರೆಗೆ ಉರುಳಬಹುದು. ಮೋದಿ ಸರ್ಕಾರದ ಕಳಪೆ ಕಾಮಗಾರಿಗೆ ಇದಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಸಿಗಲಾರದು. ಇವರ ರಾಜಕೀಯ ಲಾಭಕ್ಕಾಗಿ ಈಗ ದೇಶದ ಮಹಾನ್‌ ನಾಯಕನ ಪ್ರತಿಮೆ ನೆಲಕಚ್ಚುವ ಹಂತಕ್ಕೆ ಬಂದಿದೆ.” ಎಂದು ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Cracks appearing on…

Read More

Fact Check | ಮಣಿಪುರದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು

ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿಕೊಳ್ಳುತ್ತಿರುವ ಬಂಡುಕೋರರು ಹೊಡೆದುರುಳಿಸಿದ್ದಾರೆ. ಇದು ಭಾರತದ ಸೇನೆಗೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿದೆ. ಭಾರತದಲ್ಲೇ ಇದ್ದು ಭಾರತಕ್ಕೆ ದ್ರೋಹ ಬಗೆಯುವ ಈ ಜನರಿಗೆ ಏನು ಹೇಳಬೇಕು ತೋಚುತ್ತಿಲ್ಲ.” ಎಂದು ವಿಡಿಯೋವೊಂದನ್ನು ಹಲವರು ಹಂಚಿಕೊಂಡರೆ, ಇನ್ನೂ ಕೆಲವರು ಮಣಿಪುರದ ಮುಕ್ತಿಜೋಧಾ ಸಂಘಟನೆ ಭಾರತದ ಸೇನಾ ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. 🚨🚨🚨#Indian fighter helicopter shot down by guided missile in #Manipur pic.twitter.com/JDo33x01FK…

Read More

Fact Check | ಮೀಸಲಾತಿ ಕುರಿತ ರಾಹುಲ್‌ ಗಾಂಧಿ ಹೇಳಿಕೆಯನ್ನು ತಿರುಚಿದ ಬಿಜೆಪಿ

“ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೇ ಬೆಂಕಿ ಇಡಲು @INCIndia ಚಿಂತನೆ ನಡೆಸಿದೆ. ಮಂದ ಬುದ್ಧಿಯ ಬಾಲಕ @RahulGandhi ಅವರು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನೇ ಕಿತ್ತು ಹಾಕುವುದಾಗಿ ದೂರದ ಅಮೆರಿಕದಲ್ಲಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ ಬಡವರು, ದೀನ ದಲಿತರು, ಶೋಷಿತರು, ಪರಿಶಿಷ್ಟರು, ಬುಡಕಟ್ಟು ಸಮುದಾಯದವರ ವಿರೋಧಿ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಇನ್ನೇನು ಬೇಕು?” ಎಂದು ಬಿಜೆಪಿ ಕರ್ನಾಟಕ ತನ್ನ ಎಕ್ಸ್‌ ( ಈ ಹಿಂದಿನ ಟ್ವಿಟರ್‌)ನಲ್ಲಿ ಎಡಿಟೆಡ್‌ ವಿಡಿಯೋದೊಂದಿಗೆ ಹಂಚಿಕೊಂಡಿದೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೇ…

Read More

Fact Check | ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳ ಕಾಲ ಚೀನಾ ಉತ್ಪನ್ನಗಳನ್ನು ಬಳಸಬೇಡಿ ಎಂದು ಹೇಳಿಲ್ಲ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ಅದರ ಪ್ರಕಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳ ಕಾಲ ವಿದೇಶಿ ವಸ್ತುಗಳನ್ನು, ವಿಶೇಷವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಖರೀದಿಸದಂತೆ ಭಾರತದ ಜನರನ್ನು ಒತ್ತಾಯಿಸಿದ್ದಾರೆ. ಈ ಪೋಸ್ಟ್‌ನ ಪ್ರಕಾರ, ಎಲ್ಲಾ ಭಾರತೀಯರು ಹೀಗೆ ಚೀನಾ ಉತ್ಪನ್ನಗಳನ್ನು ಖರೀದಿ ಮಾಡದಿದ್ದರೆ, ಭಾರತವು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವಾಗಬಹುದು ಮತ್ತು ಅದೇ ಸಮಯದೊಳಗೆ ಭಾರತೀಯ ರೂಪಾಯಿ ಮೌಲ್ಯವು 2 ರೂಪಾಯಿಗೆ ಒಂದು ಯುಎಸ್ ಡಾಲರ್‌ಗೆ ತಲುಪಬಹುದು. ಕಳೆದ ವರ್ಷ ದೀಪಾವಳಿ…

Read More

Fact Check | ಮಹಿಳಾ ಐಪಿಎಸ್‌ ಅಧಿಕಾರಿಯ ವಿಡಿಯೋ ಬಳಸಿ ಸುಳ್ಳು ಉದ್ಯೋಗ ಮಾಹಿತಿ ಹಂಚಿಕೆ

“ಈ ವಿಡಿಯೋ ನೋಡಿ ಇವರು ಮಹಿಳಾ ಐಪಿಎಸ್ ಅಧಿಕಾರಿ ಅಂಕಿತ ಶರ್ಮ.. ಇವರು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ದುಡಿಯುವಂತಹ ಉದ್ಯೋಗ ಒಂದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಪ್ರಕಾರ ಮನೆಯಲ್ಲಿಯೇ ಪೆನ್ಸಿಲ್ ಅನ್ನು ಪ್ಯಾಕ್ ಮಾಡುವ ಮೂಲಕ ತಿಂಗಳಿಗೆ ಉತ್ತಮ ಗಳಿಕೆಯನ್ನು ಕಾಣಬಹುದಾಗಿದೆ. ಇದರಿಂದ ಸಾಕಷ್ಟು ಮಂದಿ ಹಲವಾರು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಪೆನ್ಸಿಲ್ ಪ್ಯಾಕಿಂಗ್‌ ಉದ್ಯೋಗದ…

Read More

Fact Check | ನಿತೀಶ್ ಕುಮಾರ್ ಅವರು ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ!

“ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಇದೀಗ ಇದು ಎನ್‌ಡಿಎ ಮೈತ್ರಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ನಿತಿಶ್‌ ಕುಮಾರ್‌ ಅವರು ಇಂಡಿಯಾ ಮೈತ್ರಿ ಕೂಟವನ್ನು ಸೇರಬಹುದು. ಇದು ನಿತಿಶ್‌ ಕುಮಾರ್‌ ಅವರ ಅಧಿಕಾರ ದಾಹ ಎಂತಹದ್ದು ಎಂಬುದನ್ನು ಸಾಬೀತು ಮಾಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. राजनीतिक विचार, निजी संबंधों के बीच…

Read More

Fact Check | ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಗಣೇಶ ಪೂಜೆಯನ್ನು ಮಧ್ಯಂತರ ಸರ್ಕಾರ ನಿಷೇಧಿಸಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಡಾ.ಮಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಗಣೇಶ ಪೂಜೆಯನ್ನು ನಿಷೇಧಿಸಿದ್ದಾರೆ. ಇದು ಹಿಂದೂಗಳ ಮೇಲಿನ ದೌರ್ಜನ್ಯವಲ್ಲದೆ ಮತ್ತಿನ್ನೇನು?, ಬಡಪಾಯಿ ಹಿಂದೂಗಳು ಅಲ್ಪಸಂಖ್ಯಾಂತರಾಗಿರುವ ಬಾಂಗ್ಲಾದೇಶದಲ್ಲಿ ಅವರ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ.” ಎಂಬ ರೀತಿಯ ವಿವಿಧ ಟಿಪ್ಪಣಿಗಳೊಂದಿಗೆ ವಿವಿಧ ವರದಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Hello @BCCI You guys are organising Cricket series with Bangladesh But in same Bangladesh Mohammad Yunus, the head of…

Read More