Fact Check | ಮಹಾಲಕ್ಷ್ಮಿ ಕೊಲೆ ಆರೋಪಿಯನ್ನು ಮುಸ್ಲಿಂ ಎಂದು ಬಿಂಬಿಸಿ ಸುಳ್ಳು ಮಾಹಿತಿ ಹಂಚಿಕೆ
“ಅಂದು ಶ್ರದ್ಧಾಳ ಗೆಳೆಯ ಅಫ್ತಾ಼ಬ್ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದು, ಇಂದು ಬೆಂಗಳೂರಿನ ಮಹಾಲಕ್ಷ್ಮಿಯನ್ನು ಆಕೆಯ ಗೆಳೆಯ ಅಶ್ರಫ್ 32 ತುಂಡುಗಳಾಗಿ ಕತ್ತರಿಸಿದ್ದಾನೆ. ಹಿಂದೂಗಳೆ ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಮುಂದೆ ನಿಮ್ಮ ಹೆಣ್ಣು ಮಕ್ಕಳಿಗೂ ಇದೆ ರೀತಿಯ ಅನಾಹುತ ಸಂಭವಿಸಬಹುದು” ಎಂದು ಫೋಟೋವಿನ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಬಹುತೇಕರ ವಾದ ಮಹಾಲಕ್ಷ್ಮಿಯನ್ನು ಕೊಂದಿದ್ದು ಅಶ್ರಫ್ ಎಂಬುದು. ಹೀಗಾಗಿ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಅನ್ನು ನೋಡಿದ ಹಲವು ಮಂದಿ…