Fact Check | ಬಾಂಗ್ಲಾದಲ್ಲಿ ಹಿಂದೂ ವೃದ್ದನ ಹತ್ಯೆ ಎಂದು ತಪ್ಪಾಗಿ ಅವಾಮಿ ಲೀಗ್ ನಾಯಕನ ಹತ್ಯೆ ವಿಡಿಯೋ ಹಂಚಿಕೆ
“ದುರಂತ ವಿಡಿಯೋ – ಹೃದಯ ವಿದ್ರಾವಕ, ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿಯ ಭಯೋತ್ಪಾದಕರು ಒಬ್ಬ ವೃದ್ಧ ಹಿಂದೂ ವ್ಯಕ್ತಿಯನ್ನು ಹತ್ಯೆಗೈದು ಪ್ರತಿಮೆಯ ಮೇಲೆ ನೇತು ಹಾಕಿದ್ದಾರೆ. ಇಸ್ಲಾಮಿಸ್ಟ್ಗಳು ಅವನ ಸುತ್ತಲೂ ಅಲ್ಲಾ ಹು ಅಕ್ಬರ್ ಘೋಷಣೆಗಳನ್ನು ಎತ್ತುತ್ತಿರುವುದು ಕಂಡುಬಂದಿತು… ನಿಜಗುಣಾನಂದ ಸ್ವಾಮಿ ಎಲ್ಲಿ ಇದ್ದಿಯೋ ಮುಟ್ಟಾಳ. ಭಾರತದಲ್ಲಿರುವ ರೋಹಿಂಗ್ಯ ಮತ್ತು ಬಾಂಗ್ಲ ವಲಸಿಗರನ್ನು ಪಬ್ಲಿಕೆ ಓಡಿಸಬೇಕಾಗುತ್ತದೆ” ಎಂದು ಸಂಬಂಧವೇ ಇಲ್ಲದೇ ವಿಡಿಯೋವೊಂದರ ಜೊತೆ ಕೋಮು ದ್ವೇಷವನ್ನು ಹರಡುವ ಟಿಪ್ಪಣಿಯನ್ನು ವಾಟ್ಸ್ಆಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಬರಹವನ್ನು ಪರಿಶೀಲನೆ ನಡೆಸದೇ…