ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬ್ರಾಹ್ಮಣ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಬ್ರಾಹ್ಮಣರನ್ನು ಕೊಲ್ಲಲು ಕರೆ ನೀಡಿದ್ದಾನೆ. ದೇಶದಲ್ಲಿ ಬ್ರಾಹ್ಮಣರ ನರಮೇಧ ನಡೆಸಲು ಕಾಂಗ್ರೆಸ್ ಬಹುದೊಡ್ಡ ಸಂಚು ರೂಪಿಸಿದೆ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Breaking news
बहुत खूब सुरजेवाला!
वायरल वीडियो*
कांग्रेस के राज्यसभा सांसद रणदीप सुरजेवाला की विवादित वीडियो वायरल
कांग्रेस सांसद बोले : अगर आदित्यनाथ को जिंदा रखना हैं तो ब्राह्मण समाज को मारना होगासोशल मिडिया पर वायरल वीडियो से कांग्रेस के प्रति ब्राह्मण समाज में भारी रोष pic.twitter.com/5C39rNZmSW
— Col A K S Rana ( Veteran) मोदी का परिवार (@ColAKSRana2) October 6, 2024
ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಹಲವರು, ವಿಡಿಯೋಗೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸಿ “ಕಾಂಗ್ರೆಸ್ ಬರೀ ಬ್ರಾಹ್ಮಣ ವಿರೋಧಿಯಲ್ಲ ಸಮಸ್ತ ಹಿಂದೂಗಳ ವಿರೋಧಿ. ಅದು ಸುರ್ಜೇವಾಲಾ ಮಾತುಗಳಿಂದಲೇ ಸ್ಪಷ್ಟವಾಗುತ್ತಿದೆ. ಮುಂದೇ ದೇಶದಲ್ಲಿ ಬ್ರಾಹ್ಮಣರಿಗೆ ಯಾವುದೇ ತೊಂದರೆಯಾದರೂ ಅದಕ್ಕೆ ಕಾಂಗ್ರೆಸ್ ಕಾರಣವಾಗಿರಲಿದೆ” ಎಂದು ಬರೆದುಕೊಂಡು ಹಲವರು ವೈರಲ್ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
*वायरल वीडियो*
कांग्रेस के राज्यसभा सांसद रणदीप सुरजेवाला की विवादित वीडियो वायरल
*जिसमें कांग्रेस सांसद ब्राह्मण समाज को मारने की बोल रहे हैं*
*कांग्रेस के प्रति ब्राह्मण समाज में भारी रोष, विभाजनकारी चमचों चाटूकारों सावधान।* pic.twitter.com/ROccx7Jd0x— surajkant428 (@surajkant428KRT) October 3, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ 30 ಸೆಪ್ಟೆಂಬರ್ 2024 ರಂದು ಆಜ್ತಕ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ಮೂಲ ವಿಡಿಯೋವಿನ ಪೂರ್ಣ ಮಾಹಿತಿ ಲಭ್ಯವಾಗಿದೆ.
ಈ ವರದಿಯ ಪ್ರಕಾರ ಹರಿಯಾಣದ ಕೈತಾಲ್ನಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಭಾಗಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ” ಹರಿಯಾಣದ ಆಡಳಿತಾರೂಢ ಬಿಜೆಪಿ ಬ್ರಾಹ್ಮಣರ ವಿರೋಧಿಯಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸಂಪೂರ್ಣ ಬ್ರಾಹ್ಮಣ ನಾಯಕತ್ವ ಎಲ್ಲಿಗೆ ಹೋಗಿದೆ? ಹೋಗಿ ಪ್ರತಿಯೊಬ್ಬ ವ್ಯಕ್ತಿಯನ್ನು ಕೇಳಿ. ಕಾನ್ಪುರದಲ್ಲಿ ಕೇಳಿ, ಬನಾರಸ್ನಲ್ಲಿ ಕೇಳಿ. ಲಕ್ನೋನಲ್ಲಿ ಕೇಳಿ. ಮೀರತ್ನಲ್ಲಿ ಕೇಳಿ. ಯೋಗಿ ಆದಿತ್ಯನಾಥ್ ಪ್ರತಿ ವ್ಯಕ್ತಿಯನ್ನು ಆಯ್ದು ಕೊಂದಿದ್ದಾರೆ. ಬಿಜೆಪಿಯವರು ಪ್ರತಿಯೊಬ್ಬ ವ್ಯಕ್ತಿಯನ್ನು ಆಯ್ದು ಗುರುತು ಹಾಕುವ ಮೂಲಕ ತಿರಸ್ಕರಿಸಿದ್ದಾರೆ. ಒಬ್ಬೊಬ್ಬರನ್ನು ಆಯ್ಕೆ ಮಾಡುವ ಮೂಲಕ ಅವರ ನಾಯಕತ್ವವನ್ನು ತೊಲಗಿಸಲಾಗಿದೆ. ಏಕೆಂದರೆ ಈ ನಾಯಕತ್ವವು ಈ ದೇಶದ ಅತಿದೊಡ್ಡ ಪ್ರಾಂತ್ಯದಿಂದ ಬಂದಿದೆ ಮತ್ತು ಅದು ಉತ್ತರ ಪ್ರದೇಶದಿಂದ ಬಂದಿದೆ ಎಂದು ಎಲ್ಲರಿಗೂ ತಿಳಿದಿದೆ, ಹಾಗಾಗಿ ಆದಿತ್ಯನಾಥ್ ಅವರನ್ನು ಜೀವಂತವಾಗಿರಿಸಬೇಕಾದರೆ ಬ್ರಾಹ್ಮಣ ಸಮುದಾಯವನ್ನು ಕೊಲ್ಲಬೇಕಾಗುತ್ತದೆ ಎಂಬುದು ಅವರ ನಿರ್ಧಾರವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ರಣದೀಪ್ ಸಿಂಗ್ ಸುರ್ಜೆವಾಲಾ ಅವರ X ಹ್ಯಾಂಡಲ್ನಲ್ಲಿ ಅವರ ಮೂಲ ಹೇಳಿಕೆಯನ್ನು ಸಹ ನಾವು ಕಂಡುಕೊಂಡಿದ್ದೇವೆ. 29 ಸೆಪ್ಟೆಂಬರ್ 2024 ರ ಈ ಪೋಸ್ಟ್ನಲ್ಲಿ, “ಹರಿಯಾಣದಲ್ಲಿ ಬ್ರಾಹ್ಮಣ ಸಮುದಾಯದ ಮೇಲೆ ದೌರ್ಜನ್ಯಗಳು ನಡೆದಿವೆ, ನಮ್ಮ ಪಕ್ಕದ ರಾಜ್ಯ ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದಲ್ಲಿ ಬ್ರಾಹ್ಮಣರ ಮೇಲೆ ದಬ್ಬಾಳಿಕೆ ಪ್ರತಿ ಜಿಲ್ಲೆಯಲ್ಲೂ ಕಥೆಯಾಗಿದೆ.” ಎಂದು ಉಲ್ಲೇಖ ಮಾಡಿರುವುದು ಕೂಡ ಕಂಡು ಬಂದಿದೆ.
भाजपा की सच्चाई ये है कि
कोई ऐसा सगा नही
जिसे बीजेपी ने ठगा नही।हरियाणा में तो ब्राह्मण समाज पर अत्याचार तो हुए ही, हमारे पड़ोसी राज्य उत्तर प्रदेश में योगी सरकार में ब्राह्मणों का उत्पीड़न हर जिले के दास्तां है। pic.twitter.com/gfJy6J9RGT
— Randeep Singh Surjewala (@rssurjewala) September 29, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ್ದಾರೆ, ಬ್ರಾಹ್ಮಣರನ್ನು ಕೊಲ್ಲಲು ಸೂಚಿಸಿದ್ದಾರೆ ಎಂಬುದೆಲ್ಲ ಸುಳ್ಳಾಗಿದೆ. ಅವರು ಉತ್ತರ ಪ್ರದೇಶ ಹಾಗೂ ಹರಿಯಾಣದಲ್ಲಿ ಹೇಗೆ ಬ್ರಾಹ್ಮಣರು ದೌರ್ಜನ್ಯಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ ಎಂಬುದುನ್ನು ಉಲ್ಲೇಖಿಸಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ.
ಇದನ್ನೂ ಓದಿ : Fact Check : ಯುಪಿ CMO ಮೇಲೆ ದಾಳಿ ಎಂದು ನೋಯ್ಡಾದ ಬಿಜೆಪಿ ನಾಯಕನನ್ನು ಥಳಿಸಲಾದ ವೀಡಿಯೊ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.