ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್ಪ್ರೆಸ್ ರೈಲು ಅಪಘಾತವು ಕನಿಷ್ಠ 10 ಜನರನ್ನು ಬಲಿ ತೆಗೆದುಕೊಂಡ ವಾರಗಳ ನಂತರ ರಾಹುಲ್ ಗಾಂಧಿಯವರು ಜುಲೈ 7 ರಂದು ಲೋಕೋ-ಪೈಲಟ್ಗಳೊಂದಿಗೆ ಸಂವಾದ ನಡೆಸಿದರು. ಆದರೆ ಈಗ ರಾಹುಲ್ ಗಾಂಧಿಯವರು ಪ್ರಚಾರ ಪಡೆಯಲು ನಕಲಿ ಲೋಕೋ ಪೈಲೆಟ್ಗಳನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವು ಬಿಜೆಪಿ ಬೆಂಬಲಿಗರು “ಲೋಕೋ ಪೈಲಟ್ ಗಳು ಎಂದು ಹೇಳಿ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಹಾಕಿರುವ ಫೋಟೋ ಪರಿಶೀಲಿಸಿದಾಗ ಅದರಲ್ಲಿ ರೈಲ್ವೆ ನೌಕರರು ಮತ್ತು ಲೋಕೋ ಪೈಲಟ್ ಗಳು ಇಲ್ಲ ಎಂದು ರೈಲ್ವೆ ದೃಢಪಡಿಸಿದೆ.. ಎಲ್ಲರೂ ವೇಷ ಹಾಕಿ ಬಂದವರು.. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತವನ್ನು ಯಾವ ರೀತಿಯಲ್ಲಾದರೂ ನಾಶಪಡಿಸುವುದು ರಾಹುಲ್ ಗಾಂಧಿಯ ಉದ್ದೇಶ ಎಂಬುವುದು ಇದರಿಂದ ಸ್ಪಷ್ಟವಾಗಿದೆ.” ಎಂಬ ಪೋಸ್ಟರ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಎಕ್ಸ್ ನಲ್ಲಿಯೂ ಸಹ ಈ ಪೋಟೋವನ್ನು ಇದೇ ಆರೋಪದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
This is the loco pilot of Rajdhani….he told that he had gone to watch the shooting…all the other actors were in loco pilot's dress…😂😂😂#BalakBuddhi #Pappu
Leader Of Puppies… pic.twitter.com/ncNIHXhUNd
— Boiled Anda 🥚🇮🇳 (@AmitLeliSlayer) July 6, 2024
ಫ್ಯಾಕ್ಟ್ ಚೆಕ್: ಈ ಕುರಿತು ನಮ್ಮ ತಂಡವು ಫ್ಯಾಕ್ಟ್ ಚೆಕ್ ನಡೆಸಿದಾಗ ರಾಹುಲ್ ಗಾಂಧಿಯವರು ಚರ್ಚೆಯಲ್ಲಿ ಭಾಗವಹಿಸಿವರು ರೈಲ್ವೆ ನೌಕರರು ಮತ್ತು ಲೋಕೋ-ಪೈಲೆಟ್ಗಳೆಂದು ತಿಳಿದು ಬಂದಿದೆ. ಆದರೆ ಅವರು ಕೇವಲ ದೆಹಲಿ ಡಿವಿಷನ್ ನ ಲೋಕೋ-ಪೈಲೆಟ್ಗಳಾಗಿರದೆ ವಿವಿಧ ಭಾಗದ ಲೋಕೋ-ಪೈಲೆಟ್ ಮತ್ತು ರೈಲ್ವೆ ನೌಕರರಾಗಿದ್ದಾರೆ. ಇನ್ನೂ ಈ ವಿವಾದದ ಕುರಿತು ಪೋಲೀಸರು FIR ದಾಖಲಿಸಿರುವ ಕುರಿತು ಸಹ ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ.
ರಾಹುಲ್ ಗಾಂಧಿಯವರು ಲೋಕೋ ಪೈಲೆಟ್ಗಳನ್ನು ಭೇಟಿ ಆಗಿ ಅವರ ಸಭೆಯ ನಂತರ, ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ದೀಪಕ್ ಕುಮಾರ್ ಅವರು ಕಾಂಗ್ರೆಸ್ ಸಂಸದರೊಂದಿಗೆ ಸಂವಹನ ನಡೆಸಿದ ಸದಸ್ಯರು “ಹೊರಗಿನವರು” ಮತ್ತು ದೆಹಲಿ ವಿಭಾಗದವರಲ್ಲ ಎಂದು ಹೇಳಿದ್ದಾರೆ. ಮತ್ತು ಕಾಂಗ್ರೆಸ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತೋರಿಸಿರುವ ಲೋಕೋ ಪೈಲಟ್ಗಳು ಮತ್ತು ಸಿಬ್ಬಂದಿ ಸದಸ್ಯರು ಬೇರೆ ವಿಭಾಗಗಳಿಂದ ಬಂದವರು ಅಥವಾ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಆದಾಗ್ಯೂ, ಸಿಪಿಆರ್ಒ ಹೇಳಿಕೆಯನ್ನು ವಿವಿಧ ಲೋಕೋ ಪೈಲಟ್ಗಳ ಸಂಘಗಳು ವಿರೋಧಿಸಿವೆ, ಫೋಟೋದಲ್ಲಿರುವ ಜನರು ನಿಜವಾಗಿಯೂ ವಿವಿಧ ರೈಲು ವಿಭಾಗಗಳ ಲೋಕೋ ಪೈಲಟ್ಗಳು ಎಂದು ಪ್ರತಿಪಾದಿಸಿದ್ದಾರೆ. ಮತ್ತು ಅವರ ಸದಸ್ಯರು ರಾಹುಲ್ ಗಾಂಧಿ ಅವರೊಂದಿಗಿನ ಸಭೆಯಲ್ಲಿ ಹಾಜರಿದ್ದರು” ಎಂದಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
“ರಾಹುಲ್ ಗಾಂಧಿ ಅವರು ದೆಹಲಿಯಿಂದ ಬಂದವರೊಂದಿಗೆ ಮಾತ್ರವಲ್ಲದೆ ವಿವಿಧ ರೈಲು ವಿಭಾಗಗಳ ಲೋಕೋ ಪೈಲಟ್ಗಳೊಂದಿಗೆ ಸಂವಾದ ನಡೆಸಿದರು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅಖಿಲ ಭಾರತ ಲೊಕೊ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್ನ ದಕ್ಷಿಣ ವಲಯದ ಅಧ್ಯಕ್ಷ ಆರ್ ಕುಮರೇಶನ್ ಸುದ್ಧಿ ಸಂಸ್ಥೆಯಾದ PTIಗೆ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ಲೋಕೋ ಪೈಲೆಟ್ಗಳ ಜೊತೆಗೆ ನಡೆಸಿದ ಸಂವಾದವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು ಈ ಕೆಳಗೆ ನೋಡಬಹುದಾಗಿದೆ.
नरेंद्र मोदी की सरकार में लोको पायलट्स के जीवन की रेल पूरी तरह पटरी से उतर चुकी है।
गर्मी से खौलते केबिन में बैठ कर लोको पायलट्स 16-16 घंटे काम करने को मजबूर हैं।
जिनके भरोसे करोड़ों ज़िंदगियां चलती हैं, उनकी अपनी ज़िन्दगी का कोई भरोसा नहीं रह गया है।
यूरिनल जैसी बेसिक… pic.twitter.com/nwiG72cBv7
— Rahul Gandhi (@RahulGandhi) July 7, 2024
ಈ ಪ್ರಕರಣವು ಗೊಂದಲಕ್ಕೆ ಕಾರಣವಾಗುತ್ತಿದ್ದಂತೆ ವಿವಾದಕ್ಕೆ ಕಾರಣವಾಗಿದೆ. ಆದರೆ ತಮ್ಮ ಸಮಸ್ಯೆಗಳನ್ನು ಎತ್ತಿ ಹಿಡಿದು ರಾಹುಲ್ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಪತ್ರ ಬರೆದಿದ್ದೇವೆ ಎಂದು ಕುಮರೇಶನ್(ಸ್ಟಾಫ್ ಅಸೋಸಿಯೇಶನ್ನ ದಕ್ಷಿಣ ವಲಯದ ಅಧ್ಯಕ್ಷ) ಹೇಳಿದ್ದಾರೆ. ಅವರು ಲೋಕೋ ಪೈಲಟ್ಗಳನ್ನು ಭೇಟಿಯಾಗಲಿದ್ದಾರೆ ಎಂದು ಶುಕ್ರವಾರ ಅವರಿಗೆ ತಿಳಿಸಲಾಯಿತು. “ನಾವು ಇಲ್ಲಿ ಸಭೆ ನಡೆಸಿದ್ದೇವೆ ಮತ್ತು ಆದ್ದರಿಂದ ವಿವಿಧ ವಿಭಾಗಗಳ ಜನರು ಇದ್ದರು. ನಾವು ರೈಲ್ವೆ ಸಚಿವರು ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ. ನಮ್ಮ ದೂರುಗಳನ್ನು ಪರಿಹರಿಸಲಾಗುವುದು ಎಂದು ನಾವು ಆಂದೋಲನವನ್ನು ಹಿಂಪಡೆದಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ,” ಎಂದು ಅವರು ತಿಳಿಸಿದ್ದಾರೆ.
ಲೊಕೊ ಪೈಲಟ್ಗಳು, ವಿಶೇಷವಾಗಿ ಗೂಡ್ಸ್ ರೈಲುಗಳನ್ನು ಓಡಿಸುವವರು ದಿನಕ್ಕೆ 14-16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಮತ್ತು ಮೂರ್ನಾಲ್ಕು ದಿನಗಳ ನಂತರ ಮನೆಗೆ ಹೋಗುತ್ತಾರೆ ಎಂದು ರಾಹುಲ್ಗೆ ನೀಡಿರುವ ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಚಾಲಕರು ಸತತ ನಾಲ್ಕಕ್ಕಿಂತ ಹೆಚ್ಚು ರಾತ್ರಿ ಕೆಲಸ ಮಾಡುತ್ತಾರೆ ಮತ್ತು ವಾರದ ವಿಶ್ರಾಂತಿ ಪಡೆಯುವ ಬದಲು ಅವರಿಗೆ 10 ದಿನಕ್ಕೊಮ್ಮೆ ವಿಶ್ರಾಂತಿ ನೀಡಲಾಗುತ್ತದೆ ಎಂದು ಲೋಕೋ ಪೈಲೆಟ್ಗಳು ತಮ್ಮ ಕಷ್ಟ ತೋಡಿಕೊಂಡಿದ್ದಾರೆ.
ಇನ್ನೂ ಪೋಲಿಸರು ಈ ಪ್ರಕರಣದ ಕುರಿತು FIR ದಾಖಲಿಸಿದ್ದಾರೆ ಎಂಬುದು ಸುಳ್ಳು. ಆದಾಗ್ಯೂ, ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಪ್ರಚೋದನೆಗಾಗಿ ಅಸ್ಸಾಂನಲ್ಲಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ. ಈ ಎಫ್ಐಆರ್ಗಳು ಗುವಾಹಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಯ ನಡುವಿನ ಘರ್ಷಣೆಗೆ ಸಂಬಂಧಿಸಿವೆಯೇ ಹೊರತು ಲೋಕೋ ಪೈಲಟ್ ಚರ್ಚೆಯ ಕಾರಣಕ್ಕಲ್ಲ.
ರೈಲ್ವೆ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಮುಚ್ಚಿಹಾಕಲು ರಾಹುಲ್ ಗಾಂಧಿಯವರು ನಕಲಿ ಲೋಕೋ-ಪೈಲೆಟ್ಗಳ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ವಿವಾದ ಸೃಷ್ಟಿಸಲಾಗಿದೆ. ಆದರೆ ನಮ್ಮ ಸಮಸ್ಯೆಗೆ ಮಾತ್ರ ರೈಲ್ವೆ ಮಂತ್ರಿಗಳು ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಲೋಕೋ-ಪೈಲೆಟ್ಗಳು ಆರೋಪಿಸಿದ್ದಾರೆ.
ಆದ್ದರಿಂದ, ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್ಪ್ರೆಸ್ ರೈಲು ಅಪಘಾತದ ನಂತರ ರಾಹುಲ್ ಗಾಂಧಿಯವರು ಲೋಕೋ-ಪೈಲೆಟ್ಗಳ ಜೊತೆಗೆ ನಡೆಸಿದ ಸಂವಾದದಲ್ಲಿ ಭಾಗವಹಿಸಿದವರು ರೈಲ್ವೆ ನೌಕರರು ಮತ್ತು ಲೋಕೋ ಪೈಲೆಟ್ಗಳಲ್ಲ ಎಂದು ಸಾಬೀತು ಪಡಿಸಲು ಯಾವುದೇ ಪುರಾವೆಗಳಿಲ್ಲ.
ಇದನ್ನು ಓದಿ: ತೆಲಂಗಾಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಆಹಾರಕ್ಕೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬುದು ಸುಳ್ಳು
ವೀಡಿಯೋ ನೋಡಿ: ಪಾಕಿಸ್ತಾನ ಸೈನಿಕರು ಹಿಂದೂ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.