ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ(8 ಜುಲೈ, 2024) ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದ ನಂತರ ಇದು ಈಶಾನ್ಯ ರಾಜ್ಯಕ್ಕೆ ಅವರ ಮೂರನೇ ಭೇಟಿಯಾಗಿದೆ.
ರಾಹುಲ್ ಗಾಂಧಿಯವರು ಇಂಫಾಲ, ಜಿರಿಬಾಮ್ ಮತ್ತು ಚುರಚಂದಪುರಕ್ಕೆ ಭೇಟಿ ನೀಡಿದ್ದು ಅಲ್ಲಿನ ಸಾಮಾನ್ಯ ಜನರಿಂದ ಸ್ವಾಗತಿಸಲ್ಪಟ್ಟಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಎರಡೂ ಕಡೆಯ ಆಂತರಿಕವಾಗಿ ಸ್ಥಳಾಂತರಗೊಂಡ ಮೇಟಿ ಮತ್ತು ಕುಕಿ-ಜೋ ಬುಡಕಟ್ಟು ಸಮುದಾಯದ ಜನರೊಂದಿಗೆ ಸಂವಾದ ನಡೆಸಿದರು, ಮತ್ತು ಅವರು ಮಣಿಪುರಕ್ಕೆ “ಅವರ ಸಹೋದರನಾಗಿ ಬಂದಿದ್ದೇನೆ ಮತ್ತು ಇಲ್ಲಿ ಶಾಂತಿಯನ್ನು ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ” ಎಂದು ಹೇಳಿದ್ದಾರೆ.
ಆದರೆ ಕೆಲವರು ಮಣಿಪುರದ ಭೇಟಿಯ ವೇಳೆ “ರಾಹುಲ್ ಗಾಂಧಿ ಗೋ ಬ್ಯಾಕ್” ಎಂದು ಪ್ರತಿಭಟನೆ ಮಾಡಿದ್ದಾರೆ. ಮಣಿಪುರದಲ್ಲಿ ರಾಹುಲ್ ಗಾಂಧಿಯವರು ಎಲ್ಲಿ ಭೇಟಿ ನೀಡಿದರೂ ಇಂತಹ ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
"Go Back Rahul" slogans echo wherever Pappu went in Manipur. People know he reignites clashes in the state to help his CCP Masters.
Pidi IT Cell will call Manipuris Bhakts now 😂
Did you know the Nehru-Gandhi clan destroyed our North Eastern Hindu tribes by blocking Sadhus… pic.twitter.com/2fDNoaBf0P
— Arun Pudur (@arunpudur) July 9, 2024
ಅನೇಕರು ಈ ವೀಡಿಯೋವನ್ನು ಹಂಚಿಕೊಂಡು “ಮಣಿಪುರದಲ್ಲಿ ಪಪ್ಪು ಹೋದಲ್ಲೆಲ್ಲಾ “ಗೋ ಬ್ಯಾಕ್ ರಾಹುಲ್” ಘೋಷಣೆಗಳು ಪ್ರತಿಧ್ವನಿಸುತ್ತವೆ. ಅವರು ತಮ್ಮ CCP ಮಾಸ್ಟರ್ಗಳಿಗೆ ಸಹಾಯ ಮಾಡಲು ರಾಜ್ಯದಲ್ಲಿ ಘರ್ಷಣೆಯನ್ನು ಪುನರುಜ್ಜೀವನಗೊಳಿಸುತ್ತಾರೆ ಎಂಬುದು ಜನರಿಗೆ ತಿಳಿದಿದೆ. ನೆಹರು-ಗಾಂಧಿ ಬುಡಕಟ್ಟು ಜನಾಂಗದವರು ನಮ್ಮ ಈಶಾನ್ಯ ಹಿಂದೂ ಬುಡಕಟ್ಟುಗಳನ್ನು ನಾಶಪಡಿಸಿದರು, ಸಾಧುಗಳನ್ನು ನಿರ್ಬಂಧಿಸಿ ದಶಕಗಳ ಕಾಲ ಮಿಷನರಿಗಳಿಗೆ ಅನಿಯಮಿತ ಪ್ರವೇಶವನ್ನು ಅನುಮತಿಸಿದರು, ನೆರೆಯ ದೇಶಗಳಿಂದ ನುಸುಳಲು ನಮ್ಮ ಗಡಿಗಳನ್ನು ತೆರೆದಿಟ್ಟರು? NE ನಲ್ಲಿನ ಈ ಜನಾಂಗೀಯ ಘರ್ಷಣೆಗಳು ಎಂದಿಗೂ ಅಂತ್ಯಗೊಂಡಿಲ್ಲ. ಮೋದಿ ಸರ್ಕಾರವು ಬಹುತೇಕ ಎಲ್ಲವನ್ನೂ ಕೊನೆಗೊಳಿಸಿತು ಮತ್ತು ಮಣಿಪುರವು ಗೋಲ್ಡನ್ ಟ್ರಯಾಂಗಲ್ ಡ್ರಗ್ ರಿಂಗ್ನಿಂದ ಪ್ರಾರಂಭವಾಯಿತು. ಎಂದು ಮಣಿಪುರದಲ್ಲಿ ಈ ಹಿಂದೆ ನಡೆದ ಜನಾಂಗಿಯ ಕಲಹದಲ್ಲಿ ಮಡಿದ ಸಂಖ್ಯೆಯನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Rahul Gandhi has been asked to go back in Manipur by residents, as his inflammatory speeches would trigger into new clashes. This was Yesterday 8- 7- 2024, so he had to return. pic.twitter.com/RagdfJwW5Q
— Srinivas M N 🇮🇳 🚩 (@SrinivasMN6) July 9, 2024
ಫ್ಯಾಕ್ಟ್ಚೆಕ್: ಈ ಕುರಿತು ನಾವು ಹುಡುಕಿದಾಗ ವೈರಲ್ ಆಗುತ್ತಿರುವ ANI ವರದಿಯು ಇದೇ ವರ್ಷದ ಜನವರಿಯಲ್ಲಿ ರಾಹುಲ್ ಗಾಂಧಿಯವರು ಅಸ್ಸಾಮಿಗೆ ಭೇಟಿ ನೀಡದ ಸಂದರ್ಭದ್ದಾಗಿದ್ದು, ನೆನ್ನೆಯ ಮಣಿಪುರದ ಭೇಟಿಯದ್ದಲ್ಲ.
#WATCH | Assam: A large number of people carrying posters of 'Rahul Gandhi go back' and 'Anyaya Yatra' held a protest against Congress leader Rahul Gandhi in the Ambagan area of Nagaon this evening. pic.twitter.com/e4fFIwqFSa
— ANI (@ANI) January 21, 2024
ANI ಜನವರಿ 21, 2024 ರಂದು ಈ ವೀಡಿಯೋ ಹಂಚಿಕೊಂಡು” ಅಸ್ಸಾಂ: ‘ರಾಹುಲ್ ಗಾಂಧಿ ಗೋ ಬ್ಯಾಕ್’ ಮತ್ತು ‘ಅನ್ಯಯಾ ಯಾತ್ರೆ’ ಎಂಬ ಭಿತ್ತಿಪತ್ರಗಳನ್ನು ಹೊತ್ತ ಅಪಾರ ಸಂಖ್ಯೆಯ ಜನರು ಇಂದು ಸಂಜೆ ನಾಗಾಂವ್ನ ಅಂಬಾಗನ್ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿದರು.” ಎಂದು ವರದಿ ಮಾಡಿದೆ.
ನೆನ್ನೆ ಮಣಿಪುರಕ್ಕೆ ಮೂರನೇ ಬಾರಿ ಭೇಟಿ ನೀಡಿರುವ ರಾಹುಲ್ ಗಾಂಧಿಯವರನ್ನು ಅಲ್ಲಿನ ಸ್ಥಳೀಯ ಜನರು ಸ್ವಾಗತಿಸಿದ ವೀಡಿಯೋ ವರದಿಯನ್ನು ಅನೇಕ ಮಾಧ್ಯಮಗಳು ವರದಿ ಮಾಡಿವೆ.
ಅವರು ಬಿಜೆಪಿ ಆಡಳಿತದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೂರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು ಮತ್ತು ಹಿಂಸಾಚಾರದಿಂದ ನಿರಾಶ್ರಿತರಾದ ಎರಡೂ ಜನಾಂಗೀಯ ಗುಂಪುಗಳಿಗೆ ಸೇರಿದ ಕೈದಿಗಳೊಂದಿಗೆ ಸಂವಾದ ನಡೆಸಿದರು.
“ಪ್ರಧಾನಿ ಅವರು ಬಹಳ ಹಿಂದೆಯೇ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಅವರು ಮಣಿಪುರಕ್ಕೆ ಭೇಟಿ ನೀಡುವುದು ಮುಖ್ಯವಾಗಿದೆ. ಮಣಿಪುರಕ್ಕೆ ಬಂದು ಇಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲು ನಾನು ಅವರನ್ನು ವಿನಂತಿಸುತ್ತೇನೆ … ಇದು ಜನರಿಗೆ ಸಾಂತ್ವನ ನೀಡುತ್ತದೆ. ಕಾಂಗ್ರೆಸ್ ಏನು ಬೇಕಾದರೂ ಬೆಂಬಲಿಸಲು ಸಿದ್ಧವಾಗಿದೆ. ಪರಿಸ್ಥಿತಿಯನ್ನು ಸುಧಾರಿಸುತ್ತದೆ”
“ಸಮಸ್ಯೆ ಪ್ರಾರಂಭವಾದ ನಂತರ ನಾನು ಇಲ್ಲಿಗೆ ಬಂದಿರುವುದು ಇದು ಮೂರನೇ ಬಾರಿ. ಇದೊಂದು ಭೀಕರ ದುರಂತವಾಗಿದೆ. ನಾನು ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ನಿರೀಕ್ಷಿಸುತ್ತಿದ್ದೆ. ಆದರೆ ಪರಿಸ್ಥಿತಿ ಇನ್ನೂ ಎಲ್ಲಿಯೂ ಇರಬೇಕಾದ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ನಾನು ಸಾಕಷ್ಟು ನಿರಾಶೆಗೊಂಡಿದ್ದೇನೆ, ”ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದನ್ನು ಓದಿ: ಇತ್ತೀಚೆಗೆ ಹರಿದ್ವಾರದ ಪ್ರವಾಹ ಎಂದು 2011ರ ಜಪಾನಿನ ವಿಡಿಯೋ ತಪ್ಪಾಗಿ ಹಂಚಿಕೆ
ವೀಡಿಯೋ ನೋಡಿ: ಅರವಿಂದ್ ಕೇಜ್ರಿವಾಲ್ ಯುವಕನಾಗಿದ್ದಾಗ ಅತ್ಯಾಚಾರದ ಆರೋಪಿ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ