ಭಾರತ

Fact Check: ಗ್ವಾಟೆಮಾಲಾದಲ್ಲಿ ರಸ್ತೆಯಿಂದ ನೀರು ಹೊರಬರುವ ವೀಡಿಯೋವನ್ನು ಭಾರತದ್ದು ಎಂದು ವೈರಲ್ ಆಗಿದೆ

ಬೈಕ್‌ಗಳು ಮತ್ತು ಕಾರುಗಳು ಹಾದುಹೋಗುವಾಗ ರಸ್ತೆಯ ಬಿರುಕುಗಳ ಒಳಗಿನಿಂದ ನೀರು ಹಾರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕರು ಈ ವೀಡಿಯೋವನ್ನು ಹಂಚಿಕೊಂಡು, ಇದು ಭಾರತೀಯ ರಸ್ತೆಗಳ ಸ್ಥಿತಿ ಎಂದು ಮತ್ತು ಇಲ್ಲಿನ ತಂತ್ರಜ್ಞಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯವಾಗಿ ಟೀಕಿಸಲಾಗುತ್ತಿದೆ.   ಫ್ಯಾಕ್ಟ್‌ ಚೆಕ್: ವೈರಲ್ ವೀಡಿಯೋವನ್ನು ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಸೆಪ್ಟೆಂಬರ್ 13 ರಿಂದ ಕ್ಲೈಮಾ ಗ್ವಾಟೆಮಾಲಾ ಎಂಬ ಖಾತೆಯಿಂದ ಪೋಸ್ಟ್‌ ಒಂದು ನಮಗೆ ಲಭ್ಯವಾಗಿದ್ದು, ಹೆಚ್ಚುವರಿ ಮಳೆನೀರು ಪೆಸಿಫಿಕ್…

Read More

Fact Check : ರೋಹಿಂಗ್ಯಾ ಮುಸ್ಲಿಮರು ಭಾರತದ ಮಸೀದಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂಬುದು ಸುಳ್ಳು

ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತೀಯ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರ ಮಧ್ಯೆ ಹಿಂಸಾತ್ಮಕ ಘರ್ಷಣೆ ನಡೆಯುತ್ತಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಸ್ಟ್‌ನ “ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಆಕ್ರಮಿಸಿದ್ದಾರೆ” ಎಂಬ ಶೀರ್ಷಿಕೆಯಲ್ಲಿನ ಕೆಲವು ಹೆಸರುಗಳನ್ನು Google ಕೀವರ್ಡ್‌ ಬಳಸಿ ಹುಡುಕಿದಾಗ, ವೈರಲ್‌ ಘಟನೆಯ ಕುರಿತು ಯಾವುದೇ ಸಂಬಂಧಿತ ಸುದ್ದಿ ವರದಿಗಳು ಲಭಿಸಿಲ್ಲ. ವೈರಲ್‌ ಚಿತ್ರವನ್ನು ಕೀಫ್ರೇಮ್‌ಗಳ ರಿವರ್ಸ್ ಇಮೇಜ್‌ನಲ್ಲಿ…

Read More
ಗಣೇಶ

Fact Check : ಮುಂಬೈನಲ್ಲಿ ಗಣೇಶ ಹಬ್ಬದ ಆಚರಣೆ ಎಂದು ತಪ್ಪಾಗಿ ಸ್ಪೇನ್‌ ವೀಡಿಯೊ ಹಂಚಿಕೆ

ಮುಂಬೈನ ಲಾಲ್ ಬಾಗ್ ಗಣೇಶ ಮಂಟಪದ ಮುಂದೆ ಹಿಂದೂಗಳು ಸಂಭ್ರಮದಿಂದ ಲಯಬದ್ಧವಾಗಿ ಸಂಗೀತವನ್ನು ಹಾಡುವ ಮತ್ತು ನೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಮುಂಬೈನ ತಾಯಿ ಮುಂಬಾ ದೇವಿ ನಗರದ ಲಾಲ್ ಬಗೀಚಾ ಗಣೇಶ ಮಂಟಪದ ಮುಂಭಾಗದಲ್ಲಿ ನಮ್ಮ ಹಿಂದೂ ಆಬಾಸ್‌ನ ಗೋಪಾಲಂ ಗಾಯನ ಸಂಗೀತ ಮತ್ತು ಲಯಬದ್ಧ ನೃತ್ಯದೊಂದಿಗೆ ಭಕ್ತಿ ಭಾವ ಪರವಶತೆಯಿಂದ ನೃತ್ಯ ಮಾಡುತ್ತಾನೆ. ಇಲ್ಲಿ ಜಾತಿ, ಭಾಷೆ, ಪ್ರದೇಶ ಎಂಬ ಭೇದ ಭಾವ ಇಲ್ಲ… ಎಲ್ಲರೂ ಒಂದೇ… ಹಿಂದೂ-ಸಿಖ್‌ರ…

Read More

Fact Check | ಗಾಯಕಿ ಲತಾ ಮಂಗೇಶ್ಕರ್ ಅವರ ಕೊನೆಯ ಮಾತು ಎಂದು ಸಂಬಂಧವಿಲ್ಲದ ಬರಹಗಳ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ದೇಶದ ಹೆಮ್ಮೆಯ ಗಾಯಕಿಯರಲ್ಲಿ ಒಬ್ಬರಾದ ಲತಾ ಮಂಗೇಶ್ಕರ್‌ ಅವರ ಕೊನೆಯ ಮಾತು ಎಂದು ಬರಹವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ” ಲತಾ ಮಂಗೇಶ್ಕರ್ ಅವರ ಕೊನೆಯ ಮಾತುಗಳು, ಸಾವಿನಷ್ಟು ಸತ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಪ್ರಪಂಚದ ಅತ್ಯಂತ ದುಬಾರಿ ಬ್ರ್ಯಾಂಡ್ ಕಾರು ನನ್ನ ಗ್ಯಾರೇಜ್‌ನಲ್ಲಿ ನಿಂತಿದೆ. ಆದರೆ, ನಾನು ಗಾಲಿಕುರ್ಚಿಗೆ ಸೀಮಿತಳಾಗಿದ್ದೆ! ಎಲ್ಲಾ ವಿಭಿನ್ನ ವಿನ್ಯಾಸಗಳು ಮತ್ತು ಬಣ್ಣಗಳ ದುಬಾರಿ ಬಟ್ಟೆಗಳು, ದುಬಾರಿ ಚಪ್ಪಲಿಗಳು, ದುಬಾರಿ ಪರಿಕರಗಳು ನನ್ನ ಮನೆಯಲ್ಲಿವೆ,  ನಾನು ನನ್ನ ಬ್ಯಾಂಕ್…

Read More

Fact Check | ವಕ್ಫ್ ಕಾಯಿದೆಗೆ ತಿದ್ದುಪಡಿಗಳನ್ನು ಬೆಂಬಲಿಸಲು/ವಿರೋಧಿಸಲು ಕೇಂದ್ರ ಸರ್ಕಾರ ಯಾವುದೇ ದೂರವಾಣಿ ಸಂಖ್ಯೆ ಆರಂಭಿಸಿಲ್ಲ

“ಆತ್ಮೀಯ ಹಿಂದೂಗಳೇ ಗಮನಿಸಿ ದೇಶಾದ್ಯಂತ ಹಲವು ಕಡೆಗಳಲ್ಲಿ ಸರ್ಕಾರದ ಆಸ್ತಿಯನ್ನು ವಕ್ಫ್‌ ತನ್ನ ವಶಕ್ಕೆ ಪಡೆದಿರುವುದು ಈ ಗುಟ್ಟಾಗಿ ಉಳಿದಿಲ್ಲ. ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಮೋದಿ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಹೊಸ ಹೆಜ್ಜೆಯನ್ನು ಇಟ್ಟಿದೆ. ಇದರ ಭಾಗವಾಗಿ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿಗಳನ್ನು ಬೆಂಬಲಿಸಲು ಅಥವಾ ವಿರೋಧಿಸಲು 9209204204 ಎಂಬ ದೂರವಾಣಿ ಸಂಖ್ಯೆಯನ್ನು ಆರಂಭಿಸಿದೆ.  ವಕ್ಫ್‌ ಕಾಯಿದೆಯ ತಿದ್ದುಪಡಿಗಳಿಗೆ ಬೆಂಬಲಿಸಲು ನೀವು…

Read More

Fact Check | ಕೀನ್ಯಾದಲ್ಲಿ ಅದಾನಿ ಗ್ರೂಪ್ ಅಧಿಕಾರಿಗಳಿಗೆ ಲಂಚ ನೀಡಿದ್ದನ್ನು ಒಪ್ಪಿಕೊಂಡಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ” ಕೀನ್ಯಾದಲ್ಲಿ ವಿಮಾನ ನಿಲ್ದಾಣ ನವೀಕರಣ ಮತ್ತು ವಿದ್ಯುತ್ ಸರಬರಾಜಿಗಾಗಿ ತಮ್ಮ ಯೋಜನೆಗಳು ಕೈ ತಪ್ಪದಂತೆ ಲಂಚ ನೀಡುತ್ತಿರುವುದನ್ನು ಅದಾನಿ ಗ್ರೂಪ್ ಒಪ್ಪಿಕೊಂಡಿದೆ. ಈ ಕುರಿತು ತನ್ನ ಪತ್ರಿಕಾ ಹೇಳಿಕೆಯನ್ನು ಹೊರಡಿಸಿರುವ ಅದಾನಿ ಸಮೂಹ, ತಾವು ಯಾವೆಲ್ಲ ಅಧಿಕಾರಿಗಳಿಗೆ ಲಂಚದ ಹಣ ನೀಡಿದ್ದೇವೆ ಎಂಬುದನ್ನು ಅತೀ ಶೀಘ್ರದಲ್ಲಿ ಬಯಲು ಮಾಡಲಿದ್ದೇವೆ ಎಂದು ಹೇಳಿಕೊಂಡಿದೆ. ಇದು ಒಂದು ಕಡೆ ಕೀನ್ಯಾದಲ್ಲಿ ರಾಜಕೀಯ ತಿರುವನ್ನು ಪಡೆದುಕೊಂಡರೆ. ಮತ್ತೊಂದು ಕಡೆ ಭಾರತದಲ್ಲೂ ಅದಾನಿ ಸಮೂಹ ಎಷ್ಟು ಲಂಚ ಕೊಟ್ಟು ಕೆಲಸ…

Read More
ಆರೋಗ್ಯ ವಿಮೆ

Fact Check: ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ GST ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಿದ್ದಾರೆ ಎಂಬುದು ಸುಳ್ಳು

ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಲಾಗಿದೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ : ಈ ವೈರಲ್ ಪೋಸ್ಟರ್‌ನಲ್ಲಿನ “ಆರೋಗ್ಯ ವಿಮೆ” ಮತ್ತು “ಜಿಎಸ್‌ಟಿ ಕಡಿತ” ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡಿಕಿದಾಗ GST ಕೌನ್ಸಿಲ್‌, ಜಿಎಸ್‌ಟಿ ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಿದೆ ಎಂದು ಆದೇಶಗಳನ್ನು ಹೊರಡಿಸಿದೆ ಎಂಬ ಯಾವುದೇ ವಿಶ್ವಾಸಾರ್ಹ ವರದಿಗಳು ಲಭಿಸಿಲ್ಲ.  ಆರೋಗ್ಯ ಜೀವ ವಿಮಾ ಕಂತುಗಳ ಮೇಲಿನ 18%…

Read More

Fact Check | ವೆನೆಜುವೆಲಾದ ಪ್ರತಿಭಟನಾ ವೀಡಿಯೋವನ್ನು ದೆಹಲಿಯಲ್ಲಿ ಉಂಟಾದ ಪ್ರವಾಹ ಎಂದು ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ “ದೆಹಲಿಯಲ್ಲಿ ಭೀಕರವಾದ ಮೇಘಸ್ಪೋಟದಿಂದ ಜನರು ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಮಂದಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವ ಇದ್ದಿದ್ದರಿಂದ ಸಿಕ್ಕ ಸಿಕ್ಕ ಕಡೆಗಳಲ್ಲಿ ಓಡಿ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ. ಈ ವೇಳೆ ಕೆಲವಡೆ ಕಾಲ್ತುಳಿತ ಕೂಡ ಉಂಟಾಗಿದೆ. ಹೀಗಾಗಿ ಹಲವು ಮಂದಿ ಗಾಯಗೊಂಡಿದ್ದಾರೆ. ದೆಹಲಿ ತನ್ನ ಇತಿಹಾಸದಲ್ಲೇ ಈ ರೀತಿಯಾದ ಪ್ರವಾಹವನ್ನು ನೋಡಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕೂಡ ದಟ್ಟವಾದ ಮಂಜಿನ ರೀತಿಯ ವಾತವಾರಣ ಕಾಣಿಸಿಕೊಂಡಿದ್ದು, ಸಾಕಷ್ಟು ಮಂದಿ ಒಂದು…

Read More
ಅನಂತ್‌ ಅಂಬಾನಿ

Fact Check: ಅನಂತ್‌ ಅಂಬಾನಿಯವರ ಮದುವೆಯಲ್ಲಿ ಬಾಲಿವುಡ್‌ ಸೆಲೆಬ್ರೆಟಿಗಳಾದ ಜಾವೇದ್ ಅಖ್ತರ್‌ ಮತ್ತು ಶಬಾನಾ ಅಜ್ಮಿ ನೃತ್ಯವನ್ನು ಮಾಡಿಲ್ಲ

ಬಾಲಿವುಡ್‌ನ ಸೆಲೆಬ್ರಿಟಿಗಳಾದ ಜಾವೇದ್ ಅಖ್ತರ್‌, ಶಬಾನಾ ಅಜ್ಮಿ, ಊರ್ಮಿಳಾ ಮಾತೊಂಡ್ಕರ್‌, ಜಾವೇದ್ ಜಾಫ್ರಿ ಮತ್ತು ಇತರರು ಅನಂತ್‌ ಅಂಬಾನಿಯವರ ಮದುವೆಯ ಸಮಾರಂಭದಲ್ಲಿ ನೃತ್ಯ ಮಾಡಿದ್ದಾರೆ ಎಂಬ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಇದು ಮುಕೇಶ್ ಅಂಬಾನಿ ಅವರ ಮಗನ ಮದುವೆಯ ವಿಡಿಯೋ. ಇಸ್ಲಾಂನಲ್ಲಿ ಹಾಡುವುದು ಕುಣಿಯುವುದು ನಿಷಿದ್ಧವಾಗಿದ್ದರು ಈ ಸೆಲೆಬ್ರಿಟಿಗಳು ಮುಕೇಶ್ ಅಂಬಾನಿಯಿಂದ ಉಡುಗೊರೆ ಸಿಗಬಹುದು ಎಂಬ ಆಸೆಯಿಂದ ಅಂಟಿಲಿಯ ಮುಂದೆ ಹೇಗೆ ಕುಣಿಯುತ್ತಿದ್ದಾರೆ ನೋಡಿ. ಇದರಲ್ಲಿ ಶಿವಸೇನೆಯ ವಿಧಾನ ಪರಿಷತ್ ಸದಸ್ಯೆ ಊರ್ಮಿಳ ಮಾತೊಂಡ್ಕರ್…

Read More

Fact Check | ಲಡಾಖ್‌ನಲ್ಲಿ ‘3 ಈಡಿಯಟ್ಸ್’ ಚಿತ್ರೀಕರಿಸಲಾದ ಸ್ಥಳವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದು ಸುಳ್ಳು

ಪಂಗಾಂಗ್ ಸರೋವರದ ಭಾರತದ ಭಾಗವನ್ನು ಚೀನಾ ವಶಪಡಿಸಿಕೊಂಡಿದೆ. ಅದರಲ್ಲೂ ಭಾರತೀಯರಿಗೆ ಪರಿಚಿತವಾದ ಮತ್ತು ಅಮೀರ್ ಖಾನ್ ಅಭಿನಯದ ತ್ರಿ ಈಡಿಯಟ್ಸ್‌ನ ಸೀಕ್ವೆನ್ಸ್ ಅನ್ನು ಚಿತ್ರೀಕರಿಸಿದ ಸ್ಥಳವನ್ನು ಇತ್ತೀಚೆಗೆ ಚೀನಾ ವಶಪಡಿಸಿಕೊಂಡಿದೆ. ಆದರೆ ಈ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿ ಇಲ್ಲ. ಈಗ ಚೀನಾ ಇಲ್ಲಿ ಪ್ರವಾಸಕ್ಕೆ ಮುಕ್ತ ಅವಕಾಶವನ್ನು ಕೂಡ ಕಲ್ಪಿಸಿದೆ.” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  When 3 Idiots are ruling us…. pic.twitter.com/yXcbNpVr3q — Suby #ReleaseSanjivBhatt (@Subytweets) September…

Read More