ಮುಸ್ಲಿಂ

Fact Check: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಜಾಗೃತಿಗಾಗಿ ಮಾಡಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ತುಣುಕೊಂದು(ರೀಲ್‌) ಹರಿದಾಡುತ್ತಿದ್ದು, ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ದಂಪತಿಗಳ ನಡುವೆ ಬರುವ ಇನ್ನೊಬ್ಬ ವ್ಯಕ್ತಿ ತನ್ನ ಅಂಗಿಯನ್ನು ತೆಗೆದು ಸ್ನಾಯುಗಳನ್ನು ಪ್ರದರ್ಶಿಸುತ್ತಾನೆ. ಇದರಿಂದ ಕೋಪಗೊಂಡ ಮಹಿಳೆ ಅರೆಬೆತ್ತಲಾದ ಪುರುಷನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾಳೆ, ಅವನನ್ನು ಬಹುತೇಕ ಓಡಿಸುತ್ತಾಳೆ. ಈ ವೀಡಿಯೊವನ್ನು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಹಂಚಿಕೊಳ್ಳುವವರು ಅಂಗಿ ಇಲ್ಲದ ಪುರುಷ ಮುಸ್ಲಿಂ ಮತ್ತು ಮಹಿಳೆ ಹಿಂದೂ ಎಂದು ಪ್ರತಿಪಾದಿಸಲಾಗುತ್ತಿದೆ. ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೊ ಹಂಚಿಕೊಂಡು “ಅಬ್ದುಲ್” ತನ್ನ…

Read More

Fact Check : ಕಲ್ಲಂಗಡಿ & ಗಸಗಸೆ ಬೀಜದಿಂದ ಅಧಿಕ ರಕ್ತದೊತ್ತಡ ಗುಣವಾಗುತ್ತದೆ ಎಂಬುದು ಸುಳ್ಳು

ಕಲ್ಲಂಗಡಿ ಬೀಜಗಳು ಮತ್ತು ಗಸಗಸೆಗಳನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ, ಪುಡಿ ಮಾಡಿದ ನಂತರ ಮತ್ತು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು Instagramನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಕಲ್ಲಂಗಡಿ ಬೀಜಗಳು ಮತ್ತು ಗಸಗಸೆ ಬೀಜಗಳಲ್ಲಿ ಪೌಷ್ಟಿಕಾಂಶಗಳಿದ್ದರೂ , ಅವು ಅಧಿಕ ರಕ್ತದೊತ್ತಡ ಅಥವಾ ನಿದ್ರಾಹೀನತೆಯನ್ನು ಗುಣಪಡಿಸುತ್ತವೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ಪ್ರಸ್ತುತ, ಅಧಿಕ ರಕ್ತದೊತ್ತಡಕ್ಕೆ ಯಾವುದೇ ಚಿಕಿತ್ಸೆ ಇಲ್ಲ….

Read More
ವಕ್ಫ್

Fact Check: ಇಸ್ಲಾಮಿಕ್ ರಾಷ್ಟ್ರಗಳು ವಕ್ಫ್ ಆಸ್ತಿಯನ್ನು ಹೊಂದಿಲ್ಲ ಎಂಬ PIB ಪ್ರತಿಪಾದನೆ ಸುಳ್ಳು

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8 ರಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2024 ಅನ್ನು ಪ್ರಸ್ತಾಪಿಸಿದರು. ಈ ಮಸೂದೆಯು ವಿವಾದವನ್ನು ಹುಟ್ಟುಹಾಕಿದೆ, ಸಮುದಾಯದ ಮುಖಂಡರು, ಕಾರ್ಯಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ತಜ್ಞರು ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಬೆದರಿಕೆ ಹಾಕಬಹುದು ಎಂಬ ಆಧಾರದ ಮೇಲೆ ಟೀಕಿಸಿದ್ದಾರೆ. ವಕ್ಫ್ ಕಾಯ್ದೆಯಲ್ಲಿ ಪ್ರಸ್ತಾವಿತ ಬದಲಾವಣೆಗಳನ್ನು ಪರಿಶೀಲಿಸಲು 21 ಲೋಕಸಭಾ ಮತ್ತು 10…

Read More

Fact Check: ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧ ಬಿಜೆಪಿ ಪ್ರತಿಭಟಿಸಿದೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ

ಉತ್ತರ ಅಮೆರಿಕಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಭೀಕರ ರಾಜತಾಂತ್ರಿಕ ಕಲಹ ಉಂಟಾಗಿದೆ. ಈ ನಡುವೆ ಕೆನರಾ ಬ್ಯಾಂಕ್ ಶಾಖೆಯ ಹೊರಗೆ ಕೆನಡಾ ವಿರುದ್ದ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ ಎಂಬ ಟ್ರೋಲ್ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನ ಕೆಲವು ಬಳಕೆದಾರರು “ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರನ್ನು ಅಪಹಾಸ್ಯ ಮಾಡಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌…

Read More

Fact Check : ಗಾಜಾ ಪತ್ರಕರ್ತನ ಮೃತ ದೇಹ ಎಂದು ಎಡಿಟೆಡ್‌ ಪೋಟೊ ಹಂಚಿಕೊಳ್ಳಲಾಗುತ್ತಿದೆ

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ನಡುವೆ ಗಾಜಾದ ಪತ್ರಕರ್ತನ ಮೃತ ದೇಹದ ಚಿತ್ರವೊಂದು ದೊರೆತಿದೆ ಎಂದು ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕೊನೆಯೂಸಿರು ಕೂಡ ಗಾಜಾದಲ್ಲಿ ತುಳಿತಕ್ಕೊಳಗಾದವರ ಧ್ವನಿಯನ್ನು ಎತ್ತಿಹಿಡಿದಂತೆ ಇತ್ತು.” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರು ಪೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಟೊ AI (Artificial intelligence) ನಿಂದ ರಚಿಸಲ್ಪಟ್ಟಿದೆ. ಈ ವೈರಲ್‌ ಪೋಟೊವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,  ಪೋಟೊದಲ್ಲಿ ಮನುಷ್ಯ ಧರಿಸಿರುವ ಉಡುಪಿನ ಮೇಲೆ “ಪ್ರೆಸ್” ಎಂಬ ಪದವು ವಿರೂಪಗೊಂಡಂತೆ…

Read More

Fact Check : ಸ್ವಯಂ ಚಾಲಿತ ಕಾರು ಹೊತ್ತಿ ಉರಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ

ಹೊತ್ತಿ ಉರಿಯುತ್ತಿರುವ ಕಾರೊಂದು ಚಲಿಸುತ್ತಾ ಮುಂದೆ ಬರುತ್ತಿರುವ ಮತ್ತು ಏಕಾಏಕಿ ಕಾರು ಚಲಿಸಿದ್ದರಿಂದ ಭಯಭೀತರಾದ ಜನರು ಚೆಲ್ಲಾಪಿಲ್ಲಿಯಾಗಿ ಓಡುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವ್ಯಂಗ್ಯಾತ್ಮಕವಾಗಿ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು “ಬೆಂಕಿ ಆರಿಸದೇ ದೂರ ನಿಂತು  ತಮಾಷೆ ನೋಡುತ್ತಿರುವವರಿಗೆ, ನನ್ನ ಬೆಂಕಿ ಆರಿಸಿ ಎಂದು ಹತ್ತಿರ ಬಂದ ಕಾರು….” ಎಂದು ಹಂಚಿಕೊಂಡಿದ್ದಾರೆ. ಇದಲ್ಲದೇ ದೇಶದ ವಿವಿಧ ನಗರಗಳನ್ನು ಹೆಸರಿಸಿ ಈ ಘಟನೆ ನಡೆದಿದೆ ಎಂದು ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಕಾರು…

Read More

Fact Check : ರತನ್‌ ಟಾಟಾ ಕಾಣಿಸಿಕೊಂಡ ಅಂತಿಮ ವಿಡಿಯೋ ಎಂದು ಜೂನ್ ತಿಂಗಳ ವಿಡಿಯೋ ಹಂಚಿಕೆ

ರತನ್ ಟಾಟಾ ವಾಕರ್ ಸಹಾಯದಿಂದ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಇದು ರತನ್ ಟಾಟಾರವರ ಅಂತಿಮ ವಿಡಿಯೋ, ಈ ವಿಡಿಯೋ ನಂತರ ಯಾರೂ ಅವರನ್ನು ನೋಡಿಲ್ಲ!”  ಎಂದು ಅವರ ಸಾವಿನ ನಂತರ ಅನೇಕ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವಿಡಿಯೋ ಕುರಿತು ನಿಜವನ್ನು ತಿಳಿದುಕೊಳ್ಳಲು, Googleನಲ್ಲಿ ಹುಡುಕಾಟ ನಡೆಸಿದಾಗ, 2024ರ ಜೂನ್ 21ರ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪಲ್ಲವ್ ಪಾಲಿವಾಲ್ ಎಂಬ ಹೆಸರು ಕಂಡುಬಂದಿದೆ. ಆ…

Read More
ದೇವೇಂದ್ರ ಫಡ್ನವೀಸ್

Fact Check: ದೇವೇಂದ್ರ ಫಡ್ನವೀಸ್ ಬಂದೂಕು ಹಿಡಿದಿರುವ ಹಳೆಯ ಪೋಸ್ಟರ್ ಅನ್ನು ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಅವರ ಆದೇಶದ ಮೇರೆಗೆ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಅವರನ್ನು ಕಳೆದ ವಾರ ಅಕ್ಟೋಬರ್ 12 ರಂದು ಮುಂಬೈನ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಕೊಂದ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರನ್ನು ಒಳಗೊಂಡ ಪೋಸ್ಟರ್‌ ಒಂದರ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. “ಸೇಡು ತೀರಿಸುವಿಕೆ ಪೂರ್ಣಗೊಂಡಿದೆ” ಎಂಬ ಹಿಂದಿ ಪಠ್ಯದೊಂದಿಗೆ…

Read More

Fact Check : ದುರ್ಗಾ ಮಾತಾ ಆರತಿಯ ವೇಳೆ ಇಸ್ಲಾಮೀ ಘೋಷಣೆ ಕೂಗಲಾಗಿದೆ ಎಂದು ಟಿಎಂಸಿ ರ್ಯಾಲಿಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಕಾರ್ಯಕ್ರಮದ ಸಂದರ್ಭದಲ್ಲಿ ದುರ್ಗಾ ಮಾತೆಯ ಆರತಿಯ ವೇಳೇ, ಗಾಯಕನೊಬ್ಬ ಇಸ್ಲಾಮೀ ಘೋಷಣೆ ಕೂಗಿದ್ದಾನೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. “ಇದು ಪಶ್ಚಿಮ ಬಂಗಾಳ, ನವರಾತ್ರಿಯಲ್ಲಿ ನಿಮ್ಮದೇ ಸ್ಥಳದಲ್ಲಿ ಮಾತಾ ರಾಣಿಯ ಆರತಿಯನ್ನು ಈ ರೀತಿಯಲ್ಲಿ (ಇಸ್ಲಾಮಿ ಘೋಷಣೆಯೊಂದಿಗೆ) ಮಾಡಬೇಕೆಂದು ನೀವು ಬಯಸಿದರೆ, ನೀವು ಬಿಜೆಪಿಯನ್ನು ಹೊರತುಪಡಿಸಿ ಯಾರಿಗಾದರೂ ಮತ ಹಾಕಬಹುದು. ತೀರ್ಮಾನ ನಿಮ್ಮದು” ಎಂಬ ಹಿಂದಿಯಲ್ಲಿ ಸಂದೇಶ ದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. (*ये पश्चिम बंगाल है, यदि आप भी…

Read More

Fact Check | ಮಣಿಪುರದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಿಂದ ಕ್ರಿಶ್ಚಿಯನ್ ಮಹಿಳೆಯ ಮೇಲೆ ಹಲ್ಲೆ ನಡೆದಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಣಿಪುರದಲ್ಲಿನ ಗಲಭೆಯಲ್ಲಿ ಕ್ರೈಸ್ತರ ಮಾರಣಹೋಮ ನಡೆಯುತ್ತಿದೆ. ಅವರ ರಕ್ಷಣೆಗೆ ಯಾರು ಧಾವಿಸುತ್ತಿಲ್ಲ. ಈಗಾಗಲೇ ಸಾವಿರಾರು ಕ್ರೈಸ್ತರು ಮಣಿಪುರದಲ್ಲಿನ ಸಶಸ್ತ್ರ ಪಡೆಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈಗ ಅಮಾಯಕ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು, ಇದೇ ಸಶಸ್ತ್ರ ಪಡೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಈ‌ ಮೂಲಕ ಈಗ ಅಲ್ಲಿ ಉಳಿದಿರುವ ಕೆಲವೇ ಕೆಲವು ಕ್ರೈಸ್ತರಲ್ಲೂ ಭಯದ ವಾತಾವರಣವನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರನ್ನು ಥಳಿಸುತ್ತಿರುವುದು ಮತ್ತು ತನ್ನನ್ನು ಹೊಡೆಯದಂತೆ ಮಹಿಳೆ ಅಂಗಲಾಚುತ್ತಿರುವುದನ್ನು…

Read More