Fact Check | IUML ಪಕ್ಷದ ಕಚೇರಿಯ ಚಿತ್ರವನ್ನು ವಯನಾಡ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ಸುಳ್ಳು ಮಾಹಿತಿ ಹಂಚಿಕೆ

“ಇಲ್ಲ ಇದು ಪಾಕಿಸ್ತಾನವಲ್ಲ.. ಹೀಗೆ ಯೋಚಿಸುವುದೇ ಮಹಾಪಾಪ.. ಇದು ವಯನಾಡಿನ ಕಾಂಗ್ರೆಸ್‌ ಕಛೇರಿ, ಅಲ್ಲಿಂದ ರಾಹುಲ್‌ ಗಾಂಧಿ ಸಂಸದರಾಗಿದ್ದಾರೆ.. ಇದನ್ನು ನೋಡಿ ಜಾತ್ಯಾತೀತತೆಯ ಕವಚ ತೊಟ್ಟಿರುವ ಹಿಂದೂಗಳಿಗಾದರೂ ಬುದ್ದಿ ಬರಬೇಕು..” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. pic.twitter.com/EP5L1fZxj3 — मानव मानव (@rLeN2TlCJWGutpd) April 20, 2021 ಈ ಫೋಟೋವನ್ನು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಜನ ಇದನ್ನೇ ನಿಜ ಎಂದು ನಂಬಿಕೊಂಡು ಕಾಂಗ್ರೆಸ್‌ ಮುಸ್ಲಿಂ ಓಲೈಕೆಯ ರಾಜಕಾರಣ ಮಾಡುತ್ತಿದೆ…

Read More
ದೇವೆಗೌಡ

Fact Check: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು

ಮೈಸೂರು ಲೋಕಸಭಾ ಬಿಜಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಪ್ರಚಾರ ನಡೆಸಲು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿ ಮಾತನಾಡಿದ್ದಾರೆ ಮತ್ತು ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಪ್ರಧಾನಿ ಮೋದಿಯವರು ರ್ಯಾಲಿ ನಡೆಸಿದ್ದಾರೆ. ಈಗ ಮೈಸೂರಿನ ಸಭೆಯಲ್ಲಿ ಎಚ್.ಡಿ ದೇವೇಗೌಡರು ಮಾತನಾಡಿರುವ ಮಾತುಗಳು ಸಾಕಷ್ಟು ವೈರಲ್ ಆಗುತ್ತಿದೆ. “ಮೈಸೂರಿಗೆ ಪ್ರಚಾರಕ್ಕೆಂದು ಆಗಮಿಸಿದ ನರೇಂದ್ರ ಮೋದಿಯವರ ಪಕ್ಕವೇ ಕೂತು ಮಾಜಿ ಪ್ರಧಾನಿ ದೇವೇಗೌಡರು ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಲೇಬೇಕು ಎಂದಿದ್ದಾರೆ….

Read More