ಅಂಗನವಾಡಿ

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಗೊತ್ತಿರಬೇಕೆಂಬ ಆದೇಶ ಹಿಂದಿನ ಬಿಜೆಪಿ ಸರ್ಕಾರದ್ದು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ‘ಉರ್ದು ಭಾಷೆ’ ಗೊತ್ತಿರುವುದನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಆರೋಪಿಸುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮನೆಹಾಳು ಸರ್ಕಾರದ ಮತ್ತೊಂದು ಆದೇಶ * ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕೇವಲ ಉರ್ದು ಗೊತ್ತಿರೋರು ಅರ್ಜಿ ಹಾಕಬೇಕಂತೆ ? ಅಲ್ಲಿಗೆ ಮತ್ತೊಂದು ಕನ್ನಡದ ಕಗ್ಗೊಲೆ. ಅಂಗನವಾಡಿ ಕೆಲಸಕ್ಕೆ ಅರ್ಜಿ ಹಾಕಿರುವರು ಅತ್ಯಂತ ಕಡುಬಡವ ಹೆಣ್ಣುಮಕ್ಕಳು.. ತನ್ನ ಕುಟುಂಬಕ್ಕೆ ಒಂದೊತ್ತು ಅನ್ನ ಕಂಡುಕೊಳ್ಳುವವರು,,, ಅಲ್ಲಿ ಕೆಲಸಕ್ಕೆ ಕೇವಲ ಮುಸ್ಲಿಂ…

Read More
ಸಂವಿಧಾನ

Fact Check: ಸಂವಿಧಾನದ 30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ ಧರ್ಮವನ್ನು ಬೋಧಿಸಲು ಅವಕಾಶವಿಲ್ಲ ಎಂಬುದು ಸುಳ್ಳು

ಇತ್ತೀಚೆಗೆ ನಮ್ಮ ಭಾರತದ ಸಂವಿಧಾನವನ್ನು ತಪ್ಪಾಗಿ ಅರ್ಥೈಸುವ ಮೂಲಕ ಸಂವಿಧಾನಕ್ಕೆ ಅಗೌರವ ತರುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ “ಮೋದಿಯ ಎರಡನೇ ಹೊಡೆತ ಬರಲಿದೆ, 30-A ಕಾಯಿದೆಯನ್ನು ರದ್ದುಗೊಳಿಸಬಹುದು. ನೆಹರೂ ಅವರು ಹಿಂದೂಗಳಿಗೆ ಮಾಡಿದ ದ್ರೋಹವನ್ನು ಸರಿಪಡಿಸಲು ಮೋದಿ ಜಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಸಂವಿಧಾನದ  30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ “ಹಿಂದೂ ಧರ್ಮ” ವನ್ನು ಕಲಿಸಲು/ಬೋಧಿಸಲು ಅವಕಾಶವಿಲ್ಲ. “ಕಾನೂನು 30″ ರ ಪ್ರಕಾರ ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್,…

Read More

Fact Check | ವಂದೇ ಭಾರತ್‌ ಹೆಸರಿನಲ್ಲಿ ಯಾವುದೇ ಬಸ್‌ ಸಂಚಾರ ಆರಂಭವಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಬನಾರಸ್‌ನಿಂದ ಗಾಜಿಪುರಕ್ಕೆ ವಂದೇ ಭಾರತ್ ಬಸ್‌ ಸಂಚಾರ ಆರಂಭವಾಗಿದೆ. ಅದರ ಮೊದಲು ಚಿತ್ರ ಇದು ಎಲ್ಲಾರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದು, ಇದು ನಿಜವಾದ ಬಸ್‌ ಎಂದು ನಂಬಿಕೊಂಡಿದ್ದಾರೆ. ಈ ವಂದೇ ಭಾರತ್‌ ಬಸ್‌ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಟೋವನ್ನು ಗಮನಿಸಿದಾಗ, ಇದರಲ್ಲಿ ವಂದೇ ಭಾರತ್‌ ರೈಲು ಮುಂಭಾಗದಿಂದ ನೋಡಲು ಹೇಗೆ ಕಾಣಿಸುತ್ತದೋ ಅದೇ ವಿನ್ಯಾಸವನ್ನ ಈ ವೈರಲ್‌ ಫೋಟೋದಲ್ಲಿರುವ ವಂದೇ ಭಾರತ್‌ ಬಸ್‌ನಲ್ಲಿ…

Read More

Fact Check: ಭಾರತ್ ನ್ಯಾಯ್ ಯಾತ್ರೆ ವೇಳೆ ಮೋದಿ ಮೋದಿ ಘೋಷಣೆಯಿಂದ ರಾಹುಲ್ ಗಾಂಧಿ ಕಿರಿಕಿರಿಯಾಗಿ ಸಿಟ್ಟಿನಿಂದ ಹೋಗಿಲ್ಲ

ಯಾತ್ರೆ ವೇಳೆ ಹಿಂದೂಗಳ ಶ್ರೀರಾಮ್ ಘೋಷಣೆಯಿಂದ ಕಿರಿಕಿರಿಯಾದ ಕೈ ಯುವರಾಜ ರಾಹುಲ್ ! ಬಸ್ ನಿಲ್ಲಿಸಿ‌ ಜನರ‌ ಗುಂಪಿನ ಮೇಲೆ‌ ಸಿಟ್ಟಿನಿಂದ ಹೋದ ಕೈ ನೇತಾರ ? 🙆 ಏಕಿಷ್ಟು ಸಿಟ್ಟು ? ಇದು ನಾಯಕನ‌ ಲಕ್ಷಣವೇ ? ಏನಿದು ಆವೇಶ ? ಇದು PM ಅಭ್ಯರ್ಥಿ ವರ್ತಿಸುವ ರೀತಿಯೇ ? ಎಂಬ ಸಂದೇಶದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ ರಾಹುಲ್…

Read More

Fact Check | ಸೌದಿ ಅರೇಬಿಯಾದ ರಾಷ್ಟ್ರೀಯ ಪಠ್ಯಕ್ರಮದಲ್ಲಿ ರಾಮಾಯಣ, ಮಹಾಭಾರತವನ್ನು ಅಳವಡಿಸಿಲ್ಲ

“ಸೌದಿ ಅರೇಬಿಯಾ ತನ್ನ ಶೈಕ್ಷಣಿಕ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಅಳವಡಿಸಿಕೊಂಡಿದೆ. ಇದಕ್ಕೆ ಸಂಬಂಧ ಪಟ್ಟಂತೆ ಸ್ಮೃತಿ ಇರಾನಿಯವರು ಸೌದಿ ಅರೇಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಸುದ್ದಿ ಎಷ್ಟು ನಿಜಾಂಶದಿಂದ ಕೂಡಿದೆ. ಈ ಸುದ್ದಿಯನ್ನ ನಂಬಬಹುದ ಅಥವಾ ನಂಬಬಾರದ ಈ ಎಲ್ಲಾ ವಿಚಾರದ ಕುರಿತಾಗಿ ಮಾಹಿತಿ ಈ ಸಂಪೂರ್ಣ ಅಂಕಣದಲ್ಲಿ ನೋಡೋಣ ಬನ್ನಿ. ಫ್ಯಾಕ್ಟ್‌ಚೆಕ್‌…

Read More

Fact Check | ಪೀರ್‌ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ರೆ, ಕೆಲವರು “ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಕೆ? ಫಿರ್‌ ಸಾಬ್‌ ದರ್ಗಾ ಆಗಿರುವ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ಮತ್ತೆ ಮೂಲ ಸ್ಥಿತಿಗೆ ಬರುವುದು ಯಾವಾಗ? ಬಸವಣ್ಣನವರಿಗೆ ನ್ಯಾಯ ಸಿಗುವುದು ಯಾವಾಗ?” ಎಂದು ಪ್ರಶ್ನಿಸಿ ಕಮೆಂಟ್‌ ಮಾಡುತ್ತಿದ್ದಾರೆ.. ಈ ಕುರಿತು…

Read More

ಅಯೋಧ್ಯೆಗೆ ತೆರಳುತ್ತಿದ್ದ ಪಟಾಕಿ ಲಾರಿ ಭಸ್ಮ ಎಂದು ಉನ್ನಾವೋ ಘಟನೆ ಹಂಚಿಕೆ

ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ತಮಿಳುನಾಡಿನಿಂದ ಪಟಾಕಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಸುಟ್ಟು ಹೋಗಿದೆ ಎಂದು ಎನ್‌ಡಿಟಿವಿ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಈ ಕುರಿತು ಗೂಗಲ್ ಕೀ ವರ್ಡ್ ಮೂಲಕ ಹುಡುಕಿದಾಗ, ಉನ್ನಾವೋ ಜಿಲ್ಲೆಯಲ್ಲಿ ಪಟಾಕಿ ಲಾರಿ ಬೆಂಕಿಗೆ ಆಹುತಿಯಾಗಿರುವ ಕುರಿತು ಅಲ್ಲಿನ ಪೊಲೀಸ್ ಇಲಾಖೆ ಹೊರಡಿಸಿದ ಪ್ರಕಟಣೆ ಕಂಡುಬಂದಿದೆ. “ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು…

Read More

ಕಾಶ್ಮೀರದ ಲಾಲ್‌ ಚೌಕ್‌ನಲ್ಲಿ ಶ್ರೀರಾಮನ ಲೇಸರ್ ಲೈಟಿಂಗ್ ಎಂದು ಡೆಹ್ರಾಡೂನ್‌ ಫೋಟೊ ಹಂಚಿಕೆ

ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ದಿನಗಳಿಂದ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜನರು ಸಹ ಇವುಗಳನ್ನೇ ಸತ್ಯವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಲೇ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಇಂತಹ ಹಲವಾರು ಸುಳ್ಳು ಸುದ್ದಿಗಳನ್ನು ಬಯಲುಗೊಳಿಸುವ ಪ್ರಯತ್ನ ಮಾಡಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು. ಇದರಂತೆ ಇತ್ತೀಚೆಗೆ “ಅವರ(ಕಾಂಗ್ರೆಸ್) ಆಳ್ವಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಹೆದರುತ್ತಿದ್ದರು. ಅದೆ ಲಾಲ್ ಚೌಕ್ ನಲ್ಲಿ ಇಂದು ಪ್ರಭು ಶ್ರೀರಾಮ ಅಜರಾಮರವಾಗಿ ನಿಂತಿದ್ದಾನೆ ಇದು ಮೋದಿಯವರ ತಾಕತ್ತು..! ಎಂಬ ವಿಡಿಯೋ…

Read More

Fact Check: ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ

ಇತ್ತೀಚೆಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರಿಂದ ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ ಎನ್ನುವಂತೆ ಬಿಂಬಿಸಲು ಅನೇಕರು ಶ್ರಮ ಪಡುತ್ತಿದ್ದಾರೆ. ಕೇವಲ ಟಿಪ್ಪು ಸುಲ್ತಾನ್ ನಡೆಸಿದ ದಾಳಿಗಳನ್ನು ಮುನ್ನಲೆಯಾಗಿಟ್ಟುಕೊಂಡು ಈ ವಾದಗಳನ್ನು ಮಂಡಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಸಹ ಟಿಪ್ಪುಸುಲ್ತಾನ್ ಪರವಾಗಿ ಮತ್ತು ವಿರೋಧಿಸಿ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಇತ್ತೀಚೆಗೆ ಸಚಿವ ರಾಜಣ್ಣನವರು ತಮ್ಮ ಭಾಷಣವೊಂದರಲ್ಲಿ “ಕೆಆರ್‌ಎಸ್‌ ಕಟ್ಟೋಕೆ ಆರಂಭಿಸಿದ್ದು ಟಿಪ್ಪು, ಅದನ್ನು ಮೈಸೂರು ಮಹಾರಾಜರು ಕೇವಲ ಮುಂದುವರೆಸಿದರು” ಎಂದಿದ್ದಾರೆ. ಈ ಹೇಳಿಕೆಯು ತೀವ್ರ ಚರ್ಚೆಗೆ ಕಾರಣವಾಗಿದ್ದು ಕೆಲವರು “KRS…

Read More

Fact Check | ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿಲ್ಲ

“ರಾಮ ಮಂದಿರ ಉದ್ಘಾಟನಾ ದಿನವಾದ ಜನವರಿ 22 ರಂದು ಬರುವ ಭಕ್ತರಿಗೆ ಊಟದ ವ್ಯವಸ್ಥೆಗೆಂದು ತೆಲುಗು ನಟ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡುತ್ತಿದ್ದಾರೆ” ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸಾಕಷ್ಟು ಮಂದಿ ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು, ಇದೇ ವೈರಲ್‌ ಪೋಸ್ಟ್‌ ಅನ್ನು ಆಧಾರವಾಗಿಟ್ಟುಕೊಂಡು ಕನ್ನಡದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ  “ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ….

Read More