ಬಿಜೆಪಿಗೆ ಮತ ನೀಡಿದ ತಪ್ಪಿಗೆ ಬೆರಳು ಕತ್ತರಿಸಿಕೊಂಡಿದ್ದಾರೆ ಎಂಬುದು ಸುಳ್ಳು
ಬಿಜೆಪಿಗೆ ಮತ ನೀಡಿದ್ದಕ್ಕಾಗಿ ಬೇಸರಗೊಂಡ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿಕೊಂಡಿದ್ದಾನೆ ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್ಚೆಕ್: ಮಹಾರಾಷ್ಟ್ರದ ಧನಂಜಯ್ ನನವಾರೆ ಎಂಬ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ಅತ್ತಿಗೆ ಆತ್ಮಹತ್ಯೆಯಿಂದ ಸಾವನ್ನಪ್ಪಿಲ್ಲ. ಇದು ಕೊಲೆಯಾಗಿದೆ. ಹಾಗಾಗಿ ನ್ಯಾಯಯುತ ಪೋಲಿಸ್ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಯಾವುದೇ ತನಿಖೆ ನಡೆಸದ ಪೋಲಿಸರ ಮೇಲೆ ಸಿಟ್ಟಿಗೆದ್ದು ತನ್ನ ಬೆರಳು ಕತ್ತರಿಸಿದ್ದಾನೆ ಮತ್ತು ಪ್ರತೀವಾರ ತನ್ನ ದೇಹದ ಅಂಗಾಂಗಳನ್ನು ಕತ್ತರಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ…